ಶುಕ್ರವಾರ, ಆಗಸ್ಟ್ 26

ನಿಮ್ಗೊತ್ತಿತ್ತಾ ಇದು.....?


ಇದು ನನ್ನ ಇನ್‌ಬಾಕ್ಸಿನಲ್ಲಿತ್ತು. ಕೊನೆಯಲ್ಲಿ ನೀವು ಕಾಳಜಿ ವಹಿಸುವವರಿಗೆಲ್ಲ ಮರು ಕಳಿಸುವಂತೆ ಕೋರಲಾಗಿತ್ತು. ಹಾಗಾಗಿ, ನೀವೆಲ್ಲರೂ ಕಾಳಜಿಯ ವ್ಯಾಪ್ತಿಗೆ ಬರುವ ಕಾರಣ ಅದನ್ನು ಯಥಾವತ್ತಾಗಿ ನಕಲಿಸಿ ಇಲ್ಲಿರಿಸಿದ್ದೇನೆ. ನಿಮಗೂ ಬಂದಿರಬಹುದೇನೋ.... ಇರಲಿ, ಯಾರಿಗಾದರೂ ಪ್ರಯೋಜನವಾದರೂ ಆಗಬಹುದು!!!
Good one. Don't miss ...... 
Did You Know? 
... DRINK WATER IN EMPTY STOMACH
It is popular in Japan today to drink water immediately after waking up every morning. Furthermore, scientific tests have proven its value. We publish below a description of use of water for our readers. For old and serious diseases as well as modern illnesses the water treatment had been found successful by a Japanese medical society as a 100% cure for the following diseases:
Headache, body ache, heart system, arthritis, fast heart beat, epilepsy, excess fatness, bronchitis asthma, TB, meningitis, kidney and urine diseases, vomiting, gastritis, diarrhea, piles, diabetes, constipation, all eye diseases, womb, cancer and menstrual disorders, ear nose and throat diseases.


METHOD OF TREATMENT

1. As you wake up in the morning before brushing teeth, drink 4 x 160ml glasses of water .....interesting

2. Brush and clean the mouth but do not eat or drink anything for 45 minutes

3. After 45 minutes you may eat and drink as normal.

4. After 15 minutes of breakfast, lunch and dinner do not eat or drink anything for 2 hours

5. Those who are old or sick and are unable to drink 4 glasses of water at the beginning may commence by taking little water and gradually increase it to 4 glasses per day.

6. The above method of treatment will cure diseases of the sick and others can enjoy a healthy life.

The following list gives the number of days of treatment required to cure/control/reduce main diseases:

1. High Blood Pressure - 30 days

2. Gastric - 10 days

3. Diabetes - 30 days

4. Constipation - 10 days

5. Cancer - 180 days

6. TB - 90 days

7. Arthritis patients should follow the above treatment only for 3 days in the 1st week, and from 2nd week onwards - daily.

This treatment method has no side effects, however at the commencement of treatment you may have to urinate a few times.

It is better if we continue this and make this procedure as a routine work in our life.

Drink Water and Stay healthy and Active.

This makes sense .. The Chinese and Japanese drink hot tea with their meals ..not cold water. Maybe it is time we adopt their drinking habit while eating!!! Nothing to lose, everything to gain...

For those who like to drink cold water, this article is applicable to you.

It is nice to have a cup of cold drink after a meal. However, the cold water will solidify the oily stuff that you have just consumed. It will slow down the digestion.
Once this 'sludge' reacts with the acid, it will break down and be absorbed by the intestine faster than the solid food. It will line the intestine. Very soon, this will turn into fats and lead to cancer. It is best to drink hot soup or warm water after a meal.

A serious note about heart attacks: Women should know that not every heart attack symptom is going to be the left arm hurting.
Be aware of intense pain in the jaw line.

You may never have the first chest pain during the course of a heart attack.

Nausea and intense sweating are also common symptoms! .

60% of people who have a heart attack while they are asleep do not wake up.

Pain in the jaw can wake you from a sound sleep. Let's be careful and be aware. The more we know, the better chance we could survive...

A cardiologist says if everyone who gets this mail sends it to everyone they know, you can be sure that we'll save at least one life.
 

HEALTHY JUICES 


Carrot + Ginger + Apple  - 
Boost and cleanse our system. 


Apple + Cucumber + Celery -   
Prevent cancer, reduce cholesterol, and eliminate stomach upset and headache.   


Tomato + Carrot + Apple - 
Improve skin complexion and eliminate bad breath.   


Bitter gourd + Apple + Milk 
-   Avoid bad breath and reduce internal body heat.  


Orange  + Ginger + Cucumber - Improve Skin texture and moisture and reduce! body heat.   


Pineapple + Apple + Watermelon - 
To dispel excess salts, nourish the bladder and kidney.   


Apple + Cucumber + Kiwi - 
To improve skin complexion.   


Pear & Banana 
-   regulates sugar content.   


Carrot + Apple + Pear + Mango - 
Clear body heat, counteracts toxicity, decreased blood pressure and fight oxidization .   


Honeydew + Grape + Watermelon + Milk 
Rich in vitamin C + Vitamin B2 that increase cell activity and strengthen body immunity.   


Papa ya + Pineapple + Milk - 
Rich in vitamin C, E, Iron. Improve skin complexion and metabolism.   


Banana + Pineapple + Milk 
Rich in vitamin with nutritious and prevent constipation 


 
Blood type and Rh
How many people have it?
O +
40 %
O -
7 %
A +
34 %
A -
6 %
B +
8 %
B -
1 %
AB +
3 %
AB -
1 %


Does Your Blood Type Reveal Your Personality?
 
 
According to a Japanese institute that does research on blood types, there are certain personality traits that seem to match up with certain blood types. How do you rate?
TYPE O
You want to be a leader, and when you see something you want, you keep striving until you achieve your goal. You are a trend-setter, loyal, passionate, and self-confident. Your weaknesses include vanity and jealously and a tendency to be too competitive.
TYPE A
You like harmony, peace and organization. You work well with others, and are sensitive, patient and affectionate. Among your weaknesses are stubbornness and an inability to relax.
TYPE B
You're a rugged individualist, who's straightforward and likes to do things your own way. Creative and flexible, you adapt easily to any situation. But your insistence on being independent can sometimes go too far and become a weakness.
TYPE AB
Cool and controlled, you're generally well liked and always put people at ease. You're a natural entertainer who's tactful and fair. But you're standoffish, blunt, and have difficulty making decisions.
 
 
MOST IMPORTANT INFO NOW: ANIKANDAN,
You Can Receive
If Your Type Is
O-
O+
B-
B+
A-
A+
AB-
AB+
AB+
YES
YES
YES
YES
YES
YES
YES
YES
AB-
YES

YES

YES
YES


A+
YES
YES


YES
YES


A-
YES



YES



B+
YES
YES
YES
YES




B-
YES

YES





O+
YES
YES






O-
YES







 
 
KNOW ABOUT THE BENEFITS OF HAVING FRUITS AND VEGETABLES REGARDS
Fruit
Benefit
Benefit
Benefit
Benefit
Benefit

apples
Protects your heart
prevents constipation
Blocks diarrhea
Improves lung capacity
Cushions joints

apricots
Combats cancer
Controls blood pressure
Saves your eyesight
Shields against Alzheimer's
Slows aging process

artichokes
Aids digestion
Lowers cholesterol
Protects your heart
Stabilizes blood sugar
Guards against liver disease

avocados
Battles diabetes
Lowers cholesterol
Helps stops strokes
Controls blood pressure
Smoothes skin

bananas
Protects your heart
Quiets a cough
Strengthens bones
Controls blood pressure
Blocks diarrhea

beans
Prevents constipation
Helps hemorrhoids
Lowers cholesterol
Combats cancer
Stabilizes blood sugar

beets
Controls blood pressure
Combats cancer
Strengthens bones
Protects your heart
Aids weight loss

blueberries
Combats cancer
Protects your heart
Stabilizes blood sugar
Boosts memory
Prevents constipation

broccoli
Strengthens bones
Saves eyesight
Combats cancer
Protects your heart
Controls blood pressure

cabbage
Combats cancer
Prevents constipation
Promotes weight loss
Protects your heart
Helps hemorrhoids

cantaloupe
Saves eyesight
Controls blood pressure
Lowers cholesterol
Combats cancer
Supports immune system









ಸೋಮವಾರ, ಜುಲೈ 18

ರಕ್ಷಣೆ ಇಲ್ಲ ಅಂದರೆ ಏನರ್ಥ......?

