ಭಾನುವಾರ, ನವೆಂಬರ್ 13

ಗರ್ಭಿಣಿ ಐಶ್ವರ್ಯಾಳೂ ಮಾಧ್ಯಮಗಳ ಪ್ರಸವ ವೇದನೆಯೂ

(ಸುಳ್ಳು ಸುಳ್ಳೇ ಸುದ್ದಿ ಮೂಲದಿಂದ)
ಮಾಜಿ ವಿಶ್ವ ಸುಂದರಿ, ಬಾಲಿವುಡ್ ತಾರೆ, ಬಾಲಿವುಡ್ ಪ್ರಥಮ (ಕುಟುಂಬದ) ಸೊಸೆ ಐಶ್ವರ್ಯಾ ರೈ ಬಚ್ಚನ್ ದಿನ ತುಂಬಿದ ಬಸುರಿಯಾಗಿದ್ದರೆ, ಇತ್ತ ಕೆಲ ಮಾಧ್ಯಮಗಳು ಹೆರಿಗೆ ಬೇನೆ ಭರಿಸಲಾಗದೇ ಒದ್ದಾಡುತ್ತಿವೆ ಎಂಬುದಾಗಿ ನಮ್ಮ ಸುಳ್ಳುಸುಳ್ಳೇ ಸುದ್ದಿ ಬ್ಯೂರೋ ತಿಳಿಸಿದೆ.

ತನ್ನ ಸೊಸೆ ಬಸುರಿ ಎಂಬುದಾಗಿ ಅಮಿತಾಭ್ ಬಚ್ಚನ್ ಟ್ವೀಟಿದಂದಿನಿಂದ ಮಾಧ್ಯಮಗಳ ಸಂಭ್ರಮ ಹೇಳಲಾಗುತ್ತಿಲ್ಲ. ಬಸುರಿ ಹೆಣ್ಣುಮಗಳು ತಪಾಸಣೆಗಾಗಿ ಯಾವ ಆಸ್ಪತ್ರೆಗೆ ಹೋದಳು, ಆಕೆಯ ಬಯಕೆ ಏನು, ಏನು ತಿಂದಳು, ಹೇಗೆ ಬಂದಳು, ಸೀಮಂತಕ್ಕೇನು ಗಮ್ಮತ್ತು, ಯಾರ್ಯಾರು ಬಂದಿದ್ದರು, ಯಾವ ಉಡುಪನ್ನು ಹೇಗೆ ದೇಹಾಕಾರಕ್ಕೆ ಸರಿಯಾಗಿ ಹೊಲಿಯಲಾಗಿದೆ, ಯಾರು ವಿನ್ಯಾಸಗೊಳಿಸಿದ್ದಾರೆ ಎಂಬ ತನಿಖಾ ಸುದ್ದಿಗಳು ಮಾಧ್ಯಮಗಳ ಗರಿಷ್ಠ ಜಾಗ ತಿಂದಿವೆ.


ಈ ಮಧ್ಯೆ ಹೆಚ್ಚಿನೆಲ್ಲಾ ಪತ್ರಿಕೆಗಳ ಸುದ್ದಿ ಸಂಪಾದಕರು ತಮ್ಮೆಲ್ಲ ವರದಿಗಾರರಿಗೆ ಐಶ್ವರ್ಯಾ ಬಸುರು, ಹೆರಿಗೆ, ಬಾಣಂತನಗಳಿಗೆ ಸಂಭಂದಿಸಿದಂತೆ ಯಾವುದೇ ಸುದ್ದಿ ಮಿಸ್ ಆಗಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬೆಲೆ ಏರಿಕೆ, ಹಸಿವು, ಬಡತನ, ಶಿಶುಮರಣ, ಬಡವ - ಬಲ್ಲಿದರ ನಡುವೆ ಹೆಚ್ಚುತ್ತಿರುವ ಅಂತರ ಮುಂತಾದ ಸುದ್ಧಿಗಳು ಯಾವಾಗಲೂ ಇರುವಂತಹುದೇ ಆಗಿದ್ದು ಈ ಕುರಿತು ಯಾವಾಗ ಬೇಕಿದ್ದರೂ ವರದಿ ಮಾಡಬಹುದಾಗಿರುವ ಕಾರಣ
ಸುದ್ದಿಗಾರರೂ ಸಹ, ಐಶ್ವರ್ಯಾ ಹೆರಿಗೆಯ ಕುರಿತೇ ಗಮನ ಕೇಂದ್ರೀಕರಿಸಲು ಟೊಂಕ ಕಟ್ಟಿದ್ದಾರೆಂಬುದಾಗಿ ಕಾರ್ಯಮರೆತ ಪತ್ರಕರ್ತರ ಸಂಘದ ಅನಧಿಕೃತ ಮೂಲಗಳು ತಿಳಿಸಿವೆ. ಯಾಕೆಂದರೆ ಐಶ್ವರ್ಯಾ ಬಸಿರು, ಬಾಣಂತನಗಳು ಅಪರೂಪದಲ್ಲಿ ಅಪರೂಪದ ಪ್ರಸಂಗವಾಗಿದ್ದು ಈ ಕುರಿತು ನಿರ್ಲಕ್ಷ್ಯ ವಹಿಸಲು ಛಾನ್ಸೇ ಇಲ್ಲ ಎಂದು ಅವೇ ಮೂಲಗಳು ಸ್ಪಷ್ಟ ಪಡಿಸಿವೆ.
 

ಅದಾಗ್ಯೂ, ಐಶ್ವರ್ಯಾ 11.11.11 ರಂದೇ 11.11ಕ್ಕೇ ಪ್ರಸವಿಸಲಿದ್ದಾರೆ ಎಂಬುದಾಗಿ ನಂಬಿದ್ದವರಿಗೆ ಇಂತಹ ಯಾವುದೇ ಅಧಿಕೃತ ಸುದ್ದಿ ಇಲ್ಲದೆ ಪ್ರಸವ ವೇದನೆ ಆರಂಭವಾಗಿದೆ. ಆದರೂ ಸಹ ಐಶ್ವರ್ಯಾಳ ಬಯಕೆ ಏನು ಅದನ್ನು ತೀರಿಸಲು ಅಭಿಷೇಕ್ ಬಚ್ಚನ್ ಎಲ್ಲೆಲ್ಲ ಓಡಾಡಿದರು ಎಂಬ ಕುರಿತು ಓದುಗರ ಕುತೂಹಲ ತಣಿಸಲು ಪಾವ್ ಬಾಜಿಗೆ ಹಿಂಡಿದ ನಿಂಬೆ ಹಣ್ಣಿನ ಒಂದು ಹೋಳೂ ಮಿಸ್ಸಾಗದಂತೆ ವರದಿ ಮಾಡಿ ಭೇಷ್ ಅನ್ನಿಸಿಕೊಂಡಿದ್ದಾರೆ. ಏತನ್ಮಧ್ಯೆ, ಐಶ್ ಹೆರಿಗೆ ಆಸ್ಪತ್ರೆಯ ನರ್ಸ್‌ಗಳ ಮುಷ್ಕರದ ಸುದ್ದಿಯೂ ತನ್ನದೇ ಆದ ತೂಕ ಗಳಿಸಿಕೊಂಡಿತು.