ಬಲ್ಲಿರೇನಯ್ಯಾ.............?
ಭಳಿರೇ ಪರಾಕ್ರಮ ಕಂಠೀರವಾ....................!
ಭಾರತವೆಂಬೋ ಭಯದ ಉತ್ಪಾದನೆಯ ಬಲಿಪಶುಗಳ ಈ ಬಾಂಬುಭರಿತ ನಾಡಿನ ಗೃಹ ವ್ಯವಹಾರಗಳ ಜವಾಬುದಾರಿಯನ್ನು ಹೊತ್ತವರಾರು.......................?
ದಿಗಂ ಭರಂ ಎಂದು ಕೇಳಿಬಲ್ಲೆವೂ....
ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದೂ............
ಇರುವಂತಹಾ ಸ್ಥಳ.........?
ರಾಷ್ಚ್ರದ ರಾಜಧಾನಿ ಎಂದುಕೊಳ್ಳಬಹುದು
ಬಂದಂತಂಹ ಕಾರ್ಯ........
ಅನೇಕವಿದೆ.......... ಅನೇಕವಿದೆ.......... ಅನೇಕವಿದೆ..........
ರಾಜಕಾರ್ಯ....... ರಾಜ ತಾಂತ್ರಿಕ ಕಾರ್ಯ............ ನಮ್ಮ ಬಲಹೀನತೆಯನ್ನು ಮರೆಮಾಚಿಕೊಳ್ಳುವ ಕಾರ್ಯ..............
ಸೊರ್ರನೆ ಸುರಿಯುತ್ತಿರುವ ಮಳೆಯ ಹಿತಕರವಾದ ಚಳಿಯ ಆಸ್ವಾದನೆಗಾಗಿ ಹೊದ್ದಿರುವ ಅತ್ಯಾಧುನಿಕ ಬೆಚ್ಚಬೆಚ್ಚನೆಯ ಹೊದಿಕೆಗಳನ್ನು ಬದಿಗೆ ಸರಿಸಿ ಹಾಸಿಗೆಯಿಂದೆದ್ದು, ಹದವಾದ ಬಿಸಿನೀರಿಗೆ ಮೈಯೊಡ್ಡಿ ಸುಗಂಧ ಬೀರುವ ಸಾಬೂನನ್ನು ತಿಕ್ಕಿತಿಕ್ಕಿ ನೊರೆ ಬರಿಸಿ ಸ್ನಾನ ಶೌಚಾದಿಗಳನ್ನು ತೀರಿಸಿಕೊಂಡದ್ದಾಯಿತು. ಇಂತಹ ಅಹ್ಲಾದಕರ ಹವೆಯಲ್ಲಿ ಸುಖನಿದ್ದೆಯನ್ನು ಆಸ್ವಾದಿಸಲು ಅಡ್ಡಿಯಾಗಿರುವ ಜವಾಬ್ದಾರಿಯನ್ನು ಶಪಿಸಿಕೊಳ್ಳುತ್ತಲೇ ಶ್ವೇತವಸ್ತ್ರಧಾರಿಗಳಾಗಿ ಕೂದಲನ್ನು ತಿದ್ದಿತೀಡಿಕೊಂಡದ್ದಾಯಿತು. ಹಲ್ಲನ್ನು ಸಿಕ್ಕಿಸಿಕೊಂಡು ಕನ್ನಡಿಯಲ್ಲಿ ನಮ್ಮನ್ನೇ ನಾವು ನೋಡಿಕೊಂಡೆವು. ಬಿಳಿಯ ಷರ್ಟಿನ ಮೇಲೆ ಬಿಳಿಯ ಅಂಗವಸ್ತ್ರವನ್ನೂ ಹೊದ್ದುಕೊಂಡೆವು. ನಮ್ಮ ನೋಸಿಯಾ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾಸ್ಟಾಂಗವೆರಗಿದ್ದಾಯಿತು. ಪರಿಚಾರಕರು ಓಡೋಡಿ ಸಿದ್ಧವಾಗಿಸಿರುವ ಉಪಾಹಾರವನ್ನು ಮೆದ್ದುಕೊಂಡೆವು. ಈ ಹಾಳದ ತುತ್ತೂರಿಯವರು ಏನೇನು ತಲೆತಿನ್ನುವ ಪ್ರಶ್ನೆಗಳನ್ನು ಕೇಳುತ್ತಾರೋ...........? ಸತ್ತವರು ಹೋದರು......... ಈ ಮಾರಿಗಳು ಬೇಡದ ಪ್ರಶ್ನೆ ಕೇಳಿಯೇ ನಮ್ಮನ್ನು ಸಾಯಿಸುತ್ತಾರೆ. ಇರಲಿ...... ಕೆಲವೇ ದಿನಗಳಲ್ಲಿ ಎಲ್ಲರೂ ಎಲ್ಲವನ್ನೂ ಮರೆಯುತ್ತಾರೆ. ಅಷ್ಟರ ತನಕ ನಾವು ಹೇಗಾದರೂ ಸುಧಾರಿಸಿಕೊಳ್ಳಬೇಕಿದೆ. ಅಹ್! ಸಭೆ ತುಂಬಿ ತುಳುಕಾಡುತ್ತಿದೆ....... ಸಂತುಷ್ಟರು, ಅಸಂತುಷ್ಟರು, ಸಂತ್ರಸ್ತರು, ವಂಧಿ ಮಾಗದರು, ಭಟ್ಟಂಗಿಗಳು..... ಅಳುತ್ತಿರುವವರು..... ದುಃಖಿತರು........ ಛೇ....... ಛೇ....... ಛೇ............. ನೋಡೋಣ ಏನೇನಾಗುತ್ತದೆಯೋ........?
ಯಾರಲ್ಲೀ......?
ಸ್ವಾಮೀ..... ದಿಗಂ ಬರಂ ಅವರೇ........ ನಮ್ಮೀ ಅಪರಿಮಿತ ಸಹನಾ ಶಕ್ತಿಯ ದೇಶದೋಳ್ ಸಾಮಾನ್ಯ ಪ್ರಜೆಗಳಿಗೆ ಸಂಪೂರ್ಣ ಸುರಕ್ಷೆ ಎಂಬುದು ಮರೀಚಿಕೆಯೇ? ಉಗ್ರರು ಎಲ್ಲಿ ಬೇಕೆಂದರಲ್ಲಿ, ಯಾವಾಗ ಬೇಕೆಂದರಾಗ ಅಟ್ಟ ಹಾಸ ಗೈಯುತ್ತಲೇ ಇದ್ದರೂ ತಮ್ಮಂತಹವರು  ಎಂದಿನಂತೆ ನಿರಾಳವಾಗಿಯೇ ಇದ್ದೀರೀ........
ಭಾವವತರೇ.........., ಏನು ನಿಮ್ಮ ಮಾತಿನ ಅರ್ಥ? ಈ ನಮ್ಮ ಇಷ್ಟು ವಿಶಾಲವಾದ; ಪ್ರಜೆಗಳೇ ಪ್ರಭುಗಳಾಗಿರುವ ನಾಡಿನಲ್ಲಿ ಒಳಗಣ - ಹೊರಗಣ ಪ್ರಜೆಗಳಿಗೆ, ಅಪಾರವಾದ ಸ್ವಾತಂತ್ರ್ಯವಿದೆ. ಏನೋ ಬಾಂಬು ಪ್ರಿಯರಿಗೆ ಆಗೀಗ ನಮ್ಮ ದೇಶದಲ್ಲಿ ಬಂದು ಮನಸೋ ಇಚ್ಛೆ ದೀಪಾವಳಿ ಆಡುವ ಹುಮ್ಮಸ್ಸು. ಬರುತ್ತಾರೆ ಪಟಾಕಿ ಸಿಡಿಸುತ್ತಾರೆ. ನಮ್ಮ ಮಂದಿಗೆ ಬುದ್ಧಿಯಿಲ್ಲ. ಆ ಪಟಾಕಿಯಡಿ ಸಿಲುಕಿ ಸಾಯುತ್ತಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜನರಿನ್ನೂ ಹಸಿವಿನಿಂದಲೇ ಸಾಯುತ್ತಿರುವಾಗ ಹೀಗೆ ಒಂದಿಷ್ಟು ಮಂದಿ ಸಾಯುವುದೊಂದು ದೊಡ್ಡ ವಿಚಾರವೇ? ದಿನ ಬೆಳಗಾದರೇ ಪತ್ರಿಕೆಗಳಲ್ಲಿ ಸತ್ತವರ ಎಷ್ಟು ಫೋಟೋ ಬರುತ್ತಿಲ್ಲ? ಅಪಘಾತದಿಂದ, ನೀರಿನಲ್ಲಿ ಮುಳುಗಿ, ಬೆಂಕಿ ಬಿದ್ದು, ಪರಸ್ಪರ ಬಡಿದಾಡಿಕೊಂಡು ಅಷ್ಟೊಂದು ಮಂದಿ ಸಾಯುತ್ತಾರೆ, ಅವರಂತೆ ಇವರೆಂದು ಪರಿಗಣಿಸಲು ನಿಮಗೇನು ದಾಡಿ? ಒಂದೆಡೆ ಜನಸಂಖ್ಯೆ ಏರುತ್ತಿದೆ ಎಂದು ಬೊಬ್ಬಿಕ್ಕುವವರೂ ನೀವೇ..... ಇತ್ತ ಸಾಯುತ್ತಾರೆಂದಾರೆ ಬೊಬ್ಬಿಕ್ಕುವವರೂ ನೀವೇ........... ಇಷ್ಟಕ್ಕೂ ಮೊನ್ನೆಯ ದೀಪಾವಳಿ ಆಚರಣೆಯಲ್ಲಿ ವಿದೇಶಿಯರೇನಾದರೂ ಸತ್ತಿದ್ದಾರಾ? ಹಾಗದರೆ ಮರುಗಬೇಕಿತ್ತು. ಸತ್ತವರೆಲ್ಲ ಇಲ್ಲಿನ ಸ್ಥಳೀಯರು. ಸತ್ತರೇನಾಯಿತು? ಅವರಿಗೆ ಪರಿಹಾರ ನೀಡಲಾಗುತ್ತದೆ. ಅವಶ್ಯಕತೆ ಇದ್ದರೆ ಆ ಪರಿಹಾರದ ಚೆಕ್‌ಗಳು ಪಾಸಾಗದಂತೆಯೂ ಮಾಡಲಾಗುತ್ತದೆ......!
ಸ್ವಾಮೀ ಗೃಹ ಉಸ್ತುವಾರಿಗಳೇ....................    ಹಾಗಾದರೆ ನಮ್ಮ ಈ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ ಜನರಿಗೆ ರಕ್ಷಣೆ ಇಲ್ಲವೇ.....?
ಜನರಿಗೆ ರಕ್ಷಣೆ ಇಲ್ಲ ಎಂದರೆ ಏನರ್ಥ ಭಾಗವತರೇ...? ನಿಮಗೆ ಕಣ್ಣು ಕಿವಿಗಳು ನೆಟ್ಟಗಿವೆಯೋ.......? ಪ್ರಜಾ ಪ್ರಭುತ್ವ ಅಂದರೇನು? ಪ್ರಜೆಗಳದ್ದೇ ಆಳ್ವಿಕೆ ತಾನೆ.....? ಇದಕ್ಕಾಗಿ ಜನಪ್ರತಿನಿಧಿಗಳನ್ನು ನಿಮ್ಮಂತಹ ಜನರೇ ತಾನೆ ಆರಿಸುವುದು.....? ಹಾಗಾಗಿ ಜನರನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳಿಗೆ ರಕ್ಷಣೆಯನ್ನು ಅಗತ್ಯವಿದ್ದರೂ.... ಇಲ್ಲದಿದ್ದರೂ ಒದಗಿಸುತ್ತಿಲ್ಲವೇ.....? ಹಾಗಾಗಿ ಜನಪ್ರತಿನಿಧಿಗಳಿಗೆ ರಕ್ಷಣೆ ನೀಡಿದರೆ ಅದು ಅವರು ಪ್ರತಿನಿಧಿಸುತ್ತಿರುವಂತಹ ಜನರಿಗೆ ನೀಡಿದಂತಹ ರಕ್ಷಣೆಯೇ ಆಗುತ್ತದೆ. ಸರ್ಕಾರ ಇದಕ್ಕಾಗಿ ಎಷ್ಟು ಖರ್ಚು ಮಾಡುತ್ತಿಲ್ಲ.... ನಿಮ್ಮಂತಹ ರಣ ಪೆದ್ದರಿಗೆ ಇದು ಅರ್ಥವಾಗುವುದಾದರೂ ಹೇಗೆ.......?
ಶ್ವೇತಾಂಬರಂ ಅವರೇ.... ಹಾಗಾದರೆ ಇದು ಭದ್ರತಾ ವೈಫಲ್ಯವೇ.....?
ಯಾರು ಹೇಳಿದ್ದು ನಿಮಗೆ ಭದ್ರತಾ ವೈಫಲ್ಯವೆಂದು....? ನಾವೆಲ್ಲರೂ ಭದ್ರತಾ ವೈಫಲ್ಯ ಅಲ್ಲವೇ ಅಲ್ಲವೆಂದು ಸಾರಾಸಗಟಾಗಿ ಹೇಳಿಕೆ ನೀಡಲಿಲ್ಲವೇ...? ಎಲ್ಲರೂ ಎದ್ದು ಬಿದ್ದು ಘಟನೆಯನ್ನು ಖಂಡಿಸಿದ್ದೇವೆ. ಸತ್ತವರಿಗೆ ಸಂತಾಪವನ್ನೂ ಸೂಚಿಸಿದ್ದೇವೆ. ಬದುಕುಳಿದು ದಿನನಿತ್ಯ ಸಾಯುತ್ತಿರುವ ಸತ್ತವರ ಕುಟುಂಬಿಕರಿಗೆ ಸಾಂತ್ವಾನವನ್ನೂ ಹೇಳಿದ್ದೇವೆ. ಆಸ್ಪತ್ರೆಗೂ ಭೇಟಿ ನೀಡಿದ್ದೇವೆ. ಎಲ್ಲವೂ ಮಾಧ್ಯಮಗಳಲ್ಲಿ ಭಿತ್ತರವಾಗಿವೆ. ಇನ್ನೇನು...........?   ಸರ್ಕಾರ ಮಾಡಬೇಕಾದುದನ್ನೆಲ್ಲ ಮಾಡಿದೆ. ಏನೋ ಪಾಪ, ಕಳೆದ ಭಾರಿ 2008ರಲ್ಲಿ ದೀಪಾವಳಿ ಆಚರಿಸಲು ನೆರೆ ಊರಿಂದ ಬಂದ ನಮ್ಮ ನೆಂಟ ಕಸಬ ವರ್ಷಗಳಿಂದ ಜೈಲಿನಲ್ಲೇ ಇದ್ದಾನೆ. ನಮ್ಮ ಅತಿಥಿಯಾಗಿರುವ (ಅವನ ಅಪರಾಧ ಸಾಬೀತಾಗುವ ತನಕ ಅವನು ಅತಿಥಿ ತಾನೆ?) ಅವನಿಗೇ ಅದೇ ಜೈಲಿನಲ್ಲಿ ಕುಳಿತೂ ಕುಳಿತೂ ಬೋರ್ ಆಗುವುದಿಲ್ಲವೇ...? ಜೈಲಿನಲ್ಲಿ ಇದ್ದರೇನಾಯಿತು? ಹುಟ್ಟು ಹಬ್ಬ ಆಚರಿಸಿಕೊಳ್ಳಬಾರದೆಂದಿದೆಯೇ? ಇಷ್ಟಕ್ಕೂ ಆತ ಆಪಾದಿತ. ಇದನ್ನು ಮನಗಂಡ ಆತನ ಬಂಧುಗಳು ಇಲ್ಲಿಬಂದು ಅವರ ಸಂಪ್ರದಾಯದಂತೆ ಹುಟ್ಟುಹಬ್ಬ ಆಚರಿಸಿದರು. ಸಂಭ್ರಮಕ್ಕಾಗಿ ಒಂದೆರಡು ಪಟಾಕಿ ಸಿಡಿಸಿದರು. ಇದಕ್ಕೆ ಮಾಧ್ಯಮಗಳು, ಜನರು ಇಷ್ಟೊಂದು ಹುಯಿಲೆಬ್ಬಿಸುವುದು ಯಾಕೆಂದು ನಮ್ಮ ಸರ್ಕಾರಕ್ಕೆ ಗೊತ್ತಾಗ್ತಾ ಇಲ್ಲಪ್ಪ. ಆಯ್ತೀಗ... ಜನರಿಗೆ ಇದು ಇಷ್ಟವಿಲ್ಲ ಎಂದಾದರೆ, ಇನ್ನು ಮುಂದೆ ಇಂತದನ್ನು ತಡೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂಬುದಾಗಿ ನಮ್ಮ ನಿಧಾನಿಗಳಾದ ಮಣಮಣ ಸಿಂಗರೇ ಬಾಯ್ಬಿಟ್ಟು ಹೇಳಿಲ್ಲವೇ...? ಎಷ್ಚು ಸಮಯವಾಗಿತ್ತು ಅವರು ಬಾಯಿಗೆ ಬೀಗ ಹಾಕಿ ಕುಳಿತು. ಇದೀಗ ಅವರೇ ಬಾಯ್ಬೀಗ ತೆರೆದಿದ್ದಾರೆಂದರೇ... ನಿಮಗೆಲ್ಲ ಅರ್ಥವಾಗುತ್ತಿಲ್ಲವೇ.....?
ನಮ್ಮ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ, ರಕ್ಷಣಾ ವ್ಯವಸ್ಥೆ ಸರಿಯಾಗಿದೆಯೇ.....?
ಏನಾಗಿದೆ ಕಾನೂನು ಸುವ್ಯವಸ್ಥೆಗೆ. ಕಾನೂನು ರಾಕ್ಷಸರು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದವರನ್ನು, ಮಾಡದೇ ಇರುವವರನ್ನು, ಅಸಹಾಯಕರನ್ನು ಅವಕಾಶ ಸಿಕ್ಕಿದಾಗ ಹೇಗೆಲ್ಲ ರುಬ್ಬುತ್ತಾರೆ...? ನೂರು ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಚಿಂತಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನಮ್ಮ ನೀತಿಯಲ್ಲವೇ.....? ನಮ್ಮ ಭಾವೀ ಪ್ರಧಾನಿಗಳೆಂದು ಬಿಂಬಿತವಾಗಿರುವ ಯುವರಾಜರೇ ಹೇಳಿಲ್ಲವೇ....? ಇತರೇ ಪಟಾಕಿ ಸಿಡಿಯುವ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಎಷ್ಟೋ ಪರ್ವಾಗಿಲ್ಲ.  ಆಫ್ಘಾನಿಸ್ತಾನ, ಇರಾಕ್‌ಗಳಲ್ಲಿ ಪ್ರತಿದಿನ ಪಟಾಕಿಗಳು ಸಿಡಿಯುತ್ತಿವೆ ಎಂಬುದಾಗಿ ಸಾಕ್ಷಾತ್ ಯುವರಾಜರೇ ಹೇಳಿದ್ದಾರೆಂದ ಮೇಲೆ... ನಿಮ್ಮದೇನು ಅಧಿಕಪ್ರಸಂಗ...?
ಸ್ವಾಮೀ ಬರಂ............. ಹಾಗಾದರೆ ನಿಮ್ಮ ಪ್ರಕಾರ ಎಲ್ಲಾ ಲೆಕ್ಕಾಚಾರಗಳೂ ಸರಿ ಇವೆ ಎಂದರ್ಥವೇ......?
ಏನು ನಿಮ್ಮ ಕರ್ಮದ ಲೆಕ್ಕಾಚಾರ. ಎಲ್ಲವೂ ಸರಿ ಇದೆ. ಎಷ್ಟೆ ಸರಿಇದ್ದರೂ ಕೆಲವೊಮ್ಮೆ ಲೋಪದೋಷಗಳು ಸಹಜ. ಕಾಲಕಾಲಕ್ಕೆ ತಕ್ಕಂತೆ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ. ನೀವು ಲೆಕ್ಕಾಚಾರ ಅಂದಾಗ ನಾವಿಲ್ಲಿ ಲೆಕ್ಕಾಚಾರಕ್ಕೆ ಸಂಬಂಧಿಸಿದ ನಮ್ಮದೆ ಸ್ವಂತ ಉದಾಹರಣೆ ನೀಡಬೇಕಾಗುತ್ತದೆ. ನೋಡಿ ಮಹಾನ್ ಚುನಾವಣೆ ನಡೆದಾಗ ನಮ್ಮ ಕ್ಷೇತ್ರದಲ್ಲಿ ನಮ್ಮ ವಿರೋಧಿ ಪಕ್ಷ (ಒಮ್ಮೊಮ್ಮೆ ಅದೇ ಪಕ್ಷ ಮೈತ್ರಿ ಪಕ್ಷವೂ ಆಗುತ್ತದೆ) ಒಂದರ ಪ್ರತಿನಿಧಿ ಸುಮಾರು ಎರಡು ಸಾವಿರ ಮತಗಳಲ್ಲಿ ನಮ್ಮನ್ನು ಸೋಲಿಸಿದರೆಂದಾಯಿತು. ಇದಾದರೆ ಲೋಪದೋಷದ ತಪ್ಪು ಲೆಕ್ಕಾಚಾರ. ಮರಳಿ ಲೆಕ್ಕ ಮಾಡಿದಾಗ ನಾವು ಗೆಲ್ಲಲಿಲ್ಲವೇ? ಒಂದೊಮ್ಮೆ ಆ 'ಲೋಪದೋಷ' ಸರಿಪಡಿಸದೇ ಇರುತ್ತಿದ್ದರೆ ನಾವಿಂದು ಈ ಆಯಕಟ್ಟಿನ ಜಾಗದಲ್ಲಿ ಇರುತ್ತಿದ್ದೆವೇ......? ಇದನ್ನು ಪ್ರಶ್ನಿಸಿ ಖಟ್ಲೆ ಹೂಡಲಾಗಿದೆ. ಇದು ಮುಗಿಯುವ ವೇಳೆ ನಾವು ನಮ್ಮ ಅಧಿಕಾರಾವಧಿ ಮುಗಿದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರೂ ಕುಳಿತುಕೊಂಡಿರಬಹುದು. ಹಾಗಾಗಿ ನೀವುಗಳೆಲ್ಲ ನಮ್ಮ ಆಡಳಿತೆಯ ಕುರಿತು ತಪ್ಪು ಲೆಕ್ಕಾಚಾರ ಹಾಕಬೇಡಿ.
ಹಾಗಾದರೆ ನಮ್ಮಂತಹ ಜನಸಾಮಾನ್ಯರ ಗತಿಯೇನು ಸ್ವಾಮೀ.......?
ಏನಾಗಿದೆ ಜನಸಾಮಾನ್ಯರಿಗೆ.......? ಜನರು ಆರಾಮವಾಗಿದ್ದಾರೆ. ಮಹಾ ನಗರಿ ಮುಂಬಯಿಯನ್ನೇ ತೆಗೆದುಕೊಳ್ಳಿ. ಇಲ್ಲಿನ ಜನರು ಅಲ್ಲಲ್ಲಿ ಆಗಾಗ ಪಟಾಕಿಗಳು ಸಿಡಿಯುವುದು ಸಾಮಾನ್ಯ ಎಂಬಂತೆ ಒಗ್ಗಿಕೊಳ್ಳಲಿಲ್ಲವೇ...? ಪ್ರತೀ ಪಟಾಕಿ ಸಿಡಿದಾಗಲೂ ಅವರು ಮತ್ತಷ್ಟು ಸದೃಢರಾಗುತ್ತಿದ್ದಾರೆ ಮತ್ತು ಬದುಕಿನ ಆಸೆಯನ್ನು ಬಿಡುತ್ತಿದ್ದಾರೆ. ಸಾಯಬೇಕಿಂದಿದ್ದರೆ ಬಾಂಬೇ ಸಿಡಿಯಬೇಕೇನೂ? ನಡೆಯುವಾಗ ಎಡವಿ ಬಿದ್ದು ಸಾಯೋದಿಲ್ಲವಾ.....? ಎಲ್ಲವೂ ವಿಧಿ ಲಿಖಿತ. ಮಾನವನ ವಿಧಿಯನ್ನು ತಪ್ಪಿಸಲಾಗುತ್ತದೆಯೇ.....? ಈಗ ನೋಡಿ ನಮ್ಮಂತವರನ್ನು ಸಹಿಸಿಕೊಳ್ಳುವುದು ನಿಮ್ಮ ವಿಧಿ.
ಭಾಗವತರೇ.... ಅನಗತ್ಯ ಪ್ರಶ್ನೆಗಳನ್ನೆಸೆಯುತ್ತಾ ಕಾಲ ಹರಣ ಮಾಡಬೇಡಿ.... ನಮಗೆ ನಮ್ಮನ್ನು, ನಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳುವಂತಹ, ವಿರೋಧ ಪಕ್ಷಗಳ ಬಾಯಿಮುಚ್ಚಿಸುವ ಮತ್ತಿತರ ಅನೇಕ ರಾಜಕಾರ್ಯಗಳಿವೆ.
ಸ್ವಾಮಿ ದಿಗಂ ಅಂಬರರೇ............ ಅರ್ಥವಾಯಿತು ನಿಮ್ಮ ಅವಸರ.
ಭಗವಂತನು ನಿಮ್ಮಂತಹ ಆಡಳಿತಾರೂಢರಿಗೆ ಸದ್ಬುದ್ಧಿಯನ್ನು ಇನ್ನಾದರೂ ಕರುಣಿಸಿ ಭಯದಿಂದ ಭಾರತಾಂಬೆಯನ್ನು ಮುಕ್ತಿಗೊಳಿಸಲೀ ಎಂದು ಪ್ರಾರ್ಥಿಸುತ್ತಾ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೇ...........
||ಸರ್ವೇಜನೋ ಸುಖಿನೋಭವಂತು||
||ಮಂಗಳಂ||

ಮಂಗಳವಾರ, ಏಪ್ರಿಲ್ 26

ಅಂಗಿಯೊಳಗಿಂದ ಇಣುಕಿದ ಲುಂಗಿ

ನಾನೊಬ್ಬಳು ಪ್ರೊಫೆಸರ್! ಛೇ,ಛೇ, ವಿದ್ವತ್ತು ಪಾಂಡಿತ್ಯ ಈ ಎಲ್ಲ ವಿಚಾರದಲ್ಲಲ್ಲ. ಮರೆವಿನ ವಿಚಾರದಲ್ಲಿ ಮಾತ್ರ. ಮೊಬೈಲ್ ಕೈಲೇ ಹಿಡಿದುಕೊಂಡು ಊರೆಲ್ಲ ಮುಗುಚಿ ಕೊನೆಗೆ ಸ್ಥಿರವಾಣಿಯಿಂದ ರಿಂಗ್ ಮಾಡಿದರೆ, ನಿನ್ನ ಕೈಯೊಳಗೇ ಇದ್ದೇನೆ ಪೆದ್ದಿ ಎಂಬಂತೆ ಕುಂಯ್ ಗುಟ್ಟುತ್ತಾ ಅದು ನನ್ನ ಅಣಕಿಸುತ್ತದೆ. ಹೀಗೆ, ಪೆನ್ನು, ಬ್ಯಾಗು ಫೈಲು ಅಂತ ಹುಡುಕಾಡುತ್ತಾ, ನಮ್ಮಾಫಿಸಿನ ಹುಡುಗನ ಕೈಯಲ್ಲೂ ಹುಡುಕಾಡಿಸಿ, ಇಲ್ಲೇ ಇದೆ ನೋಡಿ ಅನ್ನುತ್ತಾ ಆತ ಹುಡುಕಿ ಕೊಟ್ಟಾಗ, ಹೌದಲ್ಲಾ ಅನ್ನುತ್ತಾ ಹಲ್ಲು ಕಿರಿಯಬೇಕಾಗುತ್ತದೆ.