ಈ ಮಧ್ಯೆ, ಮಾಧ್ಯಮಗಳ ಇಂತಹ ಸುದ್ದಿ ದಾಹದಿಂದ ರೇಜಿಗೆ ಹುಟ್ಟಿರುವ ಬಚ್ಚನ್ ಕುಟುಂಬವು ಐಶ್ ಪ್ರಸವವಾಗಿದ್ದರೂ ಸುದ್ದಿ ಮಾಡದೇ ತಮ್ಮ ಗೌಪ್ಯತೆ ಕಾಪಾಡಿಕೊಂಡಿದೆ ಎಂಬ ಊಹಾಪೋಹಗಳೂ ಹರಡಿವೆ ಎಂದು ಬಲ್ಲದ ಮೂಲಗಳು ಹೇಳಿವೆ.

ಇವುಗಳನ್ನೆಲ್ಲ ಓದಿಓದಿ ಐಶ್ ಭಾವಚಿತ್ರವನ್ನು ಹಾಕಿಕೊಂಡಿರುವ ಶಾನಿಯ ಡೆಸ್ಕ್ ತಾನೊಂದು ಸುದ್ದಿಮಾಡದಿದ್ದರೆ, ಚೆನ್ನಾಗಿರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು, ಸುದ್ದಿಗಳನ್ನು ಬಗೆಯುತ್ತಿರುವಾಗ ಐಶ್ ಹೆರಿಗೆಯ ನೇರ ಪ್ರಸಾರ ಕುರಿತ ಮಾಹಿತಿ ಲಭಿಸಿದ್ದು, ಆ ಖೊಟ್ಟಿ ಸುದ್ದಿಯನ್ನು ಕದ್ದು ಇಲ್ಲಿ ಸೇರಿಸಿಕೊಳ್ಳಲಾಗಿದೆ.

ಐಶ್ವರ್ಯಾ ರೈ ಬಚ್ಚನ್ ಹೆರಿಗೆ ನೇರಪ್ರಸಾರ
ಐಶ್ವರ್ಯಾ ರೈ ಬಚ್ಚನ್ ಹೆರಿಗೆ ನೇರಪ್ರಸಾರವಾಗಲಿದ್ದು ಇದರ ಹಕ್ಕನ್ನು ಹೊಸದಾಗಿ ಆರಂಭವಾಗಿರುವ ನ್ಯೂಸ್ ಒನ್ ಎಂಬ ದೂರದರ್ಶನ ವಾಹಿನಿಯು 200 ಕೋಟಿ ರೂಪಾಯಿ ತೆತ್ತು ಪಡೆದಿರುವುದಾಗಿ ವರದಿಯೊಂದರಲ್ಲಿ ಹೇಳಲಾಗಿದೆ. ಮುಂಬೈಯಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಹೆರಿಗೆಯ ನೇರಪ್ರಸಾರವಾಗಲಿದೆ ಎಂಬುದಾಗಿ ಫೇಕಿಂಗ್ ನ್ಯೂಸ್ ಎಂಬ ಅಂತರ್ಜಾಲ ಖೋಟಾ ಸುದ್ದಿ ಪತ್ರಿಕೆ ವರದಿ ಮಾಡಿದೆ. ಪ್ರಮುಖ ಟಿವಿ ವಾಹಿನಿಗಳ ಸಂಪಾದಕರುಗಳು ಕೆಲದಿನಗಳ ಹಿಂದೆ ಐಶ್ವರ್ಯಾಳ ಹೆರಿಗೆ ಕುರಿತ ಸುದ್ದಿಪ್ರಸಾರಕ್ಕೆ ಸಂಬಂಧಿಸಿದಂತೆ ಸಂಯಮ ವಹಿಸ ಬೇಕಾದ ಕುರಿತು ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಮುರಿದು ಹೊಸ ವಾಹಿನಿಯೊಂದು ನೇರ ಪ್ರಸಾರಕ್ಕೆ ಹೊರಟಿರುವುದು ಇತರೇ ವಾಹಿನಿಗಳು ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಪ್ರಪ್ರಥಮವಾಗಿ ತಮ್ಮ ವಾಹಿನಿಯಲ್ಲೇ ಐಶ್ ಪ್ರಸವದ ಬ್ರೇಕಿಂಗ್ ನ್ಯೂಸ್ ಪ್ರಕಟವಾಗಬೇಕೆಂಬ ಇರಾದೆ ಹೊಂದಿದ್ದ ಟೈಮ್ಸ್ ನೌ "ಮಗು ಜನನದ ಪ್ರಸಾರ ಹಕ್ಕುಗಳ ಬೆಲೆ ಅಧಿಕವಾಯಿತೇ" ಎಂಬ ಕುರಿತು ನ್ಯೂಸ್ ಆ....ರ್(News hour) ಡಿಬೇಟ್ ಕೈಗೊಂಡಿತು. ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಚರ್ಚಾ ವೇದಿಕೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 11ಕ್ಕೇರಿಸಿದ್ದರು ಮತ್ತು ಐಶ್ವರ್ಯಾಳ ಹೆರಿಗೆ ಹಕ್ಕುಗಳ ಮೇಲಿನ ಬೆಲೆ ನಿಜವಾಗಿಯೂ ದುಬಾರಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಈ ಅಭಿಪ್ರಾಯವನ್ನು ಡಿಬೇಟ್‌ನಲ್ಲಿ ಮಾತನಾಡಲು ಅವಕಾಶ ಸಿಕ್ಕಿದ ಮೂವರಲ್ಲಿ ಇಬ್ಬರು ಬೆಂಬಲಿಸಿದ್ದು, ಇದನ್ನು ಬಹುಸಂಖ್ಯಾತ ಆಭಿಪ್ರಾಯವೆಂದು ರೂಪಿಸಲಾಗಿದೆ.

ಎನ್‌ಡಿಟಿವಿಯು ತನ್ನ ಸಮೂಹ ಸಂಪಾದಕಿ ಬರ್ಖಾ ದತ್ ನೇತೃತ್ವದಲ್ಲಿ ನೈತಿಕ ಸಮಿತಿಯನ್ನು ರಚಿಸುವುದಾಗಿ ಮತ್ತು ಸದರೀ ಸಮಿತಿಯು ನ್ಯೂಸ್ ಒನ್ ವಾಹಿನಿಯ ನೇರಪ್ರಸಾರವು ಅನೈತಿಕವೇ ಹಾಗೂ ಈ ಹೊಸ ವಾಹಿನಿಯನ್ನು ಬಾನುಲಿ ಸಂಪಾದಕರ ಸಂಘಟನೆ (ಬಿಇಎ) ಯಿಂದ  ಅಮಾನತುಗೊಳಿಸಬೇಕೇ ಎಂಬ ಕುರಿತು ವರದಿ ಸಲ್ಲಿಸಲಿದೆ.


ಈ ಮಧ್ಯೆ ಸಿಎನ್ಎನ್-ಐಬಿಎನ್ ಪ್ರತಿಕ್ರಿಯೆ ಕುತೂಹಲಕಾರಿಯಾಗಿದೆ. ಸಾಗರಿಕಾ ಘೋಸ್ ಅವರು ತಮ್ಮ ವಾಹಿನಿಯೂ ಸಹ ಮುಂದಿನ ವರ್ಷದಲ್ಲಾದರೂ ಸಹ ಜಗದೇಕ ಸುಂದರಿ ತಾರೆಯ ಹೆರಿಗೆಯ ನೇರ ಪ್ರಸಾರ ಮಾಡಲಿದೆ ಎಂದು ಹೇಳಿದ್ದರೆ, ವಾಹಿನಿಯ ಮುಖ್ಯ ಸಂಪಾದಕ ರಾಜದೀಪ್ ಸರ್ದೇಸಾಯ್ ಅವರು ಈ ನಡೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ.

"ಸಾವಿರಾರು ಮಕ್ಕಳು ದಿನನಿತ್ಯವೆಂಬಂತೆ ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿದ್ದಾರೆ. ಈ ಕುರಿತು ಯಾವುದೇ ವರದಿ ಇಲ್ಲ. ಒಂದು ಸೆಲೆಬ್ರಿಟಿ ಮಗುವಿನ ಜನನದ ನೇರಪ್ರಸಾರ! ಇದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ, ಶುಭರಾತ್ರಿ" ಎಂಬುದಾಗಿ ತಮ್ಮ ಐದು ಶುಭರಾತ್ರಿ ಟ್ವೀಟ್‌ಗಳಲ್ಲೊಂದರಲ್ಲಿ ಹೇಳಿರುವುದಾಗಿಯೂ ಸಹ ಫೇಕಿಂಗ್ ನ್ಯೂಸ್ ಹೇಳಿದೆ.

ಪ್ರಸಾರ ಹಕ್ಕಿನ ಕುರಿತ ಬಚ್ಚನ್ ಕುಟುಂಬದ ಈ ನಿರ್ಧಾರವು  ಇತರೇ ವಾಹಿನಿಗಳಲ್ಲಿ ಅಸಮಾಧಾನ ಹುಟ್ಟಿಸಿರುವಂತೆಯೇ ಬ್ರೀಚ್ ಕ್ಯಾಂಡಿ ಆಸ್ಪತ್ರೆಯೂ ಸಹ ಮುನಿಸಿಕೊಂಡಿದ್ದು, ಪ್ರಸಾರ ಹಕ್ಕಿನ ಸ್ವಲ್ಪ ಮೊತ್ತವು ಆಸ್ಪತ್ರೆಯ ಟ್ರಸ್ಟ್‌ಗೆ ಹೋಗಬೇಕಿತ್ತು ಮತ್ತು ಈ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಬೇಕಿತ್ತೆಂಬುದು ಆಸ್ಪತ್ರೆ ಬಯಕೆಯಾಗಿತ್ತು ಎಂಬುದಾಗಿ ವರದಿ ತಿಳಿಸಿದೆ.

"ಕಾರ್ಯಕ್ರಮದಲ್ಲಿ ಇತರೇ ಸೆಲೆಬ್ರಿಟಿಗಳನ್ನು ಸೇರಿಸಿಕೊಳ್ಳಬಹುದಿತ್ತು, ಇವರು ಆಸ್ಪತ್ರೆಗೆ ಭೇಟಿ ನೀಡುವ ವೇಳೆ ರಾಷ್ಟ್ರೀಯ ದೂರದರ್ಶನದಲ್ಲಿ ಕಾಣಿಸಿಕೊಳ್ಳಬಹುದಿತ್ತು. ಇದು ಪ್ರಸಾರ ಹಕ್ಕಿನ ಮೌಲ್ಯವನ್ನು ವರ್ಧಿಸುತ್ತಿತ್ತು ಮತ್ತು ಇಂಡಸ್ಟ್ರಿಗೆ ಉತ್ತಮವಾದ ಬಿಸ್ನೆನ್ ಒದಗಿಸುತ್ತಿತ್ತು ಎಂಬದಾಗಿ ಬಾಲಿವುಡ್ ವಿಶ್ಲೇಷಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ" "ಇಷ್ಚಕ್ಕೂ ಈ ಪರಿಕಲ್ಪನೆ ಹೊಸದೇನೂ ಅಲ್ಲ" ಅಂದಿರುವ ಅವರು "ಅಮೀರ್ ಖಾನ್ ತನ್ನ ತ್ರೀ ಈಡಿಯೇಟ್ಸ್ ಚಿತ್ರದಲ್ಲಿ ಶಿಶು ಜನನದ ಕುರಿತು ವೆಬ್ ಕ್ಯಾಮ್ ಮೂಲಕ ನೇರ ಪ್ರಸಾರ ತೋರಿದ್ದರು" ಎಂಬುದಾಗಿಯೂ ಹೇಳಿದ್ದಾರೆಂದು ವರದಿ ತಿಳಿಸಿದೆ.

ಭಾನುವಾರ, ಅಕ್ಟೋಬರ್ 23

ಸದ್ದಿಲ್ಲದೆ ಕೈಲಿದ್ದ ಅವಲಕ್ಕಿಯ ಮೆದ್ದೆ

(ನನ್ನ ಪ್ರೀತಿಯ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಆಶಯಗಳು. ತಮ್ಮೆಲ್ಲರ ಬದುಕಲ್ಲಿ ನೆಮ್ಮದಿ, ಸುಖ-ಸಂತೋಷ ಸಮೃದ್ಧಿಗಳು ದೀಪಗಳ ಆವಳಿಯಂತೆ ಬೆಳಗಲಿ.)
ಒಂದು ತಿಂಗಳ ಮುಂಚಿತವಾಗಿ ಬಾಳೆ ರೆಂಬೆಗಳನ್ನು ಒಣಹಾಕುವಲ್ಲಿಂದ ಆರಂಭವಾಗುತ್ತಿತ್ತು ದೀಪಾವಳಿ ತಯ್ಯಾರಿ. ಅದಾದ ಬಳಿಕ ಕಾಡುಮೇಡು ಅಲೆದು ಎಲ್ಲಿ ಯಾವ ಹೂವು ಅರಳಿದೆ, ಹೂವಿನಂದದ ಬಳ್ಳಿ ಹೊರಳಿದೆ ಎಂಬ ಹುಡುಕಾಟ. ಇವೆಲ್ಲವನ್ನು ಮನಸ್ಸಿನಲ್ಲೇ ಗಟ್ಟಿ ಮಾಡಿಕೊಂಡು ಬಲಿಯೇಂದ್ರನನ್ನು ಹೇಗೆ ಸಿಂಗಾರಮಾಡಬೇಕು ಎಂಬ ವಾದ-ವಿವಾದ, ವಾಗ್ವಾದೊಂದಿಗೆ ಆಗಿನ ನಮ್ಮ ಬಹುದೊಡ್ಡ ಆಚರಣೆಯ ದೀಪಾವಳಿ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಕೃಷಿಕ ಕುಟುಂಬದ ನಮಗಾಗ ಹಬ್ಬ ಅಂದರೆ ಅದು ದೀಪಾವಳಿ.