ಈ ಹಿಂದೆ ಒಬ್ಬಳೇ ಮನೆ ಮಾಡಿದ್ದಾಗ, ಹೋಟೇಲು ತಿಂಡಿ ತಪ್ಪಿಸಬೇಕೆಂದು ಬಹಳ ಕಷ್ಟದಲ್ಲಿ ನನ್ನ ಸಕ್ಕರೆ ಸವಿ ನಿದ್ದೆಯನ್ನೆಲ್ಲ ಬಿಟ್ಟು ಬೇಗನೆದ್ದು, ತಿಂಡಿ ತಯಾರಿಸುತ್ತಿದ್ದೆ. ಸ್ನಾನ ಮಾಡಿ ರೆಡಿಯಾಗಿ ಆಫೀಸಿಗೆ ಹೊರಟು, ಕೊನೆಗೆ ಏನೋ ಮರೆತೆ.... ಮರೆತೆ.... ಅನ್ನುತ್ತಾ ಗಡಿಯಾರ ನೋಡಿ ಚಪ್ಪಲಿ ಮೆಟ್ಟುತ್ತೇನೆ. ಅಫೀಸಿನಲ್ಲಿ ನನ್ನ ಕುರ್ಚಿಯಲ್ಲಿ ಕುಳಿತಾಗ ಅಲಾರಾಂ ಬಾರಿಸಿದಂತೆ ನಿಗದಿತ ಸಮಯಕ್ಕೆ ಸರಿಯಾಗಿ ಹೊಟ್ಟೆ ತಾಳ ಹಾಕುವಾಗಲೇ ನೆನಪು, ಮಾಡಿದ ತಿಂಡಿಯನ್ನು ತಿಂದೇ ಇಲ್ಲ. ಹಿಂದೊಮ್ಮೆ ಹಾಸ್ಟೇಲಿನಲ್ಲಿದ್ದಾಗ ಆಫೀಸಿಂದ ಬಂದು ಕೆಲಸವೆಲ್ಲ ಮುಗಿಸಿ ಸಾಯಂಕಾಲದ ಹೊತ್ತು ವಿರಮಿಸುತ್ತಾ ಇತರರೊಂದಿಗೆ ಕುಳಿತಿದ್ದಾಗ ಗೆಳತಿಯೊಬ್ಬಳು ಶಾನಿ ಶಾನಿ ಅನ್ನುತ್ತಾ ಪ್ರೀತಿ ತೋರಿ, ನೀಟಾಗಿ ಫ್ರೆಂಚ್ ಜಡೆ ಹಾಕಿ ಬಿಟ್ಟಿದ್ದಳು. ಮರು ದಿನ ಎದ್ದು ಕ್ಲಾಸಿಗೂ ಆಫೀಸಿಗೂ ಹೋಗಿದ್ದೆ. ಏನು ಒಂಥರಾ ಇದ್ದೀರಿ, ಹುಶಾರಿಲ್ವಾ...? ಎಂಬ ಸಹೋದ್ಯೋಗಿಗಳ ಪ್ರಶ್ನೆಗೆ, ಇವರಿಗೆಲ್ಲಾ ಏನಾಗಿದೆ ಇವತ್ತು ಅಂತ ಯೋಚಿಸಿದ್ದೆ. ಆಫೀಸಿಂದ ಬಂದು ಸ್ನಾನಕ್ಕೆ ಹೊಡುವ ವೇಳೆ ಜಡೆಗೆ ಕೈಯಿಕ್ಕುವಾಗಲೇ ತಿಳಿದ್ದು, ಈ ದಿನ ತಲೆಗೆ ಬಾಚಣಿಗೆ ಹಾಕಲೇ ಇಲ್ಲ ಎಂಬುದು.


ನಾನು ತುಂಬ ಚಿಕ್ಕವಳಿದ್ದಾಗ, ಅಂದರೆ ನಾಲ್ಕೈದು ವರ್ಷ ಇರಬಹುದು. ಆಗೆಲ್ಲ ನಂಗೂ ಮನೆಯಲ್ಲಿ ಉಡಲು ಅಣ್ಣನಂತೆ ಲುಂಗಿಯೇ ಬೇಕೆಂದು ಹಠ ಹಿಡಿದಿದ್ದೆ. ನನ್ನ ಹಠಕ್ಕೆ ಯಾರು ಮಣಿಯುತ್ತಾರೆ. ಒಂದೆರಡು ದಿನ ಅಣ್ಣನ ಲುಂಗಿ ಟ್ರೈ ಮಾಡಿದೆ. (ಅವನು ತಲೆಗೆ ಹಾಕುವ ಕುಟ್ಟಿಯನ್ನೂ ಲೆಕ್ಕಿಸದೆ). ತೀರಾ ದೊಡ್ಡ ಅಳತೆಯದ್ದಾಗಿದ್ದ ಅದು ಸರಿ ಹೊಂದುತ್ತಿರಲಿಲ್ಲ. ಬದಲಿಗೆ ಎಡವಿ, ತೊಡರಿ ಮನೆಯ ಮೆಟ್ಟಿಲಲ್ಲಿ ತಲೆಕೆಳಗಾಗಿ ಬಿದ್ದು ಗಾಯ ಆಯಿತು ಅಷ್ಟೆ. ಗಾಯ ಆದರೇನು, ಹಠ ಬಿಡಲಾಗುತ್ತದಾ? ಬೇಕಂದರೆ ಬೇಕೆ.


ಕೊನೆಗೊಂದು ದಿನ ಅಮ್ಮ ತೋಟಕ್ಕೆ ಹೋಗಿದ್ದ ವೇಳೆ ಅವರ ಚೆಂದದ ಮಗ್ಗದ ಸೀರೆಯನ್ನೆ ಕತ್ತಿ(ಕುಡುಗೋಲು)ಯೊಂದರ ಸಹಾಯದಿಂದ ಹರಿದು ನನ್ನಳತೆಗೆ ಆಗುವ ನಾಲ್ಕೈದು ಲುಂಗಿ ಮಾಡಿ ಜೋಡಿಸಿ, ಅಮ್ಮ ಬರುತ್ತಲೇ ಅರ್ಧ ದಾರಿಗೆ ಓಡಿ ಹೋಗಿ ನನ್ನ ಸಾಹಸ ಪ್ರದರ್ಶಿಸಿದ್ದೆ. ತೋಟದ ಕೆಲಸದಿಂದ ಸುಸ್ತಾಗಿ ಬರುತ್ತಲೇ, ಅವರ ಒಂದು ಒಳ್ಳೆಯ ಸೀರೆಗೆ ಒದಗಿದ ದುರ್ಗತಿಯನ್ನು ಕಂಡು ನಿತ್ತರಿಸಲಾಗದ ದುಃಖ, ಕೋಪ, ಬಳಲಿಕೆ ಎಲ್ಲ ಏಕ ಕಾಲಕ್ಕೆ ಉಮ್ಮಳಿಸಿ ಅಮ್ಮ ನನ್ನ ಬೆನ್ನಿಗೆರಡು ಗುಡ್ಮಕಾಯಿ (ಗುದ್ದು) ನೀಡಿ ನನ್ನ ಸಾಹಸಕ್ಕೆ ಸನ್ಮಾನವಿತ್ತಿದ್ದರು.  ಲಂಗ ಇಲ್ಲವೇ ಅಂಗಿ ಹಾಕ ಬೇಕಾದ ಪೋರಿಯ ಲುಂಗಿಯ ವರಸೆ ಅವರಿಗೆ ಇರಿಸುಮುರಿಸುಂಟು ಮಾಡಿದ್ದಲ್ಲದೆ, ವರ್ಷಕ್ಕಿಡೀ ಒಂದೇ ಸೀರೆ ಧಕ್ಕುತ್ತಿದ್ದ ಆ ಕಂಟ್ರೋಲ್ ಕಾಲದಲ್ಲಿ ಇದ್ದ ಒಂದು ಒಳ್ಳೆಯ ಸೀರೆಗೆ ಉಂಟಾದ ದುರವಸ್ಥೆ ಅವರನ್ನು ಕಂಗೆಂಡಿಸಿತ್ತು.


ಆದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳವ ತಲೆ ಇಲ್ಲದಿದ್ದ ನಾನು ಮಾತ್ರ, ಅದೇ ಸೀರೆಯ ತುಂಡುಗಳನ್ನೇ ಲುಂಗಿಯಂದದಿ ಉಟ್ಟು ಥೇಟ್ ಅಣ್ಣನಂತೆಯೇ ಅದನ್ನು ಎತ್ತಿ ಕಟ್ಟಿ,  ಕೊಂಬ ಚೇಳಿನಂತಹ ಮೋಟು ಜಡೆಯನ್ನು ಕುಣಿಸುತ್ತಾ ಓಡಾಡಿ ಖುಷಿ ಪಡುತ್ತಿದ್ದೆ. ಅಪರೂಪಕ್ಕೆ ನೆಂಟರ ಮನೆ ಹೋಗುವಾದಲೂ ನನಗೆ ಅದೇ ನೈಟ್ ಡ್ರಸ್. ಹೀಗೆ ಅದೊಂದು ದಿನ ನಮ್ಮ ಕುಟುಂಬದ ಹಿರಿಮನೆಯಲ್ಲಿ ಹರಿಸೇವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿಗೆ ನನ್ನ ಅಮ್ಮ ಯಾ ಅಕ್ಕಗಳು ಬಂದಿರಲಿಲ್ಲ. ನಾನು - ಅಪ್ಪ ಮಾತ್ರ ಹೋಗಿದ್ದೆವು. ಅತ್ತಕಡೆ ಅಪ್ಪ ಹರಿಸೇವೆಯಲ್ಲಿ ಮಗ್ನರಾಗಿದ್ದರೆ, ನಾನಿತ್ತ ಇತರ ಮಕ್ಕಳೊಂದಿಗೆ ಆಟಕ್ಕಿಳಿದಿದ್ದೆ. ಅರ್ಜೆಂಟ್ ಸುಸು ಆಗಿ ಏನು ಮಾಡಬೇಕೆಂದು ತೋರದೆ ಅಳಲಾರಂಭಿಸಿದ್ದೆ. ನನ್ನ ಕಷ್ಟ ಕಂಡ ದೊಡ್ಡಪ್ಪನ ಮಗಳೊಬ್ಭಳು ನನ್ನನ್ನು ಅಕ್ಕರೆಯಿಂದ ಕರೆದೊಯ್ದು, ನನಗೆ ಅನುಕೂಲವಾಗಲೆಂದು ನಾನು ತೊಟ್ಟಿದ್ದ ಪೆಟ್ಟಿಗೆಯಲ್ಲಿಡುತ್ತಿದ್ದ, ಕರ್ಪೂರದ ಘಮ ಸೂಸುತ್ತಿದ್ದ ವಿಶೇಷ ಸಂದರ್ಭದಲ್ಲಿ ಮಾತ್ರ ಧರಿಸುತ್ತಿದ್ದ ಅಂಗಿಯನ್ನು ಎತ್ತಿದ್ದೇ, ಅದುವರೆಗೆ ಅಂಗಿಯೊಳಗೆ ಅವಿತಿದ್ದ ನನ್ನ ಲುಂಗಿ ಇಣುಕಿತು. ಹೊರಡುವ ಆತುರದಲ್ಲಿ ಲುಂಗಿ ಬಿಚ್ಚಿಡಲು ಮರೆತೇ ಹೋಗಿತ್ತು! ಅದು ವರೆಗೆ ಅಂಗಿಯೊಳಗೆ ಲುಂಗಿ ಕಾಣುತ್ತಿದ್ದರೂ ನನಗದರ ಪರಿವೆಯೇ ಇರಲಿಲ್ಲ. ದೊಡ್ಡಪ್ಪನ ಮಗಳು ಇದೆಂತ ಅಪ್ಪೀ... ಅಂತ ಪ್ರಶ್ನಿಸಿದಾಗಲೇ ಗೊತ್ತಾದದ್ದು ಸಂಗತಿ. ಅಯ್ಯೋ ಶಿವನೇ.... ನಾಚಿಕೆಯಾಗಿ ಲೋಕವಿಲ್ಲ... ಕೊನೆಗೆ ಆಕೆಯೇ ಅದನ್ನು ಬಿಚ್ಚಿ ಮಡಚಿ ಅಪ್ಪನ ಬ್ಯಾಗಿನಲ್ಲಿ ಹಾಕಿಟ್ಟಿದ್ದಳು. ಆಕೆ ಈಗಲೂ ನನ್ನ ಕಂಡಾಗೆಲ್ಲ ಲುಂಗಿಯ ವಿಚಾರ ಎತ್ತದೆ ಇರುವುದಿಲ್ಲ.


ಒಂದಾನೊಂದು ಕಾಲದಲ್ಲಿ ನಾನು ಓದು ಮತ್ತು ಕೆಲಸ ಜತೆಜತೆಯಾಗಿ ಮಾಡುತ್ತಿದ್ದೆ. ಆಗೆಲ್ಲ ನನ್ನ ಜೀವನವೇ ಗಡಿಬಿಡಿಯಾಗಿತ್ತು. ಅದೊಂದು ದಿನ ಬೆಳ್ಳಂಬೆಳಗ್ಗೆ ಏದುಸಿರು ಬಿಡುತ್ತಾ ಓಡಿ ಹೋಗಿ ಕ್ಲಾಸಿನಲ್ಲಿ ಕುಳಿತರೆ ಲೆಕ್ಚರರ್ ಬಂದಿರಲಿಲ್ಲ. ನಾನೂ ಗೆಳತಿ ಲಲಿತೆಯೂ ಪಟ್ಟಾಂಗ ಹೊಡೆಯುತ್ತಿದ್ದೆವು. ಒಮ್ಮೆಗೆ ಮಾತು ನಿಲ್ಲಿಸಿದ ಆಕೆ, ಏನೋ ಸೋಜಿಗ ಕಂಡವಳಂತೆ ಯ್ಹೇ... ಅಂದು ನಗಲಾರಂಭಿಸಿದಳು. ವಿಷಯವೇನೆಂದು ತಿಳಿಯದ ನಾನು ಕೆಕರುಮಕರಾಗಿ ಆಕೆಯ ಮುಖವನ್ನೇ ನೋಡುತ್ತಾ ಕುಳಿತೆ. ನಕ್ಕು ಮುಗಿಸಿದ ಆಕೆ ನನ್ನ ಸೆಲ್ವಾರ್ ಕಮೀಜ್‌ನತ್ತ ಕೈ ತೋರಿ ಮತ್ತೆ ನಕ್ಕಳು. ನಸುಗತ್ತಲಲ್ಲಿ ಸರಿಯಾಗಿ ಕಂಡಿರಲಿಲ್ಲವೋ, ಗಡಿಬಿಡಿಯೋ, ತಿರುವು ಮುರುವಾಗಿ ಹಾಕ್ಕೊಂಡಿದ್ದೆ.


ಇಂತಹ ವಿಚಾರಗಳಲ್ಲಿ ನನ್ನ ಒಬ್ಬಳು ಸ್ನೇಹಿತೆಗೆ ಹೋಲಿಸಿದರೆ ನಾನು ಬೆಟರ್. ಆಗ ಕಾಯಿನ್ ಬಾಕ್ಸ್ ಫೋನ್ ಜಮಾನ. ಈಕೆ ಯಾರಿಗೋ ಫೋನ್ ಮಾಡಲು ಹೋದವಳು ಕಾಯಿನ್ ಹಾಕಿ ಎಷ್ಟೇ ಪ್ರಯತ್ನಿಸಿದರೂ ಫೋನ್ ಸಿಗುತ್ತಲೇ ಇರಲಿಲ್ಲ, ಜತೆಗೆ ಯಾವುದೇ ಸದ್ದೂ ಬರುತ್ತಿರಲಿಲ್ಲವಂತೆ. ಕಡೆಗೆ ಈಕೆಯ ಪರಿಪಾಟಲು ಕಂಡ ಬೂತಿನಲ್ಲಿದ್ದ ಹುಡುಗ ಈಕೆಯ ಸಹಾಯಕ್ಕೆ ಬಂದು ಪ್ರಯತ್ನಿಸಿದ. ಇದೇನಾಗಿದೆ ಫೋನ್‌ಗೆ ಅಂತ ಪರಿಶೀಲಿಸಿದರೆ, ಈಕೆ 50 ಪೈಸೆ ನಾಣ್ಯ ಹಾಕ್ಕೊಂಡು ಫೋನ್ ಮಾಡಲು ಪ್ರಯತ್ನಿಸಿದ್ದಳು. ಇದೇ ಗೆಳತಿ ಮತ್ತು ನಮ್ಮ ಇನ್ನೊಬ್ಬಳು ಡುಮ್ಮಿ ಸ್ನೇಹಿತೆ ಅದೊಂದು ದಿನ ಮುಂಜಾನೆ ಬೆಳಕು ಹರಿಯೋ ಮುನ್ನ ವಾಕ್ ಹೋಗಿದ್ದರಂತೆ. ವಾಕ್ ಮಗಿಸಿ ಬಂದು ನೋಡುವಾಗಲೇ ಆಕೆಗೆ ತಿಳಿದದ್ದು, ತಾನು ಚೂಡಿದಾರದ ದುಪ್ಪಟ್ಟದ ಬದಲಿಗೆ ಪ್ಯಾಂಟನ್ನೇ ದುಪ್ಪಟ್ಟ ತರ ಹೊದೆದುಕೊಂಡಿದ್ದದ್ದು!!!

ಸೋಮವಾರ, ಮಾರ್ಚ್ 7

ಕ್ರಿಕೆಟ್ ತಂಡಗಳೂ ನಮ್ಮ ಹೀರೋಗಳೂ...

ಇವತ್ತು ಬೆಳ್ಳಂಬೆಳಿಗ್ಗೆ ನನ್ನ ಇಮೇಲ್ ಖಾತೆ ತೆರೆದು ನೋಡಿದಾಗ ಮಹೇಶ್ ಭಟ್ರ ಸಂದೇಶವಿತ್ತು. "ನಿಮ್ಮ ಇತ್ತೀಚಿನ ಬರಹಗಳಲ್ಲಿ ಗಂಡನ ಮನೆಯ ವ್ಯವಹಾರಗಳನ್ನು ಗುರಿಯಾಗಿಸಿದ್ದೀರಿ. ಯಾಕೆ?" ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ "ಬೇರೆಯವರ ಗಂಡನ ಮನೆಯ ಬಗ್ಗೆ ಬರೆಯೋದಕ್ಕಿಂತ ನನ್ನ ಗಂಡನ ಮನೆಯ ವ್ಯವಹಾರಗಳನ್ನು ಬರೆಯುವುದೇ ಸೇಫ್ ತಾನೆ. ಹುಟ್ಟಾ ಸೋಂಬೇರಿಯಾಗಿರುವ ಮತ್ತು ತಲೆ ಇಲ್ಲದ ನನಗೆ, ಬೇರೆ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ" ಎಂದು ಉತ್ತರಿಸಿ ಬಚಾವಾಗಲು ಪ್ರಯತ್ನಿಸಿದ್ದೆ.

ಹೌದಲ್ವೇ... ಇತ್ತೀಚೆಗೆ ಇದೇ ವಿಷಯ ಜಾಸ್ತಿ ಆಗ್ತಾ ಉಂಟಾಂತ ಯೋಚಿಸುತ್ತಿರಬೇಕಾದರೆ ಜಂಗಮವಾಣಿಗೆ ಸಂದೇಶ ಒಂದು ಬಂತು. ಗೆಳತಿ ಸುಚಿತ್ರ ರವಾನಿಸಿದ್ದು. ವಿವಿಧ ಕ್ರಿಕೆಟ್ ತಂಡಗಳನ್ನು ನಮ್ಮ ಕನ್ನಡ ಸಿನಿಮಾ ಹೀರೋಗಳಿಗೆ ಹೋಲಿಕೆ ಮಾಡಿದ್ದಾರೆ ಈ ಚಟಾಕಿಯ ಸೃಷ್ಠಿ ಕರ್ತ. ನಿಮಗೂ ಯಾರಾದರೂ ಕಳುಹಿಸಿರಲೂ ಬಹುದು. ಇಲ್ಲವಾದರೆ ಸುಮ್ಮನೆ ನಕ್ಕು ಬಿಡಿ.
ಆಸ್ಟ್ರೇಲಿಯಾ ತಂಡ = ರಾಜ ಕುಮಾರ್
ಯಾವಾಗಲೂ ಹಿಟ್!
ದಕ್ಷಿಣ ಆಫ್ರಿಕಾ = ಶಂಕರ್ ನಾಗ್
ಪ್ರತಿಭಾವಂತ, ಆದರೆ ದುರಾದೃಷ್ಟವಂತ
ಶ್ರೀಲಂಕಾ = ಸುದೀಪ್
ಪ್ರತಿಭಾವಂತ, ಆದರೆ ನೋ ಹಿಟ್!
ಬಾಂಗ್ಲಾದೇಶ = ಪ್ರೇಮ್
ಅದೃಷ್ಟವಂತ
ನ್ಯೂಜಿಲೆಂಡ್ = ರಮೇಶ್
ಸದ್ದಿಲ್ಲದಂತೆ ಉನ್ನತಿ
ಇಂಗ್ಲೆಂಡ್ = ಶಿವರಾಜ್
ಹಿಟ್ಟಾ ಪ್ಲಾಪಾ ಗೊತ್ತಿಲ್ಲ!
ಐರ್ಲೆಂಡ್ = ಗಣೇಶ್
ಮೆಘಾ ಹಿಟ್‌ನೊಂದಿಗೆ ಭರ್ಜರಿ ಎಂಟ್ರಿ
ವೆಸ್ಟ್ ಇಂಡೀಸ್ = ವಿಜಯ್
ಸದ್ದು ಮಾತ್ರ, ಫರ್ಫಾಮೆನ್ಸ್ ಸುದ್ದಿ ಇಲ್ಲ
ಪಾಕಿಸ್ತಾನ = ವಜ್ರಮುನಿ
ಯಾವಾಗಲೂ ಖಳನಾಯಕನೇ
ಭಾರತ = ಜಗ್ಗೇಶ್
ಕಾಮಿಡಿ, ಇದ್ದಕ್ಕಿದ್ದಂತೆ ಟ್ರಾಜಿಡಿ!

ಬುಧವಾರ, ಫೆಬ್ರವರಿ 23

ಹನ್ನೆರಡು ರಾಶಿಯೊಳಗೊಂದು ರಾಶಿ

ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ - ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದೆನೆಂದಾದರೆ ಕೆಟ್ಟೆ.

ಯಾಕೆಂದರೆ ಒಂದೇ ಒಂದು ದಿನವೂ ನನ್ನ ಭವಿಷ್ಯ ಸರಿ ಇರುವುದಿಲ್ಲ. ಧನಲಾಭ ಅಂತ ಬರೆದಿದ್ದ ದಿನ, ಇರೋ ದುಡ್ಡೆಲ್ಲ ಖರ್ಚಾಗುತ್ತದೆ. (ಬಹುಶಃ ನಿನ್ನಿಂದಾಗಿ ಇತರರಿಗೆ ಧನಲಾಭ ಎಂದಾಗಬೇಕೋ...) ಮಿತ್ರರಿಂದ ಸಂತರ ಎಂದಿದ್ದರೆ ಗೆಳೆಯ - ಗೆಳತಿಯರೊಂದಿಗೆ ಶರಂಪರ ಜಗಳ. ಇಲ್ಲವಾದರೆ ಕನಿಷ್ಠಪಕ್ಷ ಮಾತಿನಲ್ಲಿ ಭಿನ್ನಾಭಿಪ್ರಾಯ ಹತ್ತಿ ಮೂಡು ಕೆಡುವಷ್ಟಾದರೂ ಆಗೇ ಆಗುತ್ತೆ. ಮೇಲಧಿಕಾರಿಗಳಾಗಿದ್ದವರಂತೂ ಚಂದಗೆ ಭವಿಷ್ಯ ಬರೆದಿದ್ದ ದಿನವನ್ನೇ ಆಯ್ದುಕೊಂಡವರಂತೆ ನಾನು ತಪ್ಪು ಮಾಡಿದ್ದರೂ, ಮಾಡದಿದ್ದರೂ ನಾಲ್ಕು ಜನರ ಮುಂದೆಯೇ ಮಂಗಳಾರತಿ ಮಾಡಿ ನನ್ನ ಉತ್ಸಾಹ, ಸ್ವಾಭಿಮಾನವನ್ನು ಚರಂಡಿಗೆಸೆಯುತ್ತಿದ್ದರು. ಹಾಗಾಗಿ ನಾನು ನನ್ನ ಅನುಭವದಿಂದ ಕಲಿತಿದ್ದೇನೆಂದರೆ ಯಾವದಿನ ಭವಿಷ್ಯ ಚೆನ್ನಾಗಿ ಬರೆಯಲ್ಪಟ್ಟಿದೆಯೇ ಆ ದಿನವಿಡೀ ಜಾಗರೂಕಳಾಗಿರಬೇಕು!

ನಾವು ಎಮ್ಮೆ ಓದುವಾಗ, ನಮ್ಮ ಔದಾಸೀನ್ಯವನ್ನು ಮಾತ್ರ ಗಮನಿಸಿದ ನಮ್ಮ ಅಧ್ಯಾಪಕರುಗಳೆಲ್ಲ ನಾವು ಗುಡ್‌ ಫಾರ್ ನಥಿಂಗ್‌ಗಳೆಂದೂ, ನಮಗೆ ಭವಿಷ್ಯವೇ ಇಲ್ಲ ಎಂದು ಒಕ್ಕೊರಲಿನಿಂದ ನುಡಿದಿದ್ದರು. ಅಲ್ಲಿಂದ ನನಗೆ ಭವಿಷ್ಯ (ದಿನ, ವಾರ, ವರ್ಷ)  ನೋಡುವ ಅಭ್ಯಾಸ. ಬಳಿಕ ಕ್ರಮೇಣ ಇದೊಂದು ಚಟವಾಯಿತು. ಅಂದ ಹಾಗೆ ನಿನ್ನ ರಾಶಿ ಯಾವುದು ಅಂತ ಕೇಳ್ತೀರಾ? ಸತ್ಯವನ್ನೇ ಹೇಳಬೇಕೆಂದರೆ ನನಗೇ ಗೊತ್ತಿಲ್ಲ. ಮತ್ತೆ ಏನಿದು ನಿನ್ನ ಗೋಳು, ಇಷ್ಟೆಲ್ಲ ಹೇಳಿದ್ದು ಸುಳ್ಳೇ ಎಂದು ತೀರ್ಮಾನಿಸಿ ಇವಳು ಬರೀ ಸುಳ್ಳು ಬುರ್ಕಿಯೆಂಬ ತೀರ್ಮಾನಕ್ಕೆ ಬರಬೇಡಿ.

ಒಟ್ಟಾರೆ ಹನ್ನೆರಡು ರಾಶಿಯಲ್ಲಿ (ಹದಿಮೂರನೆಯ ರಾಶಿಯೊಂದು ಗೋಚರವಾಗಿದೆ ಎಂಬುದಾಗಿ ಆರೇಳು ವರ್ಷದ ಹಿಂದೆ ಸುದ್ದಿಯಾಗಿತ್ತು. ಒಂದು ವೇಳೆ ಅದೂ ಇದ್ದರೆ ಅದೂ ಸೇರಿದಂತೆ) ಒಂದು ನನ್ನದು ಆಗಿರಲೇ ಬೇಕಲ್ಲಾ? ಹಾಗಾಗಿ ನಾನು ಎಲ್ಲಾ ರಾಶಿಯನ್ನೂ ಓದುತ್ತೇನೆ. ಚೆನ್ನಾಗಿ ಭವಿಷ್ಯ ಬರೆದ ರಾಶಿ ನನ್ನದೆಂದು ಅಂದುಕೊಳ್ಳುತ್ತೇನೆ. ನಿಜವೆಂದರೆ, ನನ್ನ ಹುಟ್ಟಿದ ದಿನಾಂಕವೇ ನನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಹೆತ್ತವರು ಬರೆದಿಡಲಿಲ್ಲ ಎಂದು ನಾನವರನ್ನು ದೂಷಿಸುವಂತಿಲ್ಲ. ನಿರಕ್ಷರಿಗಳಾಗಿದ್ದ ಮತ್ತು ಅವರಿದ್ದ ಪರಿಸ್ಥಿತಿಯಲ್ಲಿ ಅದನ್ನು ನಿರೀಕ್ಷಿಸುವುದೂ ತಪ್ಪೇ. ನನ್ನ ದೊಡ್ಡಅಕ್ಕ ಎಲ್ಲೋ ಬರೆದಿಟ್ಟ ದಿನಾಂಕವನ್ನೇ ಗಟ್ಟಿಮಾಡಿಕೊಳ್ಳೋಣವೆಂದರೆ, ನನ್ನ ಅಮ್ಮನ ಹೇಳಿಕೆ ಅದಕ್ಕೆ ಅಡ್ಡ ಬರುತ್ತದೆ. ನಾನು ಹುಟ್ಟಿದ ದಿನ ಭಯಂಕರ ಕತ್ತಲಿತ್ತು, ಧಾರಾಕಾರ ಮಳೆ ಸುರಿಯುತ್ತಿತ್ತು ಎನ್ನುತ್ತಾ ನೆನಪಿಸಿಕೊಳ್ಳುತ್ತಿದ್ದರು. ಅವರು ಹೇಳುವ ತುಳು ತಿಂಗಳ ಲೆಕ್ಕಾಚಾರಕ್ಕೂ ಅಕ್ಕ ಬರೆದಿಟ್ಟಿರುವ ಇಂಗ್ಲೀಷು ತಿಂಗಳ ಲೆಕ್ಕಾಚಾರಕ್ಕೂ ತಾಳೆ ಆಗುವುದಿಲ್ಲ. ಕೂಡಿ, ಗುಣಿಸಿ, ಕಳೆದು, ಭಾಗಿಸಿ ಎಲ್ಲಾ ಮಾಡಿ ನನ್ನಕ್ಕ ಬರೆದಿಟ್ಟ ದಿನಾಂಕ ಯಾವ ವಾರ ಬರುತ್ತದೆ ಎಂದು ನೋಡಿದರೆ ಅದಕ್ಕೂ ಅಮ್ಮ ಹೇಳಿದ ವಾರಕ್ಕೂ ವ್ಯತ್ಯಾಸ.

ಈ ಮಧ್ಯೆ, ನಿನ್ನ ಜನ್ಮ ನಕ್ಷತ್ರಕ್ಕನುಗುಣವಾಗೇ ನೆರೆಮನೆಯ ಕಲ್ಲೂರಾಯರು ಹೆಸರು ಸೂಚಿಸಿದ್ದು ಎಂಬ ಇನ್ನೊಂದು ಅಂಶವನ್ನು ನನ್ನ ಮುಂದಿಟ್ಟು ಮತ್ತೂ ಗೊಂದಲವಾಗುವಂತೆ ಮಾಡಲಾಗಿದೆ. ಹೆಸರು ಜನ್ಮ ನಕ್ಷತ್ರದ್ದೇ ಆಗಿದ್ದರೆ, ಆ ನಕ್ಷತ್ರಕ್ಕೂ, ಅಕ್ಕ ಬರೆದಿಟ್ಟ ಇಂಗ್ಲೀಷ್ ತಿಂಗಳ ದಿನಕ್ಕೂ, ಅಮ್ಮನ ತುಳು ತಿಂಗಳ ದಿನಕ್ಕೂ ತಾಳೆ ಇಲ್ಲ. (ಹಾಗಾದ್ರೆ ಶಾಲಾ ದಾಖಲಾತಿಯಲ್ಲಿ ಏನಿದೆ ಎಂಬುದು ನಿಮ್ಮ ಪ್ರಶ್ನೆಯೇ? ಅದನ್ನು ನೋಡಿದರೆ ಇನ್ನೂ ಗಮ್ಮತ್ತಿದೆ. ನಮ್ಮ ಐದೂ (ನಾನು ಮತ್ತು ನನ್ನ ಒಡ ಹುಟ್ಟಿದವರು) ಮಂದಿಯ ಜನ್ಮ ದಿನಾಂಕವೂ ಜೂನ್ ತಿಂಗಳೆಂದೇ ದಾಖಲಾಗಿದೆ. ಯಾಕೆಂದರೆ ಶಾಲೆಗೆ ಸೇರಿಸಲು ಕನಿಷ್ಠ ಎಷ್ಟು ವರ್ಷವಾಗಬೇಕೋ, ಅದಕ್ಕೆ ತಕ್ಕಂದೆ ದಾಖಲೆಗಳಲ್ಲಿ ಬರೆಯಲಾಗಿದೆ.)

ಹಾಗಾಗಿ ಈ ಮೇಲಿನ ಆಧಾರದನ್ವಯ  ಯಾವ್ಯಾವ ದಿನಕ್ಕೆ ಯಾವ್ಯಾವ ರಾಶಿ ಬರುತ್ತೋ ಅವು ನನ್ನವೇ ಅಂದು ಕೊಂಡಿದ್ದೇನೆ. ಇದರ ಮಧ್ಯೆ ವೆಸ್ಟರ್ನೂ, ಈಸ್ಟರ್ನೂ ಅಂತ ಇನ್ನೂ ಒಂದೆರಡು ರಾಶಿಗಳೂ ಸಹ ನಂದಾಗಿರಬಹುದೋ ಎಂಬ ಸಂಶಯ. ಈ ಐದಾರು ರಾಶಿಗಳಲ್ಲಿ ಯಾವುದಕ್ಕೆ ಚೆನ್ನಾಗಿ ಬರೆದಿದೆಯೋ ಅದೇ ನನ್ನ ರಾಶಿ ಎಂಬುದು ಅಂತಿಮ ನಿರ್ಧಾರ.

ಟಪ್ಪಂತ ಮುಖಕ್ಕೆ ರಾಚಿದಂತೆ ಮಾತಾಡುವ ನನ್ನ ಗುಣ ಕಂಡವರು ನನ್ನದು ಧನು ರಾಶಿ ಇರಬಹುದೆಂದೂ, ಮಾತಿನಲ್ಲಿ ಕೆಲವೊಮ್ಮೆ ಕಟಕುವುದನ್ನು ಕಂಡ ಕೆಲವರು ಕಟಕ ರಾಶಿಯೆಂದು ಇನ್ನು ಕೆಲವರು ವೃಶ್ಚಿಕ ರಾಶಿಯೆಂದೂ, ಸಿಟ್ಟು ಬಂದಾಗ ಸುನಾಮಿ ಬಡಿದಂತೆ ಘರ್ಜಿಸುವ ಪರಿ ಮತ್ತು ಅಗತ್ಯ ಮೀರಿದ ಔದಾರ್ಯವನ್ನು ಕಂಡ ಕೆಲವರು ಸಿಂಹ ರಾಶಿ ಇರಬಹುದು ಎಂಬುದಾಗಿ ಆರೋಪಿಸಿದ್ದಾರೆ. ಮದುವೆಯಾಗುವ ಹೊತ್ತಿನಲ್ಲಿ ನನಗೆ ಜಾತಕ - ಗೀತಕ ಎಲ್ಲಾ ಇಲ್ಲ ಎಂದು ಮಾತುಕತೆಗೆ ಮೊದಲೇ ಸ್ಪಷ್ಟವಾಗಿ ಹೇಳಿದ್ದೆ. ನನ್ನ ಗಂಡ ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಪೈಕಿಯಲ್ಲ. ಜಾತಿ, ವಿದ್ಯೆ, ಸಂಬಳ, ಮನೋಭಾವ ಎಲ್ಲವನ್ನೂ ಜಾತಕ ಮೀರಿಸಿದ್ದ ಕಾರಣ ಈ ಹಿಂದೆ ಹಲವು ಸಂಧಾನಗಳು ಅಂತಿಮ ಹಂತದ ತನಕ ಬಂದು ಬಳಿಕ ರದ್ದಾಗಿದ್ದವು.

ನನ್ನ ಅತ್ತೆಮ್ಮನಿಗೆ ಜಾತಕದ ಗೀಳು. (ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿರುವ ಅವರಿಗೆ ಬಳಿಕ ಜಾತಕ ಅಧ್ಯಯನದ ಆಸಕ್ತಿ ಹುಟ್ಟಿತಂತೆ. (ಅರೆಬರೆ ತಿಳಿದುಕೊಂಡಿರುವ ಅವರು, ಸಪ್ತಮಾಧಿಪತಿ ಚಂದ್ರ.... ಅಂತ ಶುರುವಿಕ್ಕಿದರೆ, ನಾನಲ್ಲಿಂದ ಪರಾರಿ!) ಮದುವೆ ಆದ ಶುರವಿನಲ್ಲಿ ಅತ್ತೆಮ್ಮ "ಸರಿ ನಿನ್ನ ಅಂದಾಜಿನ ಹುಟ್ಟಿದ ದಿನವನ್ನೇ ಹೇಳು" ಅಂದಿದ್ದರು. ನಿನ್ನ ಅಕ್ಕನವರು ಸಾಯಂಕಾಲ ಶಾಲೆಯಿಂದ ಬರುವ ವೇಳೆಗೆ ನೀನು ಹುಟ್ಟಿದ್ದೆ ಅಂತ ಅಮ್ಮ ಹೇಳಿದ್ದನ್ನೇ ಅವರಿಗೆ ಹೇಳಿದ್ದೆ. ಅವರು ಹಳೆಯ ಪಂಚಾಂಗವನ್ನೆಲ್ಲ ತೆಗೆದು - ಬಗೆದು; ಯಾವುದಕ್ಕೋ ಯಾವುದನ್ನೋ ಥಳುಕು ಹಾಕಿ, ನಾನು ವರಮಹಾಲಕ್ಮ್ಮಿ ವೃತ ದಿವಸ ಹುಟ್ಟಿದೆಂದು ಶೋಧಿಸಿ ಪ್ರಚಾರ ಮಾಡುತ್ತಿದ್ದಾರೆ. ಅದಲ್ಲದೆ, ಅವರ ಮಗನ ಜಾತಕಕ್ಕೆ ಅತ್ಯಂತ ಪ್ರಶಸ್ತವಾಗಿ ಹೊಂದುವ ಜಾತಕ ನನ್ನದಂತೆ!