ಕಾಡಿನಿಂದ ಹಾಲೆಮರವನ್ನು (ಇದನ್ನು ನಾವು ಬಲಿಯೇಂದ್ರ ಮರವೆಂದೇ ಹೇಳುವುದು) ದೀಪಾವಳಿ ಅಮವಾಸ್ಯೆಯಂದು ಬೆಳಗ್ಗೆ ಅಪ್ಪ ಕಡಿದು ತರುತ್ತಿದ್ದರು. ಅಂದು ರಾತ್ರಿ ಮರವನ್ನು ಮನೆಯೆದುರು ಅಂಗಳದಲ್ಲಿ ತುಳಸಿ ಕಟ್ಟೆಯ ಪಕ್ಕ ನೆಟ್ಟು ಪ್ರತಿಷ್ಠಾಪಿಸುವಲ್ಲಿಂದ ನಮ್ಮ ಹಬ್ಬ ಶುರು. ಈ ಮರವೇ ನಮ್ಮನಮ್ಮಗಳ ಶಕ್ತ್ಯಾನುಸಾರ, ಚಾಕಚಕ್ಯತೆಗನುಗುಣವಾಗಿ ಶೃಂಗಾರಗೊಂಡು ಬಲಿಯೇಂದ್ರನಾಗಿ ನಮ್ಮ ಮನೆ-ಮನದಂಗಳದಲ್ಲಿ ಹಬ್ಬದ ಮೂರ್ನಾಲ್ಕು ದಿನ ರಾರಾಜಿಸುತ್ತಿದ್ದುದು. ಕೆಲವು ಮನೆಗಳಲ್ಲಿ ಒಂಟಿ ಮರದ ಬಲಿಯೇಂದ್ರ. ಆದರೆ ನಮ್ಮದು ಜೋಡಿಮರಗಳ ಬಲಿಯೇಂದ್ರ. ಪುಟ್ಟದಾದ ಮರ (ಕೊಂಬೆ) ಒಂದು ದನದಹಟ್ಟಿಯ ಎದುರು. ಅದೇ ಗಾತ್ರದ ಇನ್ನೊಂದು ಮರ ಗದ್ದೆಯಲ್ಲಿ. ನೆಡುವ ಮರಗಳ ಮೇಲ್ತುದಿಯಲ್ಲಿ ರೆಂಬೆ ಒಡೆದ ಕವಲುಗಳನ್ನು ಅಲ್ಲಿ ಹಣತೆ ಕುಳಿತುಕೊಳ್ಳುವಂತೆ ಚೆನ್ನಾಗಿ ಕತ್ತರಿಸಿಯೇ ತರಲಾಗುತ್ತಿತ್ತು. ಮರದಲ್ಲಿ ಹಬ್ಬದ ಎಲ್ಲ ದಿನಗಳೂ ದೀಪ ಇರಿಸುತ್ತಿದ್ದದು ರೂಢಿ.


ಮನೆಗಳೆದುರು ಪ್ರತಿಷ್ಠಾಪನೆಗೊಳ್ಳುವ ಬಲಿಯೇಂದ್ರಗಳ ಸಿಂಗಾರದ ವಿಚಾರದಲ್ಲಿ ನಾವು ನೆರೆಹೊರೆಯ ಮಕ್ಕಳಲ್ಲಿ ಅಘೋಷಿತ ಸ್ಫರ್ಧೆ. ಎಲ್ಲ ಮನೆಗಳಲ್ಲೂ ಬಲಿಯೇಂದ್ರನ ಸಿಂಗಾರಕ್ಕಾಗೇ ಹೂ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೆವು. ಮೇಲೆ ಹೇಳಿದ್ದೇನಲ್ಲಾ ಬಾಳೆಯ ರೆಂಬೆಗಳನ್ನು ಒಣಹಾಕುವ ವಿಚಾರ; ಇದ್ಯಾಕೆಂದರೆ, ಕಾಡಿನ, ಊರಿನ ಹೂವುಗಳನ್ನು ಅಂದವಾಗಿ ಪೋಣಿಸಲು ಹಗ್ಗ(ನಾರು) ತಯಾರಿಸಲು. ಹೀಗೆ ಒಣಗಿದ್ದ ರೆಂಬೆಯನ್ನು ಸಪೂರಕ್ಕೆ ಸೀಳಿ, ನೀರಿನಲ್ಲಿ ಅದ್ದಿ ದಟ್ಟವಾಗಿ ಬಣ್ಣಬಣ್ಣದ ವಿವಿಧ ಗಾತ್ರಗಳ ಹೂ ಮಾಲೆಕಟ್ಟಿ ಬಲಿಯೇಂದ್ರನಿಗೆ ಅರ್ಪಿಸುತ್ತಿದ್ದೆವು. ಅಪ್ಪನದ್ದು ಬೇರೆಯೇ ಟ್ರಿಕ್. ಬಾಳೆಯನ್ನು ಕಡಿದು ದಿಂಡಿನೊಳಗಿನ ಬಿಳಿಬಿಳಿ ಪದರಗಳನ್ನು (ನಾವಿದಕ್ಕೆ ಬಾಳೆರಂಬೆ ಅಂತೇವೆ) ತೆಗೆದು ಒಂದು ಭಾಗವನ್ನು ಹಲ್ಲುಹಲ್ಲಾಗಿ ಕತ್ತರಿಸಿ ಬಿದಿರನ್ನು ಸೀಳಿ ಮಾಡಿದ ಸಲಾಕೆಗಳ ಆಧಾರದೊಂದಿಗೆ ಎರಡೂ ಬಲಿಯೇಂದ್ರ ಮರಕ್ಕೆ ಜೋಡಿಸಿ ಕಟ್ಟಿದಾಗ ಶ್ವೇತವರ್ಣದ ಅದರ ಗೆಟಪ್ಪೇ ಗೆಟಪ್ಪು. ಇದರ ಮೇಲೆ ಬಣ್ಣಬಣ್ಣದ ವಿವಿಧ ಪುಷ್ಪಗಳ ಮಾಲೆಗಳು ಕಂಗೊಳಿಸುತ್ತಿದ್ದವು ನೋಡಿ, ಪಕ್ಕದ ಮನೆಯ ಬಲಿಯೇಂದ್ರಗಳೆಲ್ಲ ನಮ್ಮ ಬಲಿಯೇಂದ್ರನೆದುರು ಸಪ್ಪೆಸಪ್ಪೆ.