ಸ್ನೇಹಿತೆಯೊಬ್ಬಳ ಮೂಲಕ ಫೋನಲ್ಲೇ ಪರಿಚಿತರಾಗಿ ಮಾತಾಡಿಕೊಂಡಿದ್ದ ನಾವು ಪರಸ್ಪರ ಮುಖತ ಭೇಟಿಯಾಗುವ ಮುನ್ನ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆವು. "ನನ್ನಮ್ಮ ಆರು ವರ್ಷದವರಾಗಿದ್ದಾಗ ಅವರ ಅಮ್ಮ ತೀರಿಕೊಂಡರು, ಮೂವತ್ತಾರು ವರ್ಷಕ್ಕೆ ಗಂಡ ತೀರಿದರು. ಅವರು ಬದುಕಿನಲ್ಲಿ ತುಂಬ ನೊಂದ ಜೀವ, ಅವರಿಗೆ ನೋವಾಗದಂತೆ ಇರಬೇಕೆಂಬುದು ಮಾತ್ರ ನನ್ನ ನಿರೀಕ್ಷೆ, ಮಿಕ್ಕಂತೆ ನೀನು ಹೇಗಿದ್ದರೂ ಪರ್ವಾಗಿಲ್ಲ" - ಇದೊಂದೇ ಅವರು ಕೇಳಿಕೊಂಡಿದ್ದು. (ನನ್ನ ಹೆತ್ತಮ್ಮ ತೀರಿಕೊಂಡಿದ್ದರಿಂದ ನನಗೂ ಒಂದು ಅಮ್ಮನ ಅವಶ್ಯಕತೆ ಇತ್ತು.) ಮಿಕ್ಕಂತೆ ಜಾತಿ, ವಯಸ್ಸು, ವಿದ್ಯೆ, ಚಿನ್ನ, ಜಾತಕ, ಅಂತಸ್ತು, ಸಂಬಳ, ಉಳಿತಾಯ ಯಾವುದನ್ನೂ ಕೇಳಿರಲೇ ಇಲ್ಲ. ನಮ್ಮದು ಹುಟ್ಟಿನಿಂದ ವಿಭಿನ್ನ ಜಾತಿ. ಸಹಜವಾಗೇ ಕೆಲವು ಸಂಪ್ರದಾಯ, ನಂಬಿಕೆ, ಸಂಸ್ಕೃತಿಗಳಲ್ಲಿ ಭಿನ್ನತೆ ಇದೆ. ನನ್ನ ಅತ್ತೆಮ್ಮನ ತಾಳಕ್ಕೆ ತಕ್ಕಂತೆ ನನ್ನ ಮೇಳ ಇರುವ ಕಾರಣ ನಂಗೆ ಯಾವುದೇ ಸಮಸ್ಯೆ ಇಲ್ಲ. ಅಯ್ಯೋ ಅವಳ ಜಾತಕ - ಸ್ವಭಾವ ನನ್ನಂತೆಯೇ ಎಂಬುದಾಗಿ ಅತ್ತೆಮ್ಮ ಹೇಳುವಾಗ ಮಾತ್ರ ಮನದಲ್ಲಿ ಮುಸಿ ನಗು!

ಜನ್ಮ ದಿನಾಂಕ ಸರಿಯಾಗಿ ತಿಳಿಯದಿರುವುದು ನನಗೆ ಎಷ್ಟೋ ಅನುಕೂಲವಾಗಿದೆ. ಜಾತಕ ನೋಡಿಸಿ ಜಾತಕದಲ್ಲಿ ಕೆಟ್ಟದಿದೆ ಎಂಬುದಾಗಿ ಅಳುವವರನ್ನು, ಶಾಂತಿ ಮಾಡಿಸುವವರನ್ನು, ಪೂಜೆ-ಪುನಸ್ಕಾರ ಮಾಡಿಸುವ ಪುರೋಹಿತರ ಉದ್ಧಾರಕರನ್ನೂ ಕಂಡಿದ್ದೇನೆ. ಇಷ್ಟನೇ ವರ್ಷಕ್ಕೆ ಇಂತಾದ್ದು ಆಗುತ್ತದೆ ಎಂಬ ಲೈಫ್ ಲೀಸ್ಟ್ ಇಲ್ಲದ ಕಾರಣ ನಾನು ಎಷ್ಟೋ ಆರಾಮ ಮತ್ತು ನಿರಾತಂಕಳಾಗಿ ಇದ್ದೇನೆ. ಆ ಮಟ್ಟಿಗೆ ನಾನು ತುಂಬಾ ಅದೃಷ್ಟವಂತಳೇ.

ಸೋಮವಾರ, ಫೆಬ್ರವರಿ 7

ನಮಗೇಕೆ ಜಡೆ ಇಲ್ಲ?

ಹಿಂದೆ ಯಾವಾಗಲೋ ಬರೆದಿದ್ದೆ, ಪ್ರಕಟವೂ ಆಗಿತ್ತು. ಮೊನ್ನೆ ಪುಸ್ತಕಗಳನ್ನು ಜೋಡಿಸಿಡುವಾಗ ಸಿಕ್ಕಿತ್ತು. ಇಲ್ಲಿಡುವಾ ಅಂತನ್ನಿಸಿತು.
ಜಡೆಗಳು
ಮೂರು ಜಡೆಗಳು
ಸೇರವು ಒಂದೆಡೆ
ಅದಕ್ಕೇ
ನಮಗಿಲ್ಲವೇ
ಇಲ್ಲ
ಜಡೆ!

ಏಡ್ಸ್
ಏಡ್ಸ್ ಬಾರದಿರಲು
ಏನು ಮಾಡಬೇಕು?
ಏನೂ
ಮಾಡದಿರಬೇಕು!

ಹಚ್-ಬಿಎಸ್ಸೆನ್ನೆಲ್
ನಾನಾಗಬೇಕಿದ್ದೆ
ಹೊದಲೆಲ್ಲ
ಹಿಂಬಾಲಿಸುವ
ಹಚ್;
ಅವನಾದ
ವ್ಯಾಪ್ತಿ ಪ್ರದೇಶಕ್ಕೆ
ಧಕ್ಕದ
ಬಿಎಸ್ಸೆನ್ನೆಲ್!

ಗುರುವಾರ, ಜನವರಿ 13

ಉಳ್ಳಾಗಡ್ಡಿ ಖರೀದಿಸುವ ಉಳ್ಳವರು ನಾವ್!

ಕಳೆದ ಶುಕ್ರವಾರ ಸಾಯಂಕಾಲ ಟೈಮ್ಸ್ ವಾರ್ತೆ ನೋಡುತ್ತಿದ್ದ ನನ್ನ ಗಂಡ ಓಡಿ ಬಂದು ಈರುಳ್ಳಿ ಅಕ್ರಮ ದಾಸ್ತಾನುಕಾ(ಕೋ)ರರ ಮೇಲೆ ದಾಳಿ ಎಂಬ ಬ್ರೇಕಿಂಗ್ ನ್ಯೂಸನ್ನು ನನ್ನೆದುರು ಬ್ರೇಕ್ ಮಾಡಿದರು.

ಛೇ, ಹಾಗಾದರೆ ಈರುಳ್ಳಿ ಬೆಲೆ ಕಮ್ಮಿ ಆಗ್ತದಾ? ಧಾವಂತ ತೋರಿದೆ. ಅವರಿಗೆ ಅಚ್ಚರಿಯೋ ಅಚ್ಚರಿ! ಈಗಿನ ಕಾಲದ ಈ ಸಾಮಾನು ರೇಟಲ್ಲಿ ನಮ್ಮಂತವರು ಬದುಕುವುದು ಹೇಗೆಂದು ದಿನನಿತ್ಯ ಗೊಣಗುತ್ತಿದ್ದ ಇವಳಗೇನಾಯ್ತು ಅಂತ ಮತ್ತೆ ಹೋಗಿ ಟಿವಿ ಮುಂದೆ ಜೋತಾಡುತ್ತಾ ನಿಂತರು.

ಮನೆಗೆ ಊಟಕ್ಕೆ ಹೋದ ತಕ್ಷಣ ಏನೇನಿದೆ ಎಂಬುದಾಗಿ ವರದಿ ಒಪ್ಪಿಸುವುದು ಅ(ತ್ತೆ)ಮ್ಮನ ಪರಿಪಾಠ. ಅಂದೂ ಸಹ ಮಾಡಿದ ಖಾದ್ಯದ ವಿವರಣೆ ನೀಡುತ್ತಾ, ಖಾದ್ಯ ಒಂದನ್ನು ಹೇಗೆ ತಯಾರಿಸಿದ್ದು ಎಂದು ವಿವರಿಸಿ- ಒಳ್ಳೇದಾಗಿದೆ, ಒಂದಿಡೀ ಈರುಳ್ಳಿ ಹಾಕಿದ್ದೇನೆ ಅಂದರು. ಕ್ವಚಿತ್ತಾಗಿ ಹೇಳಿದ ಈ ಮಾತು ನನ್ನೊಳಗೆ ಸಾವಿರ ಬಲ್ಬುಗಳು (ಹೈ ವೋಲ್ಟೇಜಿದ್ದೇ) ಏಕಕಾಲಕ್ಕೆ ಬೆಳಗಿದಂತಾಯಿತು. ನಮ್ಮದು ತುಂಬ ಅಂದರೆ, ತುಂಬಾ ಸಾಧಾರಣವಾದ ಜೀವನ. ಕಾರಿಲ್ಲ, ಬಂಗ್ಲೆ ಇಲ್ಲ, ಏಸಿ ಇಲ್ಲ, ಐಷಾರಾಮಿ ವಸ್ತುಗಳು ಇಲ್ಲ. ಒಂದಿಷ್ಟು ನೆಮ್ಮದಿ ಮಾತ್ರ ಬಿಟ್ರೆ ಮತ್ತೇನೂ ಇಲ್ಲ. ಇದ್ದುದರಲ್ಲೇ ಎಷ್ಟು ಸಾಧ್ಯವೋ ಅಷ್ಟರಲ್ಲೇ ಬದುಕೋದು.

ಆದರೆ, ಏನೇ ಆದರೂ ಅಮ್ಮ ಮಾತ್ರ ಏನೇ ಬೇಕು ಅಂದರೂ ಇಲ್ಲ ಅನ್ನೊದಿಲ್ಲ ನನ್ನ ಶ್ರೀಪತಿ. (ಅಡುಗೆ ಸಾಮಾನು, ಸಿಹಿ, ಔಷಧಿ ಬಿಟ್ಟರೆ ಅವರಿಗೆ ಹೆಚ್ಚಿನ ಡಿಮಾಂಡುಗಳೂ ಇಲ್ಲ) ಹಾಗಾಗಿ ಎಷ್ಟೇ ರೇಟಾದರೂ, ಕಿಸೆಯ ತೂಕಕ್ಕೆ ಸಮನಾಗಿ ಈರುಳ್ಳಿ, ಬೆಳ್ಳುಳ್ಳಿ ಕಾಲು ಕೆಜಿ ತೂಕದಲ್ಲಾದರೂ, ಹೇಳಿದಾಗೆಲ್ಲ ಒಯ್ಯುತ್ತಿದ್ದೆವು. ಇದರಿಂದಾಗಿ ನಾವು ದಿನಾಲೂ ಇಷ್ಟು ದುಬಾರಿ ಈರುಳ್ಳಿ-ಬೆಳ್ಳುಳ್ಳಿಗಳನ್ನು ನಮ್ಮ ಅಡುಗೆಯಲ್ಲಿ ಬಳಸುತ್ತಿರುವ ಕಾರಣ ನಮ್ಮ ಅಂತಸ್ತು ಹೆಚ್ಚಿದೆ ಎಂಬುದಾಗಿ ನನಗೆ ನಾನೇ ಸಂಭ್ರಮಿಸುತ್ತಿದ್ದೆ. ಮಿಕ್ಕ ಸಮಯದಲ್ಲಿ ಯಾರಾದರೂ, ಊಟ ಆಯ್ತಾ? ಏನು ಸಾರು ಎಂದೆಲ್ಲ ಕೇಳಿದರೆ ನಂಗೆ ತುಂಬ ಸಿಲ್ಲಿ ಅನಿಸುತ್ತಿತ್ತು. ಆದರೆ ಈಗ ಹಾಗಲ್ಲ, ಯಾರಾದರೂ ನಮ್ಮ ಆಫೀಸಿಗೆ ಬಂದರೆ, ಅಥವಾ ಪೋನಲ್ಲಿ ಮಾತಾಡಿದರೂ ನಾನಾಗೇ ಊಟ, ಸಾರು- ಪಲ್ಯಗಳ ವಿಚಾರ ಎತ್ತುತ್ತೇನೆ. ನಮ್ಮಲ್ಲಿ ಈರುಳ್ಳಿ ಹಾಕಿದ ಗಷಿ, ಪಲ್ಯ, ಉಪ್ಕರಿ ಎಂದೆಲ್ಲಾ ಬೇಕಂತಲೇ ಒತ್ತಿ ಒತ್ತಿ ಹೇಳುತ್ತಿದ್ದೆ. ಈಗಲೂ ಹೇಳುತ್ತೇನೆ.

ಈರುಳ್ಳಿ, ಬೆಳ್ಳುಳ್ಳಿಯ ಒಗ್ಗರಣೆ ಘಮ್ಮೆನ್ನುತ್ತಾ ಪ್ರತಿನಿತ್ಯ ಮೂಗಿಗೆ ಬಡಿಯುವಾಗ, ನಮ್ಮನ್ನು ನಾನೇ ಭಾರೀ ಶ್ರೀಮಂತರ ಪಟ್ಟಿಗೆ ಸೇರಿಸಿಕೊಂಡಿದ್ದೆ. ಹೀಗಾಗಿ ಕೃತಕ ಬೆಲೆ ಏರಿಕೆಯಿಂದಾಗಿ, ಅದರಲ್ಲೂ ವಿಶೇಷವಾಗಿ ಈರುಳ್ಳಿ-ಬೆಳ್ಳುಳ್ಳಿಯ ಬೆಲೆಯಿಂದಾಗಿ ಅದನ್ನು ಸೇವಿಸುವ ನಮ್ಮ ಬೆಲೆಯೂ ಏರಿದೆ ಎಂಬ ಕೃತಕ ಖುಷಿಯ ಭ್ರಮಾಲೋಕದಲ್ಲೇ ತೇಲುತ್ತಿರುವಾಗ, ಈರುಳ್ಳಿಗೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿಯನ್ನು ಬಿತ್ತಿದರೆ ನನಗೆ ಹೇಗಾಗಬೇಡ?

ಈ ದಾಳಿಗಳ ದೆಸೆಯಿಂದಾಗಿ, ನಾವು ನ್ಯಾಯವಾಗಿ ಸಂಪಾದಿಸಿದ ದುಡ್ಡಲ್ಲಿ 'ದುಬಾರಿ ಉಳ್ಳಾಗಡ್ಡಿ ಖರೀದಿಸುವ ಉಳ್ಳವರು' ಎಂದು ಸಂಭ್ರಮಿಸುವ ಸಂಭ್ರಮವೂ ಇಲ್ಲದಂತಾಯಿತೇ ಎಂಬ ವ್ಯಸನ ನನ್ನದು, ಛೇ!

ಶನಿವಾರ, ಅಕ್ಟೋಬರ್ 16

ಗೋಲಿಗಳಿಗೀಗ ಭಾರೀ ಡಿಮಾಂಡ್!

ಗೋಲಿ ಆಟವಾಡುವಾಗಿನಿಂದ ನಾನು ಸೋತಿದ್ದೇ ಇಲ್ಲ ಎಂಬುದಾಗಿ ಕರ್ನಾಟಕ ಸರ್ಕಾರದ ಆಧಾರ ಸ್ತಂಭವಾಗಿ ಬಿಂಬಿತವಾಗಿರುವ ಸಚಿವರೊಬ್ಬರು ನೀಡಿರುವ ಹೇಳಿಕೆಯಿಂದ ರಾಜ್ಯದಲ್ಲೀಗ ಗೋಲಿಗಳಿಗೆ ಹಾಗೂ ಗೋಲಿ ಆಟದ ತರಬೇತುದಾರರಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ.

ಮೊದಲಿಗೆ ಬಾಲ್ಯದಲ್ಲಿ ನಮ್ಮ ಬಳಿ ಒಂದೂ ಗೋಲಿ ಇರಲಿಲ್ಲ. ಸ್ನೇಹಿತರಿಂದ ಹೇಗೋ ಸಂಪಾದಿಸಿದ್ದ ಒಂದು ಗೋಲಿಯನ್ನೇ ಆಧಾರವಾಗಿಟ್ಟುಕೊಂಡು ಆಟ ಆರಂಭಿಸಿದ ನಾವು ಇದೀಗ ಇಡೀ ರಾಜ್ಯಕ್ಕೇ ಬೇಕಿದ್ದರೂ ಗೋಲಿ ಹಂಚುವಷ್ಟು ಶಕ್ತರಾಗಿದ್ದೇವೆ ಎಂದು ಸಚಿವರು ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

ಗೋಲಿ ಆಟದಿಂದಲೇ ಪ್ರಖ್ಯಾತಿಗೆ ಬಂದಿರುವ ಕಾರಣ ನಮ್ಮ ಹೆಸರಿನ ಮುಂದೆ ಗೋಲಿ ಎಂಬುದು ಸೇರಿಕೊಂಡಿತ್ತು. ಆದರೆ ಹೆಸರು ನೋಂದಣಿಯಾಗುವಾಗ ಕಾರಕೂನ ತಪ್ಪಿನಿಂದಾಗಿ ನಮ್ಮ ಹೆಸರು ಗೋಲಿಯ ಬದಲಿಗೆ ಗಾಲಿಯಾಗಿ ಜಗಜ್ಜಾಹೀರಾಗಿದೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ನಾವು ಗೋಲಿಯಾಡುವಾಗ ಹಾಕಿರುವ ಪಟ್ಟುಗಳು ಮತ್ತು ಕಲಿತಿರುವ ತಂತ್ರಗಳಿಂದಾಗಿ ಎಂದಿಗೂ, ಎಲ್ಲಿಯೂ ನಾವು ಸೋಲನ್ನು ಕಂಡವರೇ ಅಲ್ಲ; ಹಾಗಾಗಿ ನಾವು ಇದೇ ತಂತ್ರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು, ಇದೇ ನಮ್ಮ ಈ ಪರಿಯ ಬೆಳವಣಿಗೆಗೆ ಕಾರಣ ಎಂಬುದಾಗಿ ಅವರು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದಿದ್ದರು.

ಬಾಲ್ಯದಲ್ಲಿ ಗೋಲಿ ಆಡುವಾಗ ಸಾಕಷ್ಟು ಪ್ರಮಾಣದಲ್ಲಿ ನಮಗೆ ಗೋಲಿ ಸಿಗದೇ ಇದ್ದುದೇ ನಾವು ಗೋಲಿ ಆಟವನ್ನು ಗಂಭೀರವಾಗಿ ಪರಿಗಣಿಸಲು ಕಾರಣವಾಗಿದ್ದು, ಇದಕ್ಕೆ ನಮ್ಮ ಸಹೋದದರು, ಸ್ನೇಹಿತರ ಬೆಂಬಲವೂ ಅಷ್ಟೇ ಗಣನೀಯ ಮತ್ತು ಸ್ಮರಣೀಯ ಎಂಬುದಾಗಿ ಅವರು ಮನದುಂಬಿ ನೆನಪಿಸಿಕೊಂಡರು.

ನಮಗೀಗ ರಾಜಕೀಯವಿರಲಿ, ಉದ್ಯಮವಿರಲೀ ಯಾವುದೇ ವ್ಯವಹಾರಗಳನ್ನು ನಿರ್ವಹಿಸುವುದು ಗೋಲಿ ಆಟದಷ್ಟೇ ಸುಲಭ. ಎದುರಾಳಿಯ ಗುಳಿಯಲ್ಲಿರುವ ಗೋಲಿಗೆ ಗುರಿ ಇರಿಸಿ ಅದನ್ನು ಕೈ ವಶ ಮಾಡಿಕೊಳ್ಳುವ ವಿದ್ಯೆ ಕರತಲಾಮಲಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹಸನ್ಮುಖಿಯಾಗಿಯೇ ಸುದ್ದಿಗೋಷ್ಠಿ ಆರಂಭಸಿದ ಅವರು ಸುದ್ದಿಗಾರರ ಪ್ರಶ್ನೆಗೆ ತೀವ್ರ ಸಮಾಧಾನ, ಸಂತೋಷ ಹಾಗೂ ತಾಳ್ಮೆಯಿಂದಲೇ ಉತ್ತರಿಸಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವಾಗ ಹೆಚ್ಚಿನ ಸ್ಪಷ್ಟತೆಗಾಗಿ ಕಮಲಳ ಆಪರೇಷನ್ ಮತ್ತು ವಿಶ್ವಾಸದ ವೋಟು, ಪ್ರಕಾಶದ ವರ್ತೂರು ಮುಂತಾದ ಉದಾಹರಣೆಗಳನ್ನು ನೀಡಿದರು. ಈ ಹಿಂದೆ ಕಮಲಳು ಆಪರೇಷನ್ ಮಾಡಿದ್ದ ಕಾಲದಲ್ಲಿ ಲಾರಿಯಲ್ಲಿ ಲೋಡುಗಟ್ಟಲೆ ಶಾಸಕರನ್ನು ಅದಿರು ಮುಂತಾದುವುಗಳನ್ನು ಲಾರಿಯಲ್ಲಿ ತುಂಬಿಸಿ ಸಾಗಿಸುವಂತೆ, ಲೋಡುಗಟ್ಟಲೆ ತಂದು ಸುರಿದಿದ್ದನ್ನೂ ಸಹ ಉದಾಹರಣೆಯಾಗಿ ನೆನಪಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಬಿತ್ತರವಾಗಿರುವ ಸುದ್ದಿಯನ್ನು ವಿಶ್ಲೇಷಿಸಿರುವ ವಿಶ್ಲೇಷಕರು ಸರ್ಕಾರದ ಸ್ಥಿರತೆ-ಅಸ್ಥಿರತೆ ಮತ್ತು ಸ್ಥಿರಅಸ್ಥಿರತೆಗೆ ಗೋಲಿಯೇ ಕಾರಣ ಎಂದು ಹೇಳಿದ್ದಾರೆ.

ಸಚಿವರ ಈ ಅನುಭವದಿಂದ ಪ್ರೇರಿತರಾಗಿರುವವರು ಇದೀಗ ಗೋಲಿ ಆಟವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ದಿನಬೆಳಗಾಗುವುದರೊಳಗೆ, ಗೋಲಿಗಳಿಗೆ ಮತ್ತು ಗೋಲಿ ಆಟದ ತರಬೇತುದಾರರಿಗೆ ಇನ್ನಿಲ್ಲದ ಡಿಮಾಂಡ್ ಸೃಷ್ಟಿಯಾಗಿದೆ. ಅಲ್ಲದೆ, ಜನಸಾಮಾನ್ಯರು ಇದೀಗ ಈ ಉದ್ಯಮದತ್ತ ಆಕರ್ಷಿತರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಬುಧವಾರ, ಸೆಪ್ಟೆಂಬರ್ 29

ಯಾರಿಗೆ ಮಂದಿರ... ಯಾರಿಗೆ ಮಸೀದೀ....

ಬಲ್ಲಿರೇನಯ್ಯಾ.......

ಭಳಿರೇ ಪರಾಕ್ರಮ ಕಂಠೀರವಾ.....

ಅಖಂಡ ಭರತ ಖಂಡದ ಅಯೋಧ್ಯೆಯನ್ನು ಆಳಿ ಜನಮನಗೆದ್ದಿರುವ ಮರ್ಯಾದಾ ಪುರುಷೋತ್ತಮ ಯಾರೆಂದು ಬಲ್ಲೀರಿ.......?

ಭಗವಾನ್ ಶ್ರೀರಾಮ ಚಂದ್ರ ಎಂದು ಕೇಳಿಬಲ್ಲೆವೂ....

ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದೂ....

ಸರಯೂ ನದಿಯ ತಟದಲ್ಲಿ ತರುಲತೆಗಳ ಬಳುಕು, ಪುಷ್ಪ ವನಗಳ ಥಳುಕಿನಿಂದ ಕಂಗೊಳಿಸುತ್ತಿದ್ದ ಅಯೋಧ್ಯೆಯಲ್ಲೇನೋ ಧಾವಂತದ ಮೌನ. ದೇಶಾದ್ಯಂತ ಎಲ್ಲರಲ್ಲೂ ಏನಾಗುತ್ತದೆಯೇನೋ ಎಂಬ ಆತಂಕ, ಎಲ್ಲೆಲ್ಲೂ ತಳಮಳ, ಕಳವಳ, ಆತಂಕ, ತಲ್ಲಣ, ವ್ಯಾಕುಲತೇ... ಎಲ್ಲೆಲ್ಲೂ ಖಾಖಿಗಳು. ವಾತಾವರಣವೆಲ್ಲ ಖಾಖಿಮಯಾ...

ಇಂತಹ ಸಮಯದಲ್ಲಿ ನಮ್ಮ ಒಡ್ಡೋಲಗ ಉಚಿತವೆಂದು ನಾವೀ ಒಡ್ಡೋಲಗಕ್ಕೆ ಬಂದಿದ್ದೇವೇ.... ಯಾರಲ್ಲೀ...

ಅಯ್ಯಾ ಶ್ರೀ ರಾಮಚಂದ್ರ ಪ್ರಭುವೇ.....

ನೀವು ಹುಟ್ಟಿದ ಜಾಗಕ್ಕಾಗಿ ಶತಮಾನಗಳಿಂದಲೇ ವಿವಾದ ನಡೆಯುತ್ತಿದೆ. ಹೋರಾಟಗಳು, ಹಾರಟಗಳು, ರಕ್ತಪಾತಗಳು ಆಗಿವೆ. ಇದೀಗ ಮತ್ತೆ ನಿಮ್ಮ ಜನ್ಮಸ್ಥಾನವೆಂದು ಹೇಳುತ್ತಿರುವ ಆ ನಿರ್ದಿಷ್ಟ ಸ್ಥಳವು ನಿಮ್ಮದ್ದೋ, ಅಥವಾ ಒಂದಾನೊಂದು ಕಾಲದಲ್ಲಿ ದೇಶವನ್ನು ಆಳಿದ್ದ ಬಾಬರ ಕಟ್ಟಿಸಿದ ಮಸೀದಿಯದ್ದಾ ಎಂಬುದನ್ನು ನ್ಯಾಯಾಲಯ ಹೇಳುವ ವೇಳಗೇ.....

ಭಾಗವತರೇ..... ನಾವು ಜೀವಿಸಿದ್ದೆವು ಎಂದು ಹೇಳಲಾಗುತ್ತಿರುವ ದಿನಗಳಿಂದಲೇ ವಿವಾದ ನಮಗೆ ತಪ್ಪಿದ್ದಲ್ಲ. ಹೋರಾಟದಲ್ಲೇ ಬೆಳೆದವರು ನಾವು. ಬಾಲ್ಯದ ಕೆಲವು ಸಮಯ ತಮ್ಮಂದಿರಾದ ಲಕ್ಷ್ಮಣ, ಭರತ-ಶತ್ರುಘ್ನರೊಂದಿಗೆ ಆಡಿ-ಪಾಡಿದ್ದಷ್ಟೆ ವಿವಾದಾದೀತ ಸಮಯ ಎನ್ನಬಹುದೂ.... ನಮ್ಮ ಚಿಕ್ಕಮ್ಮಳಿಗೆ ಮಂಥರೆ ಮಾಡಿದ ದುರ್ಭೋದನೆಯ ಪ್ರಚೋದನೆಯಿಂದಾಗಿ ನಾವು ಪಟ್ಟಾಭಿಷೇಕವನ್ನು ತ್ಯಜಿಸಿ ವನವಾಸಕ್ಕೆ ಹೋದಲ್ಲಿಂದ ನಾವು ಎಷ್ಟೊಂದು ಕಾರ್ಪಣ್ಯಗಳನ್ನು ಎದುರಿಸಿಲ್ಲಾ...

ಸ್ವಾಮೀ ದಶರಥ ಪುತ್ರರೇ... ವಿವಾದ ಎದ್ದಿರುವ ಸ್ಥಳದಲ್ಲೇ ನೀವು ಹುಟ್ಟಿದ್ದು ಎನ್ನುತ್ತಿರುವ ವರ್ಗ ಒಂದು ಅಲ್ಲೇ ನಿಮಗೆ ದೇಗುಲ ಕಟ್ಟಬೇಕೆಂದು ಟೊಂಕ ಕಟ್ಟಿದೆ. ಆದರೆ ಇನ್ನೊಂದು ವರ್ಗ ನಾವು ಹಲವು ಕಾಲದಿಂದ ನಮ್ಮ ಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸಿಕೊಂಡ ಸ್ಥಳ ಅದಾಗಿದ್ದು, ಅದು ನಮ್ಮದೆಂದು ಹಠ ಹಿಡಿಯುತ್ತಿದೆ. ಪರಮಾತ್ಮಾ.... ಆ ಜಾಗ ಯಾರದ್ದು....? ನೀನು ಅಲ್ಲಿಯೇ......

ಭಾಗವತರೇ ಸ್ವಲ್ಪ ಬಾಯಿ ಮುಚ್ಚುತ್ತೀರಾ......ಯಾವ ಧರ್ಮ, ಯಾವ ಪೂಜೆ, ಯಾವ ಆರಾಧನೆ? ಎಲ್ಲಾ ಧರ್ಮಕ್ಕಿಂತಲೂ ರಾಜಕೀಯದ ಕೊಳಕು ಧರ್ಮವಿದೆ ನೋಡಿ.... ಅದು ಅತ್ಯಂತ ಅಪಾಯಕಾರಿ..... ವಿವಿಧ ಪಕ್ಷಗಳ ಈ ರಾಜಕೀಯ ಮಂಥರೆಯರು ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನನ್ನ ಹೆಸರು ಹೇಳುತ್ತಾ, ಗಲಾಟೆ ಎಬ್ಬಿಸಿ, ಬೆಂಕಿ ಹೊತ್ತಿಸಿ, ರಕ್ತ ಹರಿಸಿ, ಹೆಣ ಉದುರಿಸಲು ಪ್ರೇರಣೆ ನೀಡುತ್ತಾರೆ ನೋಡಿ... ಅಮಾಯಕರು ದೊಂಬಿಯಲ್ಲಿ ಮುಳುಗಿದ್ದಾಗ, ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತು, ಕೈಯಲ್ಲಿ ದೂರ ಸಂವೇದಿ ಗುಂಡಿ ಅದುಮುತ್ತಾ ತುಟಿಯಂಚಿನಲ್ಲಿ ವಕ್ರನಗೆ ಬೀರುತ್ತಾ, ಹರಿದ ರಕ್ತ, ಉದುರಿದ ಹೆಣಗಳು ಎಷ್ಟು ಮತಗಳಾಗಿ ಪರಿವರ್ತಿತವಾಗಬಹುದು ಎಂಬುದಾಗಿ ಲೆಕ್ಕ ಹಾಕುತ್ತಾರಲ್ಲಾ.... ಇದು ಯಾರ ಧರ್ಮವೂ ಅಲ್ಲಾ.... ಇದು ಯಾರ ಸಂಸ್ಕೃತಿಯೂ ಅಲ್ಲಾ....

ಇತ್ತೀಚೆಗೆ ನಾವೊಂದು ಸರ್ವಧರ್ಮ ಸಮ್ಮೇಳನವನ್ನು ಅಂತರಿಕ್ಷದಿಂದ ಗಮನಿಸುತ್ತಿದ್ದೆವು. ಅತ್ತ ತಿರುಗಿದರೆ, ಇಸ್ಲಾಮಿನ ಅಲ್ಲಾಹುವೂ, ಇತ್ತ ತಿರುಗಿದರೆ ಇತರ ಧರ್ಮದ ದೇವಾದಿಗಳೂ ಇದೇ ಸಮ್ಮೇಳನವನ್ನು ವೀಕ್ಷಿಸುತ್ತಿರುವುದು ಕಂಡು ಬಂತು. ಉಭಯ ಕುಶಲೋಪರಿಯ ಬಳಿಕ, ನಾವು ಈ ಜನರ ಹೇಸಿಗೆ ಹೋರಾಟದ ಕುರಿತು ಪರಸ್ಪರ ಮಾತಾಡಿಕೊಂಡೆವು. ಎಲ್ಲರಿಂದಲೂ ಹೊರಟದ್ದು ಖೇದಕರವಾದ ನಿಟ್ಟಿಸಿರು.

ಮರ್ಯಾದಾ ಪುರುಶೋತ್ತಮನೇ.... ನಿಮ್ಮ ಆರಾಧನೆಗೆ....

ಭಾವತರೇ...... ಯಾರಿಗೆ ಬೇಕಿದೆ ಮಂದಿರ- ಮಸೀದಿ...? ವೋಟಿನ ಮೇಲೆ ಕಣ್ಣಿಟ್ಟವರಿಗಿರುವ ಆಸಕ್ತಿ ನಮಗಿಲ್ಲ. ತಮ್ಮತಮ್ಮ ಟಿಆರ್‌ಪಿ ಏರಿಸಿಕೊಳ್ಳಲು ತುತ್ತೂರಿವರು ನೀಡುತ್ತಿರುವ ಕೊಡುಗೆಯೇನೂ ಕಮ್ಮಿ ಇಲ್ಲಾ.....ನಮ್ಮನ್ನು ಆರಾಧಿಸಲು ಆಡಂಬರವೇನೂ ಬೇಕಿಲ್ಲ. ಹೃದಯ ಮಂದಿರಕ್ಕಿಂತ ಪ್ರಶಸ್ತ ಸ್ಥಳ ಇನ್ಯಾವುದಿದೆ......? ಅಲ್ಲಾಹುವೇ ಹೇಳಿರುವುದನ್ನು ಪವಿತ್ರ ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ನಮಗೆ ಮಸೀದಿಯೇ ಬೇಕಿಲ್ಲ.... ಶುಚಿರ್ಭೂತರಾಗಿ ಮೆಕ್ಕಾದ ದಿಕ್ಕಿಗೆ ಮುಖಮಾಡಿ ಎಲ್ಲಿಯೂ ನಮಿಸಬಹುದಾಗಿದೆ..... ಎಲ್ಲಾ ಧರ್ಮಗಳೂ ಹೆಚ್ಚೂ ಕಮ್ಮಿ ಇದನ್ನೇ ಹೇಳಿರುವುದೆಂಬುದನ್ನು ಮೊದಲು ಅರ್ಥಮಾಡಿಕೊಳ್ಳೀ...
ಯಾವ ಧರ್ಮದ ದೇವರಿಗೂ ಮಂದಿರ-ಮಸೀದಿ ಬೇಕಾಗಿಲ್ಲ. ಭಾವನೆಗಳನ್ನು ಕೆರಳಿಸುವವರನ್ನು ಮೊದಲು ಸದೆ ಬಡಿಯಬೇಕಾಗಿದೆ. ಇತಿಹಾಸಿದಿಂದ ಪಾಠ ಕಲಿಯದ ಮೂಢರುಗಳಿರಾ.... ಅವನು ಒಡೆದನೆಂದು ಇವನು, ಇವನು ಒಡೆದನೆಂದು ಅವನು ಒಡೆಯುತ್ತಾ ಹೋದರೇ..... ಒಡಕುಗಳೇ ತುಂಬಿಕೊಳ್ಳುತ್ತವೆ. ನೀವು ಧರ್ಮವನ್ನೇ ನಂಬುವರಾದರೇ... ಅದಕ್ಕೇ ಅಂಟಿಕೊಳ್ಳುವರಾದರೆ ಆಯಾ ಧರ್ಮಗಳಲ್ಲಿ ಹೇಳಿರುವ ಉದಾತ್ತ ಗುಣಗಳನ್ನು ಅನುಸರಿಸೀ... ನೆಮ್ಮದಿಯಿಂದ ಬದುಕುವುದ ಕಲಿಯಿರೀ.... ಎಲ್ಲರಿಗೂ ಒಳಿತಾಗಲೀ... ಸರ್ವೇಜನ ಸುಖಿನೋಭವಂತೂ.....
ಮಂಗಳಂ!

ಬುಧವಾರ, ಸೆಪ್ಟೆಂಬರ್ 22

ಚುನಾವಣೆ ಗೆಲ್ಲೋದು ಮಾತ್ರ ಅರ್ಹತೆಯಲ್ಲಾ...

ಭಳಿರೇ ಪರಾಕ್ರಮ ಕಂಠೀರವಾ.......

ಬಲ್ಲಿರೇನಯ್ಯಾ......

ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........

ಈ......ನರ್ಕಾಟಕದ ಮಂತ್ರಿಮಂಡಲದ ಏಕೈಕ ಮಂತ್ರಿಣಿ ಯಾರೆಂದು ಕೇಳಿ ಬಲ್ಲಿರೀ....

ಭಾಶೋ ರಕಂದ್ಲಾಜೆ ಎಂದು ಕೇಳಿಬಲ್ಲೆವು......

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ಬೆಂದಕಾಳೂರು ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ಗ್ರಾಮೀಣ ಪರಿಸ್ಥಿತಿಯ ಸ್ಥಿತಿಗತಿಗಳು ಸುಧಾರಣೆಗೊಳ್ಳಬೇಕು, ಮಹಿಳಾ ಸಮುದಾಯ ಮುಂದೆ ಬರಬೇಕು, ಬಡವರ ಉದ್ಧಾರವಾಗಬೇಕು, ಅರ್ಧಕ್ಕೆ ನಿಂತ ಕಾರ್ಯಗಳು ಮುಂದುವರಿಯಬೇಕು.... ಕರ್ನಾಟಕ ಸಾಮ್ರಾಟರ ಕೈ ಬಲಪಡಿಸಬೇಕು, .... ಒಂದೇ ಎರಡೇ.... ಅನೇಕವಿದೆ.... ಅನೇಕವಿದೆ.... ಅನೇಕವಿದೆ....