ಹಂದಿಬಳ್ಳಿ ಕಾಯಿ, ಕೇನೆ ಹೂವು,  ಕೋಳಿ ಜುಟ್ಟು, ಪಿಂಗಾರ(ಹೊಂಬಾಳೆ) ಹಬ್ಬಲ್ಲಿಗೆ, ಗೋರಟೆ, ದಾಸವಾಳ, ತೇರು ಹೂವು, ಚೆಂಡು ಹೂವು (ಇವುಗಳೆಲ್ಲ ಕಾಡಿನಲ್ಲಿ ಬೆಳೆಯುವ, ಊರಲ್ಲಿ ಬೆಳೆಸುವ ಸುಂದರ ಪುಷ್ಪಗಳು. ಇವುಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ, ಕ್ಷಮಿಸಿ)ಎಲ್ಲದರ ಮಾಲೆಯೊಂದಿಗೆ ಬಲಿಯೇಂದ್ರ ಜಿಗಿಜಿಗಿಯೊಂದಿಗೆ ಘಮಘಮ! ಬಲಿಯೇಂದ್ರನಿಗೆ ಪ್ರಭಾವಳಿಯನ್ನೂ ಇರಿಸುತ್ತಿದ್ದೆವು. ಅದು ನಮ್ಮ ಭಾಷೆಯಲ್ಲಿ ಪರ್ಬಾಳೆ ಆಗಿತ್ತು. ಬೆತ್ತದಲ್ಲಿ ನೇಯ್ದಿರುವ ಯು ಶೇಪಿನ ಪರ್ಮನೆಂಟ್ ಪ್ರಭಾವಳಿಯದು. ಹಬ್ಬವೆಲ್ಲ ಮುಗಿದು ಬಲಿಯೇಂದ್ರನ ವಿಸರ್ಜನೆಯ ವೇಳೆಗೆ ತಲೆಯಾಗಿದ್ದ ಪ್ರಭಾವಳಿಯನ್ನು ಮಾತ್ರ ಎತ್ತಿಟ್ಟು ಜೋಪಾನ ಮಾಡುತ್ತಿದ್ದೆವು. ತಲೆಯ ಭಾಗಕ್ಕೆ ಮಾತ್ರ ಹಳದಿ ಕೇಸರಿ ಮುಂತಾದ ವಿವಿಧ ಬಣ್ಣಗಳ ಚೆಂಡು(ಗೊಂಡೆ) ಹೂವು. ಇಷ್ಟು ಜತನದಿಂದ ಸಿಂಗರಿಸಿದ ಬಲಿಯೇಂದ್ರ ಬಿಸಿಲು-ಮಳೆಗೆ ನರಳಿದರೆ ನಮ್ಮ ಕರುಳು ಚುಳ್ ಎನ್ನುವುದಿಲ್ಲವೇ? ಈ ಕಾರಣಕ್ಕೂ ಮತ್ತು ಬಲಿಯೇಂದ್ರನ ಅಂದವನ್ನು ಹೆಚ್ಚಿಸಲೂ ಅರಳಿಸಿದ ಕೊಡೆಯ ಕಡ್ಡಿಗಳ ತುತ್ತತುದಿಯಲ್ಲಿ ತಾಜಾತಾಜಾ ಕೆಂಪಡಿಕೆಯನ್ನು ನೂಲಿನಲ್ಲಿ ಸುರಿದು ಕಟ್ಟಿ ಹ್ಯಾಂಗಿಂಗ್ ಥರ ಇಳಿಬಿಡುತ್ತಿದ್ದೆವು. ಆಹಾ..... ಇಂತಿಪ್ಪ ಬಲಿಯೇಂದ್ರನ ಸೌಂದರ್ಯವನ್ನು ತುಂಬಿಕೊಳ್ಳಲು ಆಗಿನ ಪುಟ್ಟ ಕಂಗಳು ಸಾಕಾಗುತ್ತಿರಲಿಲ್ಲ. (ಈಗವಾದರೆ ಕನ್ನಡಕವೂ ಸೇರ್ಪಡೆಗೊಂಡು ಕಣ್ಣು ನಾಲ್ಕಾಗಿದೆ, ಆದರೆ ಬಲಿಯೇಂದ್ರನಿಲ್ಲ!) ಅದೊಂದು ವರ್ಷ ಹೂವಿನ ಅಭಾವ ತೋರಿತ್ತು. ಆಗ ನಮ್ಮ ದೊಡ್ಡಕ್ಕನ ಐಡಿಯಾದಂತೆ ಬಣ್ಣದ ಕಾಗದವನ್ನು ಹೂವಿನ ಮಾಲೆಯಂತೆ ನೆರಿಗೆನೆರಿಗೆಯಾಗಿ ಹೊಲಿದು ಮಾಡಿದ್ದ ಸಿಂಗಾರ ನಮ್ಮೂರಲ್ಲಿ ಸೂಪರ್ ಹಿಟ್ ಆಗಿತ್ತು.


ನಮ್ಮ ಬಲಿಯೇಂದ್ರನ ಸಿಂಗಾರ ಮುಗಿಸಿ ಪಕ್ಕದ ಸಿಂಗಮಾಮನ ಮನೆ ಬಲಿಯೇಂದ್ರನ ವೀಕ್ಷಣೆಗೆ ತೆರಳುತ್ತಿದ್ದೆವು. ಅವರ ಪುತ್ರ ಬೆಂಗಳೂರಿನಲ್ಲಿ ಇಂಜಿನೀಯರ್. ಆಗ ನಮಗೆ ಬೆಂಗಳೂರೆಂದರೆ ಅದು ಭಾರೀ ದೂರದ ದೇಶ. ಅವರು ಹಬ್ಬಕ್ಕೆಂದೇ ಸ್ಪೆಷಲ್ ಆಗಿ ಬರುವಾಗ ಪಟಾಕಿ, ತಿಂಡಿ ತಿನಿಸುಗಳನ್ನು ಖಡ್ಡಾಯ ತರುತ್ತಿದ್ದರು. ಗೆಳತಿ ಕುಮ್ಮಿ (ಅವರ ತಂಗಿ, ನನ್ನ ಜೀವನದ ಪ್ರಪ್ರಥಮ ದೋಸ್ತಿ) ಬೇರೆ ಅಣ್ಣ ನೂ........ರು ರೂಪಾಯಿ ಪಟಾಕಿ ತಂದಿದ್ದಾರೆ ಎಂದಾಗ ಆಸೆ ಚಿಗುರದಿರುತ್ತದಾ? ನಮ್ಮಮನೆಯಲ್ಲೋ, ಅಪ್ಪ ಒಂದು ಬಾರಿ ಕಣ್ಣು ಕೆಕ್ಕರಿಸಿದರೆಂದರೆ ನಮ್ಮ ಪಟಾಕಿ(ಬೇಡಿಕೆಯ) ಸದ್ದು ಅಲ್ಲೇ ಅಡಗುತ್ತಿತ್ತು. ಅದು ಹೇಗೋ ಸಿಂಗತ್ತೆಗೆ ನನ್ನ ಪಟಾಕಿ ಆಸೆ ಗೊತ್ತಾಗಿ ಅವರ ಶಿಫಾರಸ್ಸಿನ ಮೇಲೆ ನಂಗೊಂದಿಷ್ಟು ಪಟಾಕಿ, ಒಂದು ಪ್ಯಾಕ್ ನಕ್ಷತ್ರ ಕಡ್ಡಿ ಸಿಗುತ್ತಿತ್ತು.


ಆದರೆ ನನ್ನ ಗಾಯತ್ರಕ್ಕಳಿಗೆ ಮಾತ್ರ ನಮ್ಮ ಅಂಗಳದಿಂದಲೂ ಪಟಾಕಿ ಸದ್ದು ಸಿಡಿಯಬೇಕೆಂಬ ಆಸೆ. (ಈಗ ಯಾರಾದರೂ ಅವಳ ಬಳಿ ಹಬ್ಬಕ್ಕೆ ಪಟಾಕಿ ತಗೊಂಡ್ರಾ ಅಂದ್ರೆ; ಇಲ್ಲ, ನಮ್ಮ ಮನೆಯಲ್ಲಿ ತಂಗಿ ಇದ್ದಾಳೆ ಅಂತಾಳೆ) ಅದಕ್ಕಾಗಿ ನಾವು ನಾಡ ಪಟಾಕಿ ತಯ್ಯಾರಿಸುತ್ತಿದ್ದೆವು. ನಾವು ಮಾತ್ರವಲ್ಲ, ನಮ್ಮ ಮನೆಯ ಉತ್ತರಕ್ಕಿದ್ದ ವೆಂಕಪ್ಪಣ್ಣನ ಮನೆ, ಎದುರಿಗಿದ್ದ ಚಿಕ್ಕಪ್ಪನ ಮನೆ, ಆಚೆಗಿದ್ದ ಮಾಲಿಂಗಣ್ಣ- ಎಲ್ಲರ ಮನೆಯಲ್ಲೂ ಇದೇ ಪಟಾಕಿ. ಚೆನ್ನಾಗಿ ಬೆಳೆದ ಹಸಿ ಬಿದಿರಿನ ಒಳಗಿನ ಗಂಟುಗಳನ್ನು ಹಾರಿಸಿ, ಎರಡೂ ಬದಿ ಬಂದ್ ಇರಿಸಿ ಮೇಲೆ ಒಂದು ಕಡೆಯಲ್ಲಿ ತೂತು ಮಾಡಿ ಅದರ ಒಳಭಾಗಕ್ಕೆ ಸೀಮೆ ಎಣ್ಣೆ ಚಿಮುಕಿಸಿ ಬೆಂಕಿ ತೋರಿಸುವ ಮೂಲಕ ಚೆನ್ನಾಗಿ ಬಿಸಿ ಮಾಡಬೇಕು. ಬಿದಿರು ಕಾದ ಬಳಿಕ ಸಣ್ಣದಾಗಿ ಮೇಲ್ಮುಖವಾಗಿ ಮಾಡಿದ ತೂತಿನಲ್ಲಿ ಚೆನ್ನಾಗಿ ಊದಿ, ಒತ್ತಡ ತುಂಬಿ ಬೆಂಕಿಯ ಜ್ವಾಲೆಯನ್ನು ಹಾಯಿಸಿದರೆ ಭಯಂಕರ ಸದ್ದು ಹೊರಡುತ್ತಿತ್ತು. (ನಿಮ್ಮ ಈಗಿನ ಮಾಲೆ ಪಟಾಕಿಗಿಂತ ಒಳ್ಳೆಯ ಶಬ್ದವೇ ಹೊರಡುತ್ತಿತ್ತು) ಪಟಾಕಿ ಸದ್ದಿನೊಂದಿಗೆ ವಿವಿಧ ಮನೆಗಳಲ್ಲಿ ಬಿದಿರನ್ನು ಊದುವ ಶಬ್ದವೂ ಅನುರಣಿಸುತ್ತಿತ್ತು. ಇದರಲ್ಲೂ ಕಾಂಪಿಟೇಶನ್. ಬಿದಿರು ಊದಿದವರ ಪುಪ್ಪುಸದ ಕಥೆ ಬಲಿಯೇಂದ್ರನಿಗೇ ಪ್ರೀತಿ. ಮರುದಿನದ ಕಿವಿನೋವು ಹಬ್ಬದ ಸಡಗರದಲ್ಲಿ ಲೆಕ್ಕಕ್ಕೇ ಇರುತ್ತಿರಲಿಲ್ಲ.