ಆಹಾ.... ಅದೆಷ್ಟು ಸುಂದರಮಯ ವಾತಾವರಣ. ಕನ್ನಡಾಂಬೆ ಎಷ್ಟೊಂದು ಹರ್ಷಚಿತ್ತದಿಂದಿದ್ದಾಳೆ...ಉದ್ಯಾನನಗರಿಯ ಚುಮುಚುಮು ಚಳಿಗೆ ಹಿತವೆನ್ನಿಸುವ ಎಳೆಬಿಸಿಲು. ಅದ್ಭುತ ಕಾವ್ಯದಂತಾಗಿರುವ ಈ ನಮ್ಮ ಸಿಲಿಕಾನ್ ಕಣಿವೆ. ಮೈತುಂಬ ಉಲ್ಲಾಸ, ಸಂತೋಷ ಪುಟಿಯುತ್ತಿದ್ದು; ಹುಮ್ಮಸ್ಸಿನಿಂದ ಕುಣಿಯುತ್ತಿರುವ ಮನಸ್ಸು.... ಆದಿತ್ಯ ದೇವನ ಬಂಗಾರ ಕಿರಣಗಳು ಇಳೆಯನ್ನು ಮುತ್ತಿಕ್ಕಲು ಧಾವಂತದಿಂದಲೋ ಎಂಬಂತೆ ಧಾವಿಸುವ ನೋಟ. ಆಹಾ ಪ್ರಪಂಚವೀಗ ಹಿಂದೆಂದೂ ಇಲ್ಲದಷ್ಟು ಸುಂದರವಾಗಿ ಕಂಗೊಳಿಸುತ್ತಿದೆ.. ನಿದಿರಾ ದೇವಿಯ ಮಡಿಲಿನಿಂದ ಎದ್ದ ನಮ್ಮನ್ನು ಈ ಪರಿಯ ಸೊಬಗಿಂದ ಸ್ವಾಗತಿಸಿದೆ.

ನಮ್ಮ ಅಭ್ಯಾಸದಂತೆ ನಸುಕಿನಲ್ಲೇ ಎದ್ದು, ಸ್ನಾನ ಶೌಚಾದಿ ಪ್ರಾಥವಿಧಿಗಳನ್ನು ತೀರಿಸಿಕೊಂಡೆವು. ಮಂತ್ರವನ್ನು ಜಪಿಸಿ, ಪೂಜೆಯನ್ನು ಮಾಡುತ್ತಾ ಇಷ್ಟದೈವ ಪುತ್ತೂರಿನ ಮಾಲಿಂಗೇಶ್ವರನಿಗೆ ವಿಶೇಷವಾಗಿ ಮತ್ತು ಹೆಚ್ಚೂಕಮ್ಮಿ ದೇಶಾದ್ಯಂತವಿರುವ ಎಲ್ಲಾ ಕಾರ್ಣೀಕದ ದೇವರಿಗೆ ವಂದಿಸಿಕೊಂಡದ್ದಾಯ್ತು. ಬಳಿಕ ನಮ್ಮೂರ ಗ್ಲೋಬಲ್ ತಿಂಡಿಯಾಗಿರುವ ಪುಂಡಿಯೆಂಬ ಉಪಾಹಾರವನ್ನು ಸೇವಿಸಿ, ಎಂದಿನಂತೆ ಸರಳವಾಗಿ ಸಿಂಗರಿಸಿಕೊಂಡು, ಮಿಣಮಿಣ ಸೀರೆಯೊಂದನ್ನು ಒಪ್ಪವಾಗಿ ಉಟ್ಟು, ಒಡ್ಡೋಲಗಕ್ಕಾಗಿ ಸಭಾಂಗಣಕ್ಕೆ ಬಂದು ಸಿಂಹಾಸನಕ್ಕೂ ಸಭೆಗೂ ವಂದಿಸಿ ಆಸೀನಾಳಾಗಿ ಸಭೆಯತ್ತ ನೋಟ ಹರಿಸುತ್ತೇವೇ..... ಆಶ್ಚರ್ಯ.... ಏನಾಶ್ಚರ್ಯ....? ಇದೇನಾಶ್ಚರ್ಯ....! ಪರಮಾಶ್ಚರ್ಯ......! ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಸಿಕ್ಕಸಿಕ್ಕಲ್ಲಿ ತಲೆತೂರುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರಿದ್ದಾರೆ. ವಂದಿ ಗಧರಿದ್ದಾರೆ. ಮಂದಿ ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ತಮ್ಮ ಆಯುಧಗಳನ್ನು ಸಿದ್ಧಪಡಿಸಿ ಕಾದಿದ್ದಾರೆ..... ಒಡ್ಡೋಲಗವನ್ನು ಆರಂಭಿಸಿಯೇ ಬಿಡೋಣವಂತೇ..... ಯಾರಲ್ಲೀ...

ಅಮ್ಮಾ.... ರಕಂದ್ಲಾಜೆಯವರೇ.... ಅಂತೂ ಗೊಂದಲ, ಬೆದರಿಕೆ, ವಿರೋಧ ಅಸಮಾಧಾನಗಳ ನಡುವೆ ನಿರೀಕ್ಷೆಯಂತೆಯೇ ತಾವು ಸಚಿವೆ ಪಟ್ಟವನ್ನು ಮರಳಿ ಪಡೆದಿದ್ದೀರಿ. ಮತ್ತೆ ಮಂತ್ರಿ ಕುರ್ಚಿ ಏರಿರುವ ತಮಗೆ ಅಭಿನಂದನೆಗಳು...... ತಾವೂ..

ನಿಮ್ಮ ಅಭಿವಂದನೆಗಳಿಗೆ ಧನ್ಯವಾದಗಳು. ನೋಡಿ ಭಾಗವತರೇ, ನಮಗೆ ಸಿಕ್ಕಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ನಾವು ಮಾಡಿರುವ ಉತ್ತಮ ಕಾರ್ಯಗಳೇ ನಮ್ಮನ್ನು ಮತ್ತೆ ಮಂತ್ರಿ ಕುರ್ಚಿಗೆ ತಂದು ಕುಳ್ಳಿರಿಸಿದೆ. ನಮ್ಮದಲ್ಲದ ತಪ್ಪಿಗೆ ನಾವು ಈ ಹಿಂದೆ ರಾಜೀನಾಮೆ ನೀಡಬೇಕಾಯಿತು. ನಮ್ಮ ರಾಜೀನಾಮೆಗೆ ಗುಂಪೊಂದು ಒತ್ತಾಯಿಸಿದ್ದಾದರೂ ಯಾಕೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ.

ಮಂತ್ರಿಣಿಯವರೇ, ತಾವು ಈ ಸಂಸ್ಥಾನದ ಮಹಾರಾಜರಿಗೆ ನಿಕಟವೆಂಬೋ ಕಾರಣಕ್ಕೇ ಮಂತ್ರಿಗಿರಿ ಪಡೆದೀರೆಂದು ಜನತೆ ಹೇಳುತ್ತಾರೆಂದರೆ ಅದು ಕ್ಲೀಷೆಯ ಮಾತಾಗುತ್ತದೆ. ಮಂತ್ರಿ ಮಂಡಲದಲ್ಲಿ ಏಕೈಕ ಮಹಿಳೆಯಾಗಿದ್ದ ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೇರಲು ಅರ್ಹರಾದ ನಾಯಕಿಯರು ತಮ್ಮ ಪಕ್ಷದಲ್ಲಿ ಇದ್ದರೂ, ಅದು ಖಾಲಿಯಾಗೇ ಇತ್ತು. ನೀವಂದು ರಾಜೀನಾಮೆ ಕೊಡಬೇಕಾದ ಸಂದರ್ಭದಲ್ಲಿ ಈ ನಾಡಿನ ಮಹಾರಾಜರು ಪ್ರಜೆಗಳ ಮುಂದೆ ಕಣ್ಣೀರುಗರೆದದ್ದೂ ಇದೆ. ಆದರೆ ಮಂತ್ರಿ ಸ್ಥಾನ ಹೋದರೂ ವಿಚಲಿತರಾದ ತಾವು ಮಾತ್ರ, ನನ್ನ ರಾಜೀನಾಮೆ ಕೇಳಲು ಕಾರಣವೇನೂ ಎಂದು ಗಟ್ಟಿಸಿ ಕೇಳಿ ಉತ್ತರ ಸಿಗದೆ ಸುಮ್ಮನಾದಿರಿ. ಘಟಾನುಘಟಿಗಳನ್ನೆಲ್ಲ ಬದಿಗೆ ಸರಿಸಿ ಅಧಿಕಾರ ಪಡೆದಿರುವವರು ತಾವು. ಇದೆಲ್ಲದರ ಒಳಗುಟ್ಟೇನೂ.....

ಭಾಗವತರೇ ನಿಮ್ಮ ರಂಪಿಗೆ ನಾಲಗೆಯನ್ನು ಹೇಗೆಬೇಕೂ ಹಾಗೆ ಹರಿಯಬಿಡಬೇಡಿ. ನಾವೇನೂ ಅಧಿಕಾರಕ್ಕಾಗಿ ಎಲ್ಲಿಯೂ ಗುಂಪುಗಾರಿಕೆ ನಡೆಸಿಲ್ಲ. ಪಕ್ಷಕ್ಕೆ ಕಾಲಿಟ್ಟಲ್ಲಿಂದ ಒಪ್ಪಿಸಿದ ಅಧಿಕಾರವನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಸಿಕೊಂಡು ಬಂದು ಪಕ್ಷದ ಹಿರಿಯರ ಮೆಚ್ಚುಗೆ ಗಳಿಸಿದವರು ನಾವು. ನಮ್ಮ ಕಾರ್ಯವೈಖರಿಯನ್ನು ಕಂಡಿರುವ ಮಹಾರಾಜರು ನಮ್ಮನ್ನು ಪುತ್ರಿಯಂತೆ ಪೋಷಿಸುತ್ತಿದ್ದಾರೆ. ಇದನ್ನು ಕಂಡರಾಗದವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರ ಕಣ್ಣಿಗೆ ಮುಳ್ಳಾಣಿ ಬಡಿಯಲಿ. ಮಂತ್ರಿಯಾಗಲು ಚುನಾವಣೆಯಲ್ಲಿ ಗೆಲ್ಲುವುದೇ ಅರ್ಹತೆ ಅಂದುಕೊಳ್ಳಲಾಗುತ್ತದಾ? ಅದೃಷ್ಟವಿರಬೇಕು, ಜನಸೇವೆ ಮಾಡಲು ತಿಳಿದಿರಬೇಕು. ರಾಜಕೀಯವನ್ನೂ ಮಾಡಬೇಕು ಗೊತ್ತಾಯಿತೇ.... ಈಗ ನೋಡಿ ನಾವು ಅಧಿಕಾರದಲ್ಲಿಲ್ಲದಾಗಲೂ ಜನಸೇವೆ ನಿಲ್ಲಿಸಿದ್ದೇವಾ? ಉತ್ತರ ಕರ್ನಾಟಕದ ಪ್ರವಾಹ ಪೀಡಿತರನ್ನು ಸಂತೈಸಲು ನಾವು ತೆರಳಿದ್ದೆವು. ಎಂಡೋಸಲ್ಫಾನ್ ಪೀಡಿತರ ಕಷ್ಟಕ್ಕೆ ಸ್ಪಂದಿಸಿದೆವು. ಹೀಗೆ ಪಟ್ಟಿಮಾಡಿದರೆ ಹಲವುಂಟು. ಗೆದ್ದು ಸಮ್ಮನೆ ಕುದ್ದರೆ ಸಾಕಾಗುವುದಿಲ್ಲ. ಉದಾಹರಣೆಗೆ ನೋಡಿ. ನಮ್ಮೂರಿನಿಂದ ಅತ್ತ ತಿರುಗಿದರೆ ಇರುವ ಸುಳ್ಯದ ಶಾಸಕ ರಂಗಾರ, ಇತ್ತತಿರುಗಿದರೆ ಕಾಣುವ ಮಂಗ್ಳೂರಿನ ಶೋಯೋಗಿ ಭಟ್ಟರು, ಕುಂದಾಪುರದ ಲಹಾಡಿ ನೀಶ್ರಿವಾಸ ಶೆಟ್ಟರು- ಇವರೆಲ್ಲ ನಾಲ್ಕುನಾಲ್ಕು ಬಾರಿ ಗೆದ್ದು, ಮಂತ್ರಿ ಸ್ಥಾನ ಸಿಗದೆ ಬಿದ್ದವರು. ಸುಳ್ಯವೆಂಬೋ ಕ್ಷೇತ್ರಕ್ಕೂ ಒಬ್ಬ ಶಾಸಕರಿದ್ದಾರೆಯೇ ಎಂದು ಜನರು ಕೇಳುವಷ್ಟು ಮಟ್ಟಿಗೆ ತಣ್ಣಗಿದ್ದಾರೆ ರಂಗಾರ. ಇವರೆಲ್ಲ ಪಕ್ಷದ ತೀರ್ಮಾನಕ್ಕೆ ಸದ್ದುಸುದ್ದಿಯಿಲ್ಲದೇ ಬದ್ಧರಾಗಿರುವಾಗ ಕೆಲಕೆಲವರು ಕೆರಳಿದರೆ ನಮಗೇನಂತೇ? ಈಗ ನೋಡಿ ಮಂಗಳೂರನ್ನೇ ತೆಗೆದುಕೊಳ್ಳಿ. ಹಲವು ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ಇದ್ದ ಭಟ್ಟರನ್ನು ಪಕ್ಕದ ಸುರತ್ಕಲ್ ಶಾಸಕ ಲೇಪಮಾರರು ಬದಿಗೆ ಸರಿಸಿ ಮಂತ್ರಿಯಾಗಿಲ್ಲವೇ... ಪ್ರತಿಯೊಂದಕ್ಕೂ ಅದರದ್ದೇ ಕಾರಣಗಳಿರುತ್ತವೆ. ರಾಜನೀತಿಯಲ್ಲಿ ಅವುಗಳನ್ನೆಲ್ಲ ಬಹಿರಂಗವಾಗಿ ಹೇಳಲಾಗುವುದಿಲ್ಲಾ...

ತಮ್ಮ ಮುಂದಿನ ಯೋಜನೆಗಳೇನೂ ತಾಯೀ...
ನಮಗೆ ಒಪ್ಪಿಸಿದ ಕಾರ್ಯವನ್ನು ಮುತುವರ್ಜಿಯಿಂದ ವಹಿಸಿಕೊಳ್ಳುತ್ತೇವೆ. ಯಾವುದೇ ಜವಾಬ್ದಾರಿಗೂ ಸಿದ್ಧ. ಜನತೆಯ ಅದರಲ್ಲೂ ಗ್ರಾಮೀಣ ಜನತೆಯ ಉದ್ಧಾರವೇ ನಮ್ಮ ಗುರಿ. ಅದರಲ್ಲೂ ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ಕಷ್ಟಕೋಟಲೆಯಿಂದ ಹೊರಬರಬೇಕೆಂಬುದೇ ನಮ್ಮ ಹೋರಾಟ. ಭಾಗವತರೇ ಕಾದು ನೋಡುವಿರಂತೇ.... ಎಲ್ಲವೂ ಪುತ್ತೂರಿನ ಮಹಾಲಿಂಗೇಶ್ವರನ ಇಚ್ಛೆ.

ಸರಿ ರಕಂದ್ಲಾಜೆಯವರೇ.... ಇಂದಷ್ಟೆ ಅಧಿಕಾರ ಸ್ವೀಕರಿಸಿರುವ ತಾವು ಅವಸರದಲ್ಲಿದ್ದಂತೆ ತೋರುತ್ತದೆ. ಮತ್ತೊಮ್ಮೆ ಸಾವಕಾಶವಾಗಿ ಭೇಟಿಯಾಗೊಣ ಎನ್ನುತ್ತಾ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ. ಎಲ್ಲರಿಗೂ ಒಳಿತಾಗಲೀ.. ಸರ್ವೇಜನ ಸುಖಿನೋಭವಂತು...!

ಮಂಗಳಂ......

ಸೋಮವಾರ, ಸೆಪ್ಟೆಂಬರ್ 13

ಮಳೆ, ಆಷಾಢ, ಅಳಿಯ, ಎಮ್ಮೆ ಇತ್ಯಾದಿ...

"ಬರಗಾಲಕ್ಕೆ ಬಿದ್ದಂತೆ ಮಳೆಗಾಗಿ ಚಾತಕ ಪಕ್ಷಿಯಾಗಿದ್ದ ನಿನಗೇ ಎಂಬಂತೆ ಇಷ್ಟೊಂದು ಮಳೆ ಸುರಿಸಿದರೂ ಇನ್ನೂ ಬರೆಯದೇ ಬಿದ್ದಿದ್ಯಲ್ಲ, ನಿನ್ನ ಮುಖಕ್ಕಿಷ್ಟು..." ಎಂದು ಬಯ್ದಂತಾಯಿತು. ಮಳೆಯನ್ನು, ನೀರನ್ನು ಬ್ಲಾಗಿನಲ್ಲಿ ಸುರಿಸಬೇಕೆಂಬ ಯೋಜನೆಯನ್ನು ಮುಂದೂಡುತ್ತಲೇ ಇರುವಾಗ, ಮಧ್ಯೆ ಒಂದಿಷ್ಟು ಬಿಸಿಲ ಗ್ಯಾಪ್ ನೀಡಿ, ಮತ್ತೆ ಮತ್ತೆ ದಿನಪೂರ್ತಿ ಸುರಿದ ಧೋ ಮಳೆ ನನ್ನ ಮುಖಕ್ಕೆ ರಾಚುತ್ತಿರಬೇಕಿದ್ದರೆ ಮೇಲಿನಂತೆ ಧ್ವನಿಸಿತ್ತು ನನಗೆ. ಹಾಗಾಗಿ ಈ ಅಪ್‌ಡೇಟ್.