ಮುಸ್ಸಂಜೆ ಕಳೆದು ಕತ್ತಲಾಗುತ್ತಿರುವಂತೆ ಬಲಿಯೇಂದ್ರ ಕೂಗುವುದು ಇನ್ನೊಂದು ಸಂಭ್ರಮ. ಅದೇನು ಕಟ್ಟುಕಟ್ಟಳೆಯ ಶಬ್ದಗಳೋ ಅಂತು ಕೊನೆಯಲ್ಲಿ 'ಹರಿಯೇ ಸಿರಿಯೇ ಕೂ....' ಎಂಬುದು ಮಾತ್ರ ಸರಿಯಾಗಿ ಅರ್ಥವಾಗುತ್ತಿತ್ತು. ಒಟ್ಟಿನಲ್ಲಿ ಅದರ ತಾತ್ಪರ್ಯವೆಂದರೆ, ಕೆಟ್ಟದನ್ನು ಕೊಂಡೊಯ್ದು ಸಿರಿಯನ್ನು ತಾ ಎಂಬುದು ಬಲಿಯೇಂದ್ರನೊಡನೆ ಅರಿಕೆ. ಅರಿಕೆ ಮಾಡಿಕೊಳ್ಳುವುದು ಯಜಮಾನನ ಕರ್ತವ್ಯವಾದರೆ, ಕೊನೆಯಲ್ಲಿ ಕೂ.... ಎಂಬುದು ಮಾತ್ರ ಮನೆಯವರೆಲ್ಲರ ಕೋರಸ್. ಇದರಲ್ಲೂ ಯಾವ ಮನೆಯ ಕೂ..... ಎಂಬ ಕೂಗು(ಕಿರುಚು) ಹೆಚ್ಚು ಶಕ್ತಿಶಾಲಿ ಎಂಬ ಬಹುಮಾನರಹಿತ ಸ್ಫರ್ಧೆ.


ಬಲಿಯೇಂದ್ರನ ಬಳಿ ಅರಿಕೆ ಮಾಡಿದ ಬಳಿಕ ಮನೆಯವರೆಲ್ಲರೂ ಸಾಲಾಗಿ ನಿಂತು ಪ್ರತಿಷ್ಠಾಪಿತ ಬಲಿಯೇಂದ್ರನಿಗೆ ಅವಲಕ್ಕಿ ಎರಚಿ ಅಥವಾ ಚಿಮ್ಮಿ ಪ್ರಾರ್ಥಿಸುವುದು ಕ್ರಮ. ನಾನಾಗ ನಾಲ್ಕೋ ಇಲ್ಲ ಐದರ ಹರೆಯದವಳು. ಅಪ್ಪ ಎಲ್ಲರ ಕೈಗೆ ಅವಲಕ್ಕಿ ಕೊಟ್ಟಿದ್ದರು. ಆಗೀಗ ನಮ್ಮಲ್ಲಿ ಅಗತ್ಯ ತೋಟದ ಕೆಲಸವೇನಾದರೂ ಇದ್ದರೆ ಬಂದು ಸಹಕರಿಸುತ್ತಿದ್ದ, ನೆರೆಮನೆಯ ಮೇಸ್ತ್ರಿ ಚೋಮಣ್ಣ ವಿಶೇಷ ಆಹ್ವಾನಿತರಾಗಿದ್ದರು. ಅಪ್ಪ ಅವರೊಂದಿಗೆ ಕಟ್ಟುಪಾಡಿನ ಮಾತುಗಳನ್ನು ಹೇಳುತ್ತಾ ಬಲಿಯೇಂದ್ರನಿಗೆ ಅರಿಕೆ ಮಾಡುತ್ತಿದ್ದರು. ಚೋಮಣ್ಣ 'ಆಂ, ಹೌದೌದು, ಸರಿ' ಎಂದೆಲ್ಲ ಹೇಳುತ್ತಾ ಅಪ್ಪನಿಗೆ ಸಾಥ್ ನೀಡುತ್ತಿದ್ದರು. ನಾನು ಆ ಸಮಯವನ್ನು ವ್ಯರ್ಥ ಮಾಡುವುದೇಕೆ ಎಂಬ ಉದ್ದೇಶದಿಂದಲೋ, ಅಥವಾ ಅದನ್ನು ತಿನ್ನಲು ಕೊಟ್ಟಿದ್ದಾರೆಂದೋ, ಸದ್ದಿಲ್ಲದೆ ಕೈಯಲ್ಲಿದ್ದ ಅವಲಕ್ಕಿಯನ್ನು ಮೆದ್ದಿದ್ದೆ. (ಅದು ಮನೆಯಲ್ಲೇ ಅಮ್ಮ ಕುಟ್ಟಿ ಮಾಡುತ್ತಿದ್ದ ರುಚಿಯಾದ ಅವಲಕ್ಕಿ) ಕೊನೆಯಲ್ಲಿ ಕೂ.... ಹೇಳುವ ವೇಳೆಗೆ ಎರಚಲು ನನ್ನ ಕೈಯಲ್ಲಿ ಅವಲಕ್ಕಿ ಇಲ್ಲದೆ, ಇಂಗು(ಅವಲಕ್ಕಿ)ತಿಂದ ಮಂಗಿಯಾಗಿದ್ದೆ.


ಇನ್ನೊಂದು ಘಟನೆಯನ್ನೂ ಹೇಳಲೇ ಬೇಕು. ಮೂರು ದಿವಸ ಶೃಂಗಾರ ಪೂಜೆ ಎಲ್ಲ ಆದ ಮೇಲೆ ಕೊನೆಯ ದಿವಸ ಮುಂಜಾನೆಯೇ ಬಲಿಯೇಂದ್ರನ ವಿಸರ್ಜನೆ. ಅಂದರೆ ಮನೆಯ ಮುಂದೆ ರಾರಾಜಿಸುತ್ತಿದ್ದ ಜೋಡಿಮರವನ್ನು ಶೃಂಗಾರ ಸಮೇತ ಕಿತ್ತು ಹರಿಯುವ ನೀರಿನ ಬಳಿಯಲ್ಲಿ ಇರಿಸಲಾಗುತ್ತದೆ. ನಮ್ಮ ಬಲಿಯೇಂದ್ರನನ್ನು ಕೆಳಗಿನ ತೋಟದಲ್ಲಿ ಹರಿಯುವ ತೊರೆಯ ಬದಿಯಲ್ಲಿ ಇರಿಸುವುದು ವಾಡಿಕೆ. ಮೂರು ದಿವಸಗಳ ಕಾಲ ಬಲಿಯೇಂದ್ರನೇ ಸರ್ವಸ್ವವಾಗಿದ್ದು, ಅವಿನಾಭಾವ ನಂಟು ಉಂಟಾಗಿರುತ್ತಿದ್ದ ನನಗೆ ಬಲಿಯೇಂದ್ರನನ್ನು ಅಗಲುವುದು ಬಹಳ ಕಷ್ಟಕರ ವಿಚಾರವಾಗಿತ್ತು. ಬಲಿಯೇಂದ್ರ ವಿಸರ್ಜನೆಯ ಮಾತುಕತೆ ನಡೆಯುತ್ತಿದ್ದ ವೇಳೆ, ನಾನು ಅಪ್ಪನನ್ನು ಬಲಿಯೇಂದ್ರ ವಿಸರ್ಜನೆ ಬೇಡವೇ ಬೇಡವೆಂಬ ಹಠದೊಂದಿಗೆ ವಿನಂತಿಸಿಕೊಂಡಿದ್ದೆ. ಆ ಕ್ಷಣಕ್ಕೆ 'ಆಯ್ತು ಮಗಾ, ಈಗ ನಿದ್ದೆ ಮಾಡು' ಎಂದು ಸಮಾಧಾನಿಸಿದ್ದರು.


ಆದರೆ, ಅದೇನೋ ಸಿಕ್‌ಸ್ತ್ ಸೆನ್ಸ್ ಇರಬೇಕು. ಮರುದಿನ ನಸುಕಿನಲ್ಲಿ ಎಚ್ಚರವಾಗಿತ್ತು. (ಇಲ್ಲವಾದರೆ ನಾನು ಕುಂಭಕರ್ಣಿ) ಎದ್ದ ತಕ್ಷಣ ಆಗ ನೇರ ಬಲಿಯೇಂದ್ರನ ಬಳಿಸಾರಿಯೇ ಕಣ್ಣು ಬಿಡುತ್ತಿದ್ದದ್ದು. ಅಂದು ಎದ್ದು ನೋಡುತ್ತಿರಬೇಕಿದ್ದರೆ, ಅಪ್ಪ ಮರವನ್ನು ಕೀಳುತ್ತಿದ್ದಾರೆ. ಪುಟ್ಟ ಹೃದಯಕ್ಕೆ ಎಷ್ಟು ನೋವಾಯಿತೆಂದರೆ, ಅದನ್ನಿಲ್ಲಿ ಹೇಳಲಾಗುತ್ತಿಲ್ಲ. ಪ್ರತಿಭಟಿಸಿದೆ. ಊಹೂಂ... ಪರಿಣಾಮ ಸಾಲದಾಯಿತು. ಅಪ್ಪ ಅವರ ಪಾಡಿಗೆ ಬಲಿಯೇಂದ್ರನನ್ನು ಬೆನ್ನ ಮೇಲಿರಿಸಿ ಶೋಭಾಯಾತ್ರೆ(ಒಬ್ಬರೇ) ಹೊರಟರು. ನಾನೂ ಸದ್ದಿಲ್ಲದೆ ಕಣ್ಣಲ್ಲಿ ನೀರು ಸುರಿಸುತ್ತಾ ಅವರ ಹಿಂದೆಯೇ ನಡೆದಿದ್ದೆ. ತೊರೆಬದಿಯಲ್ಲಿ ಮರವಿಳಿಸಿ ಹಿಂತಿರುಗಿ ನೋಡುವ ವೇಳೆ ನಿಯಂತ್ರಿಸಲಾಗದ ದುಃಖ ಉಮ್ಮಳಿಸುತ್ತಾ, ಬಿಕ್ಕುತ್ತಾ ನಿಂತಿದ್ದ ನನ್ನನ್ನು ಅಪ್ಪ ಹೆಗಲ ಮೇಲೆ ಕೂರಿಸಿ ಕರೆತಂದಿದ್ದರು (ಅವರಿಗೂ ದುಃಖವಾದದ್ದು ತಿಳಿಯುತ್ತಿತ್ತು). ಈ ಕತೆ ನಮ್ಮ ಮನೆಯಲ್ಲಿ ಎವ್ವರ್ ಗ್ರೀನ್. ಪ್ರತೀ ದೀಪಾವಳಿ ವೇಳೆ ಒಬ್ಬರಿಲ್ಲವಾದರೆ ಒಬ್ಬರು ನೆಪಿಸಿಯೇ ಸಿದ್ಧ. ನನ್ನ ಮೋಡರ್ನ್ ಮಕ್ಕಳಿಗೆ(ಅಕ್ಕನ) ಅದೊಂದು ನಗೆ ಸರಕು.


ಕಾಡಿಗೆ ತೆರಳಿ ಮರತರಲು ಅಪ್ಪನಿಲ್ಲ. ಅಣ್ಣನಿಗೆ ಇಂಟರೆಸ್ಟ್ ಇಲ್ಲ. ಭತ್ತದಗದ್ದೆ ಇದ್ದಲ್ಲಿ ಅಡಿಕೆ ತೋಟವಿದೆ. ಹಟ್ಟಿ ತುಂಬ ಇರುತ್ತಿದ್ದ ದನಗಳ ಸಂಖ್ಯೆ ಕಮ್ಮಿಯಾಗಿದೆ. ಇಚ್ಚೆಯಂತೆ ನಮಗೆ ಹಬ್ಬಕ್ಕೆ ತೆರಳಲಾಗುತ್ತಿಲ್ಲ. ಹಬ್ಬಬಂದಾಗೆಲ್ಲ ಆ ಸಂಭ್ರಮ, ಹರ್ಷೋತ್ಕರ್ಷದ ನೆನಪಿನ ಹೂವುಗಳು ಮನದೊಳಗೆ ಬಿರಿಯುತ್ತವೆ, ಮುದಗೊಳ್ಳುತ್ತೇನೆ.



(ಈ ಬರಹ ಈ ಹಿಂದೆ ಬೇರೆಡೆ ಪ್ರಕಟವಾಗಿತ್ತು.)

ಶುಕ್ರವಾರ, ಆಗಸ್ಟ್ 26

ನಿಮ್ಗೊತ್ತಿತ್ತಾ ಇದು.....?


ಇದು ನನ್ನ ಇನ್‌ಬಾಕ್ಸಿನಲ್ಲಿತ್ತು. ಕೊನೆಯಲ್ಲಿ ನೀವು ಕಾಳಜಿ ವಹಿಸುವವರಿಗೆಲ್ಲ ಮರು ಕಳಿಸುವಂತೆ ಕೋರಲಾಗಿತ್ತು. ಹಾಗಾಗಿ, ನೀವೆಲ್ಲರೂ ಕಾಳಜಿಯ ವ್ಯಾಪ್ತಿಗೆ ಬರುವ ಕಾರಣ ಅದನ್ನು ಯಥಾವತ್ತಾಗಿ ನಕಲಿಸಿ ಇಲ್ಲಿರಿಸಿದ್ದೇನೆ. ನಿಮಗೂ ಬಂದಿರಬಹುದೇನೋ.... ಇರಲಿ, ಯಾರಿಗಾದರೂ ಪ್ರಯೋಜನವಾದರೂ ಆಗಬಹುದು!!!
Good one. Don't miss ...... 
Did You Know? 
... DRINK WATER IN EMPTY STOMACH
It is popular in Japan today to drink water immediately after waking up every morning. Furthermore, scientific tests have proven its value. We publish below a description of use of water for our readers. For old and serious diseases as well as modern illnesses the water treatment had been found successful by a Japanese medical society as a 100% cure for the following diseases:
Headache, body ache, heart system, arthritis, fast heart beat, epilepsy, excess fatness, bronchitis asthma, TB, meningitis, kidney and urine diseases, vomiting, gastritis, diarrhea, piles, diabetes, constipation, all eye diseases, womb, cancer and menstrual disorders, ear nose and throat diseases.


METHOD OF TREATMENT

1. As you wake up in the morning before brushing teeth, drink 4 x 160ml glasses of water .....interesting

2. Brush and clean the mouth but do not eat or drink anything for 45 minutes

3. After 45 minutes you may eat and drink as normal.

4. After 15 minutes of breakfast, lunch and dinner do not eat or drink anything for 2 hours

5. Those who are old or sick and are unable to drink 4 glasses of water at the beginning may commence by taking little water and gradually increase it to 4 glasses per day.

6. The above method of treatment will cure diseases of the sick and others can enjoy a healthy life.

The following list gives the number of days of treatment required to cure/control/reduce main diseases:

1. High Blood Pressure - 30 days

2. Gastric - 10 days

3. Diabetes - 30 days

4. Constipation - 10 days

5. Cancer - 180 days

6. TB - 90 days

7. Arthritis patients should follow the above treatment only for 3 days in the 1st week, and from 2nd week onwards - daily.

This treatment method has no side effects, however at the commencement of treatment you may have to urinate a few times.

It is better if we continue this and make this procedure as a routine work in our life.

Drink Water and Stay healthy and Active.

This makes sense .. The Chinese and Japanese drink hot tea with their meals ..not cold water. Maybe it is time we adopt their drinking habit while eating!!! Nothing to lose, everything to gain...

For those who like to drink cold water, this article is applicable to you.

It is nice to have a cup of cold drink after a meal. However, the cold water will solidify the oily stuff that you have just consumed. It will slow down the digestion.
Once this 'sludge' reacts with the acid, it will break down and be absorbed by the intestine faster than the solid food. It will line the intestine. Very soon, this will turn into fats and lead to cancer. It is best to drink hot soup or warm water after a meal.

A serious note about heart attacks: Women should know that not every heart attack symptom is going to be the left arm hurting.
Be aware of intense pain in the jaw line.

You may never have the first chest pain during the course of a heart attack.

Nausea and intense sweating are also common symptoms! .

60% of people who have a heart attack while they are asleep do not wake up.

Pain in the jaw can wake you from a sound sleep. Let's be careful and be aware. The more we know, the better chance we could survive...

A cardiologist says if everyone who gets this mail sends it to everyone they know, you can be sure that we'll save at least one life.
 

HEALTHY JUICES 


Carrot + Ginger + Apple  - 
Boost and cleanse our system. 


Apple + Cucumber + Celery -   
Prevent cancer, reduce cholesterol, and eliminate stomach upset and headache.   


Tomato + Carrot + Apple - 
Improve skin complexion and eliminate bad breath.   


Bitter gourd + Apple + Milk 
-   Avoid bad breath and reduce internal body heat.  


Orange  + Ginger + Cucumber - Improve Skin texture and moisture and reduce! body heat.   


Pineapple + Apple + Watermelon - 
To dispel excess salts, nourish the bladder and kidney.   


Apple + Cucumber + Kiwi - 
To improve skin complexion.   


Pear & Banana 
-   regulates sugar content.   


Carrot + Apple + Pear + Mango - 
Clear body heat, counteracts toxicity, decreased blood pressure and fight oxidization .   


Honeydew + Grape + Watermelon + Milk 
Rich in vitamin C + Vitamin B2 that increase cell activity and strengthen body immunity.   


Papa ya + Pineapple + Milk - 
Rich in vitamin C, E, Iron. Improve skin complexion and metabolism.   


Banana + Pineapple + Milk 
Rich in vitamin with nutritious and prevent constipation 


 
Blood type and Rh
How many people have it?
O +
40 %
O -
7 %
A +
34 %
A -
6 %
B +
8 %
B -
1 %
AB +
3 %
AB -
1 %


Does Your Blood Type Reveal Your Personality?
 
 
According to a Japanese institute that does research on blood types, there are certain personality traits that seem to match up with certain blood types. How do you rate?
TYPE O
You want to be a leader, and when you see something you want, you keep striving until you achieve your goal. You are a trend-setter, loyal, passionate, and self-confident. Your weaknesses include vanity and jealously and a tendency to be too competitive.
TYPE A
You like harmony, peace and organization. You work well with others, and are sensitive, patient and affectionate. Among your weaknesses are stubbornness and an inability to relax.
TYPE B
You're a rugged individualist, who's straightforward and likes to do things your own way. Creative and flexible, you adapt easily to any situation. But your insistence on being independent can sometimes go too far and become a weakness.
TYPE AB
Cool and controlled, you're generally well liked and always put people at ease. You're a natural entertainer who's tactful and fair. But you're standoffish, blunt, and have difficulty making decisions.
 
 
MOST IMPORTANT INFO NOW: ANIKANDAN,
You Can Receive
If Your Type Is
O-
O+
B-
B+
A-
A+
AB-
AB+
AB+
YES
YES
YES
YES
YES
YES
YES
YES
AB-
YES

YES

YES
YES


A+
YES
YES


YES
YES


A-
YES



YES



B+
YES
YES
YES
YES




B-
YES

YES





O+
YES
YES






O-
YES







 
 
KNOW ABOUT THE BENEFITS OF HAVING FRUITS AND VEGETABLES REGARDS
Fruit
Benefit
Benefit
Benefit
Benefit
Benefit

apples
Protects your heart
prevents constipation
Blocks diarrhea
Improves lung capacity
Cushions joints

apricots
Combats cancer
Controls blood pressure
Saves your eyesight
Shields against Alzheimer's
Slows aging process

artichokes
Aids digestion
Lowers cholesterol
Protects your heart
Stabilizes blood sugar
Guards against liver disease

avocados
Battles diabetes
Lowers cholesterol
Helps stops strokes
Controls blood pressure
Smoothes skin

bananas
Protects your heart
Quiets a cough
Strengthens bones
Controls blood pressure
Blocks diarrhea

beans
Prevents constipation
Helps hemorrhoids
Lowers cholesterol
Combats cancer
Stabilizes blood sugar

beets
Controls blood pressure
Combats cancer
Strengthens bones
Protects your heart
Aids weight loss

blueberries
Combats cancer
Protects your heart
Stabilizes blood sugar
Boosts memory
Prevents constipation

broccoli
Strengthens bones
Saves eyesight
Combats cancer
Protects your heart
Controls blood pressure

cabbage
Combats cancer
Prevents constipation
Promotes weight loss
Protects your heart
Helps hemorrhoids

cantaloupe
Saves eyesight
Controls blood pressure
Lowers cholesterol
Combats cancer
Supports immune system