ಬೇಸಗೆಯಲ್ಲಿ ಬಿರುಬಿಸಿಲಿನ ಮೂಲಕ ಬೆವರಿಳಿಸಿದ ಸೂರ್ಯನ ಮುಖದಲ್ಲಿ ನೀರಿಳಿಸುವಂತೆ ಮಳೆ ಸುರಿದಾಗ, ಇಂತಹ ಮಳೆಗಾಗಿ ಮೂರೂವರೆ ವರ್ಷದಿಂದ ಕಾದು ಮರಳಿ ಮಳೆಯೂರ ವಾಸಿಯಾಗಿರುವ ನನಗೆ ಇದೇ ಮಳೆಯನ್ನು ಬ್ಲಾಗಿನಲ್ಲಿ ಸುರಿಸಬೇಕೆಂದೆನಿಸಿತ್ತು. ದಿವ್ಯ ಸೋಂಬೇರಿಯಾಗಿರುವ ನಾನು ಇಂದು ನಾಳೆ ಎನ್ನುತ್ತಿರುವಾಗಲೇ ಮಳೆಯ ಬಿರುಸು ಕಡಿಮೆಯಾದಂತಾಗಿ, ಸಾಯ್ಲಿ ಬೇಡ ಎಂದು ತೀರ್ಮಾನಿಸಿದ್ದೆ.

ಅದಕ್ಕೆ ಸರಿ ಎಂಬಂತೆ, ನನ್ನಣ್ಣ ಫೋನಿಸಿ ಆಷಾಢಕ್ಕೆ ಕರೆದೊಯ್ಯಲು ಬರುತ್ತೇನೆ ಅಂದಿದ್ದ. ಈ ವಾರ, ಮುಂದಿನ ವಾರ ಎಂದು ಅವನನ್ನು ಸತಾಯಿಸಿ ಆಷಾಢ ಇನ್ನೆರಡು ದಿನ ಇದೆ ಎಂದಾಗ ಹೊರಟೆ. ಆದರೆ ಅದಕ್ಕೂ ವಿಘ್ನ. ಅದೇ ದಿನ ಆತ್ಮೀಯರೊಬ್ಬರು ನಮಗಾಗಿ ಔತಣ ಏರ್ಪಡಿಸಿದ್ದಾಗ ಅಲ್ಲೂ ಇಲ್ಲವೆನ್ನಲಾಗದೆ - ಇಲ್ಲೂ ಇಲ್ಲವೆನ್ನಲಾಗದೆ, ಇಕ್ಕಡೆಯಲ್ಲೂ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರೆಯ ಬಂದ ಅಣ್ಣನಿಗೆ ಅನಾರೋಗ್ಯದ ನೆಪ ಮುಂದಿಟ್ಟು, ಇಂದು ಬರಲಾಗುವುದಿಲ್ಲ ನಾಳೆ ಎಂದು, ಕೊನೆಗೆ ನನ್ನ ಮಗ(ಅಕ್ಕನ) ಶರತ್ ಹೇಳಿದಂತೆ ಒಬ್ಬಳೇ ತವರಿಗೆ ತೆರಳಿದೆ. (ತಂಗಿಯನ್ನು ಕರೆಯ ಬರುವ ಅಣ್ಣನಿಗೆ ಜತೆಯಾಗುವಂತೆ ಪಿಯು ಕಲಿಯುತ್ತಿರುವ ಶರತ್‌ಗೆ ಹೇಳಲಾಗಿತ್ತು. ಅವನಿಗೆ ನಗುವೋ ನಗು. ಒಂಟಿ ಸಲಗಿಯಂತೆ ಊರೂರು ಅಲೆದಿರುವ ಚಿಕ್ಕಮ್ಮನನ್ನು ಕರೆತರುವುದು ಅವನಿಗೆ ದೊಡ್ಡ ಸೋಜಿಗವಾಗಿ ಕಂಡಿತ್ತು!!)

ಕೊನೆಗೂ ಆಷಾಢಕ್ಕೆ ಹೋದೆ. ಅತ್ತೆ ಬರ್ತಾರೇ ಅಂತ ತಿಂಗಳಿನಿಂದ ಕಾದಿದ್ದ ನಾಲ್ಕರ ಹರೆಯದ ನನ್ನಳಿಯಗೆ ಸಂಭ್ರಮವೋ ಸಂಭ್ರಮ. ಶಾಲೆಯಿಂದ (ಹಳ್ಳಿಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಆತನಿಗೆ ‘ಸ್ಕೂಲ್’ ಗೊತ್ತಿಲ್ಲ) ಬಂದವನೇ ಡಬ್ಲ್ಯುಡಬ್ಲ್ಯುಎಫ್ ಪ್ರೇರಣೆಯಂತೆ ನನ್ನಮೇಲೆ ಹಾರಿದ, ಒದ್ದ - ಗುದ್ದಿದ. ನಂಗೆ ಅಂಟಿಯೇ ಇದ್ದ ಅವನೊಂದಿಗೆ ಜೆಸಿಬಿ ಓಡಿಸಿ, ಕಾರ್ ಕೆಡವಿ, ಕ್ರಿಕೆಟ್ ಆಡಿ, ಬೊಂಬೆ ದೂಡಿ ಬೋರಾದಾಗ ತೋಟಕ್ಕೆ ಹೊರಟೆವು.

ಮೇಲೆ ತೋಟದ ಮೂಲೆಯಲ್ಲಿರುವ ಅವ್ವನ ಹೊಸ ಜಾಗಕ್ಕೆ ತೆರಳಿ ನಮಿಸಿ ಹಿಂತಿರುಗುವಾಗ ಕೈಯನ್ನು ಎಳೆಯಲಾರಂಭಿಸಿದ ವಿ(ಘ್ನೇ)ಶು ಕೆಳ ತೋಟಕ್ಕೆ ಹೋಗ್ವಾ ಅಂತಾ ಒತ್ತಾಯಿಸಿದ. ಸಿಂಗಮಾಮನ ತೋಟಕ್ಕೆ ಅಂಟಿಕೊಂಡಿರುವ ನಮ್ಮ ತೋಟದ ಅಂಚಿನ ತನಕ ಹೋದೆವು. ಚಚಿಪಿಚಿ ಕೆಸರಿನಲ್ಲಿ ಕಾಲಿಟ್ಟೆವು. ಕಂಠಮಟ್ಟ ನೀರಿನಿಂದ ತುಳುಕುತ್ತಿದ್ದ ಕೆರೆಬಳಿ ತೆರಳಿ ನೀರೊಳಗೆ ಪುಳುಪುಳುಕ್ಕೆಂದು ಸೊಂಟ ಬಳುಕಿಸಿ ಓಡುವ ಮೀನುಗಳನ್ನು ನೋಡಿದೆವು. ಕಂಗು-ಬಾಳೆಯ ಪ್ರತಿಬಿಂಬವನ್ನು ನುಂಗಿ ಗಾಂಭಿರ್ಯವೇ ಮೈವೆತ್ತಂತೆ ನಿಂತಿದ್ದ ಸ್ಪಟಿಕಶುದ್ಧಿಯ ನೀರಿಗೆ ಪುಟ್ಟಪುಟ್ಟ ಕಲ್ಲುಗಳನ್ನು ಎಸೆದ ಅಳಿಯನಿಗೆ ಅದರಿಂದೇಳುವ ತರಂಗಗಳಲ್ಲಿ ಕಂಗಿನ ಮರದ ಬಿಂಬ ಮುರಿದಂತಾಯಿತೇಕೆ ಎಂಬ ಕೌತುಕ.

ಕತ್ತಲಾಯಿತು ಹೋಗೋಣ ಪುಟ್ಟಾ ಅನ್ನುತ್ತಾ ಹೊರಟೆ ಮನೆಗೆ. ತೋಡಿನ (ತೊರೆ) ಬಳಿ ಬಂದಾಗ ಓಡಿ ನೀರಿಗಿಳಿದು ಬಿದ್ದುಗಿದ್ದಾನೆಂಬ ಭಯಕ್ಕೆ ಅವನ ಕೈ ಗಟ್ಟಿ ಹಿಡಿದಿದ್ದೆ. ಅತ್ತೇ ನೀರಿಗಿಳಿಯುವಾ ಎಂದ. ಬೇಡ ಅಮ್ಮ ಬಯ್ತಾರೆಂದು ಗದರಿ ಮುಂದೆ ಸಾಗಿದೆ. ಮಗು ಮತ್ತೆಮತ್ತೆ ಹಿಂತಿರುಗಿ ಹರಿವ ನೀರನ್ನು ತನ್ನ ಹೊಳೆವ ಕಂಗಳಲ್ಲಿ ಆಸೆಯಿಂದ ನೋಡುತ್ತಾ ನೋಡುತ್ತಾ ನನ್ನ ಕೈಯನ್ನು ಹಿಂದಿಂದೆಗೇ ಜಗ್ಗುತ್ತಿದ್ದ. ಮಗುವಿನ ಆಸೆ ಪೂರೈಸುವಾ ಎಂದು ಹಿಂತಿರುಗಿದೆ. ರಾಮರಾಮಾ... ಅವನ ಖುಷಿಯೋ... ತನ್ನ ಚೋಟುದ್ದ ಚಡ್ಡಿ ಮಡಚುತ್ತಾ, ಅತ್ತೇ ನಿನ್ನ ಪ್ಯಾಂಟು ಮಡಚು, ಚಂಡಿ ಆದರೆ ಅಮ್ಮ ಬಯ್ತಾರೆಂದು ನನ್ನನ್ನು ಎಚ್ಚರಿಸಿದ. ಮುದ್ದುಮುದ್ದು ಕಾಲನ್ನು ಅವಚಿದ್ದ ಪುಟ್ಟ ಚಪ್ಪಲನ್ನು ಅವಸರವಸರದಲ್ಲಿ ಕಳಚಿ, ಥಳುಕು ಬಳುಕಿನೊಂದಿಗೆ ರಭಸದಿಂದ ಹರಿಯುತ್ತಿದ್ದ ನೀರಿಗೆ ಇಳಿದೆವು. ಏನು ಖುಷಿ ಹುಡುಗನಿಗೆ. ನೀರೇ ಕಾಣದವರಂತೆ ಕುಣಿತ, ನಗು, ಕೇಕೆ. ಅಷ್ಟೂ ನೀರನ್ನು ತನ್ನ ಪುಟ್ಟ ಬೊಗಸೆಯಲ್ಲಿ ತುಂಬುವ ಯತ್ನ. ಪುಟ್ಟಪುಟ್ಟ ಕಲ್ಲುಗಳನ್ನು ಅಮೂಲ್ಯ ಹರಳುಗಳಂತೆ ಹೆಕ್ಕುವುದೇನು, ಅವುಗಳನ್ನು ಬೀಸಿಬೀಸಿ ಒಗೆಯುವುದೇನು. ಆ ಸದ್ದಿಗೆ ಪುಳಕಗೊಳ್ಳುವುದೇನು. ನೀರೊಳಗೆ ಮಿನುಗುತ್ತಿದ್ದ ನನ್ನ ಕಾಲ್ಬೆರಳ ಬಣ್ಣ ಅವನಿಗೆ ಬಂಗಾದಂತೆ ಕಂಡಿತೋ, ಮುಟ್ಟಿಮುಟ್ಟಿ ಸವರಿದ. ಪಾಚಿಬಂಡೆ ಮೇಲೆ ಕಾಲಿರಿಸಿ ಜಾರಿದ, ಸುಳ್ಳುಸುಳ್ಳೇ ಬಿದ್ದ, ಮೈಯೀಡೀ ಒದ್ದೆಯಾಗುವಂತೆ ಮಲಗಿದ, ಎದ್ದ. ಅತ್ತೇ ನಾವಿಂದು ಇಲ್ಲೇ ಇರುವಾ ಎಂಬ ಬೇಡಿಕೆ ಇಟ್ಟ.

ಆಕಾಶಕ್ಕೆ ತೂತುಬಿದ್ದಂತೆ ಮೂರ್ನಾಲ್ಕು ದಿನ ನಿರಂತರವಾಗಿ ಮಳೆ ಹುಯ್ಯುತ್ತಿದ್ದ ಅಂದಿನ ದಿನಗಳಲ್ಲಿ ನಾನು ಮತ್ತು ಅಣ್ಣ ಇದೇ ತೋಡಿಗೆ ಪ್ರವಾಹದ ನೀರು ನೋಡಲು ಹೋಗುತ್ತಿದ್ದೆವು. ಮಳೆ ನೀರೆಲ್ಲ ಕೊಚ್ಚಿ ಮಣ್ಣಿನೊಂದಿಗೆ ಬೆರೆತು ಕೆಂಬಣ್ಣವಾಗಿ ತೋಡಿಗಿಳಿದು, ಸುಮಾರು ಒಂದೂವರೆ ಆಳೆತ್ತರದಲ್ಲಿ ರಭಸದಿಂದ ಸಶಬ್ದವಾಗಿ ಹರಿಯುವ ವೇಳೆ ಅದರ ರುದ್ರ ಸೌಂದರ್ಯ ಭಯ ಮಿಶ್ರಿತ ಆನಂದ ನೀಡುತ್ತಿತ್ತು. ಕತೆಗಳಲ್ಲಿ ಕೇಳಿದಂತೆ ಚಿನ್ನದ ನಾಣ್ಯಗಳಿಂದ ತುಂಬಿದ ಕೊಪ್ಪರಿಗೆಯೇನಾದರೂ ನೀರಿನಲ್ಲಿ ತೇಲಿಬಂದು ನನ್ನ ಬಳಿ ನಿಂತು ಬಾಗಿಲು ತೆರೆದರೆ ಯಾವುದರಲ್ಲಿ ಮೊಗೆದುಕೊಳ್ಳಲೀ ಎಂಬ ದುರಾಸೆ ನನ್ನದಾದರೆ, ನೀರಿನಲ್ಲಿ ತೇಲಿ ಬರುವ ತೆಂಗಿನ ಕಾಯಿ ಹಿಡಿಯುವ ಸಾಹಸ ಅಣ್ಣನಿಗೆ.

ಹೀಗೆ ಅದೊಮ್ಮೆ ನಾವಿಬ್ಬರು ತೊರೆ ಬದಿ ನಿಂತಿದ್ದಾಗ ಇಂದಿರಾ ಟೀಚರ ಎಮ್ಮೆ ನೀರಿನಲ್ಲಿ ತೇಲಿ ಹೋಯಿತು. 'ಅಯ್ಯೋ ಎಮ್ಮೆ' ಅಂದ ಅಣ್ಣ, ಕೈಯಲ್ಲಿ ಹಿಡಿ ಹುಲ್ಲುಕಿತ್ತು ಎಮ್ಮೆಗೆ ತೋರಿದ. ಹುಲ್ಲಿನಾಸೆಗೆ ತಿರುಗಿ ಬರಲೀ ಎಂದು. ಆದರೆ ಪಾಪದ ಎಮ್ಮೆಗೆ ಸ್ವಯಂ ಆಧರಿಸಿಕೊಳ್ಳಲಾಗದ ವೇಗದಲ್ಲಿ ನೀರು ಹರಿಯುತ್ತಿತ್ತು. ಆಸೆಯ ಕಂಗಳಿಂದ ನಮ್ಮತ್ತ ದಯನೀಯವಾಗಿ ತಿರುತಿರುಗಿ ನೋಡಿದ ನೋಟ ಕರುಳು ಕಿವುಚಿತ್ತು. ಅಣ್ಣ ನನ್ನನ್ನು ಒಂದು ಸುರಕ್ಷಿತವಾದ ಜಾಗದಲ್ಲಿ ನಿಲ್ಲಿಸಿ, ಮತ್ತೊಂದೆಡೆ ತೋಡಿಗೆ ಸಮವಿರುವ ರಸ್ತೆಯಿಂದ ಓಡಿದ. ಸುಮಾರು ಒಂದೂವರೆ ಕಿಲೋ‌ಮೀಟರ್ ದೂರದಲ್ಲಿ ತೋಡು ರಸ್ತೆಯನ್ನು ಕ್ರಾಸ್ ಮಾಡುವ ಜಾಗಕ್ಕೆ ಬರಿಗಾಲಲ್ಲಿ ಓಡಿದ. ಪುಣ್ಯಕ್ಕೆ ನೀರಲ್ಲಿ ಕೊಚ್ಚಿದ್ದ ಎಮ್ಮೆ ಅಲ್ಲಿ ತಲುಪುವಷ್ಟರಲ್ಲಿ ಇವನೂ ಅಲ್ಲಿ ತಲುಪಿ, ನೀರಿನೊಂದಿಗೆ ಸೆಣಸಾಡಿ ಎಮ್ಮೆಯನ್ನು ಬಚಾವ್ ಮಾಡಿ ಇಂದಿರ ಟೀಚರ ಮನೆಯತ್ತ ಅಟ್ಟಿದ್ದ.

ಅಷ್ಟೊತ್ತು "ಸ್ವಾಮೀ ದೇವಾ ಎಮ್ಮೆ ಸಿಗಲೀ" ಎಂದು ಪ್ರಾರ್ಥಿಸುತ್ತಾ ನಿಂತಿದ್ದ ನನಗೆ ಅಣ್ಣ ಬಂದು ಎಮ್ಮೆಯನ್ನು ರಕ್ಷಿಸಿದ ಸಾಹಸಗಾಥೆ ಹೇಳುತ್ತಿದ್ದರೆ, ಸಡನ್ ದುಃಖವಾಗತೊಡಗಿತು. ಛೇ, ಎಮ್ಮೆಯ ಬದಲು ಸಾಕ್ಷಾತ್ ಇಂದಿರಾ ಟೀಚರೇ ಬೊಳ್ಳದಲ್ಲಿ (ನೀರಿನಲ್ಲಿ) ಕೊಚ್ಚಿ ಹೋಗಿಲ್ಲವಲ್ಲಾ ಎಂಬ ಬೇಸರ ಕಾಡಿತು. ಸದಾ ಮಗ್ಗಿ ಕಲಿಯಿರಿ, ಲೆಕ್ಕ ಮಾಡಿ ಎಂದೆಲ್ಲ ಹಿಂಸಿಸಿ, ಒಮ್ಮೊಮ್ಮೆ ಕಿವಿ ಹಿಂಡಿ - ತಲೆಗೆ ಕುಟ್ಟಿ ಹಾಕುತ್ತಾ ನಮ್ಮ ಆಟ, ಮತ್ತಿನ್ನಿತರ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದ ಅವರನ್ನು ನಾವು ವಿಲನ್ ಎಂದೇ ಪರಿಗಣಿಸಿದ್ದೆವು. (ನಾಟಕದಲ್ಲಿ ಪಾರ್ಟು ಕೊಟ್ಟು ನನ್ನನ್ನು ಆ ಊರಿನ 'ಮಹಾನ್ ಕಲಾವಿದೆ'ಯಾಗಿಸಿದ್ದು ಅದೇ ಇಂದಿರಾ ಟೀಚರ್ ಎಂಬುದು ನಂತರದ ವಿಚಾರ)

ಈ ಎಲ್ಲ ಸಂಗತಿ ನೆನಪಾಗಿ ವಿಘ್ನೇಶನ ಕೈಯ ಬಿಗಿತ ಒಂಚೂರು ಸಡಿಲವಾಯಿತು. ನನ್ನ ಕೈ ಜಾರಿಸಿ ಭುಳುಂಕೆಂದು ನೀರಿಗೆ ಬಿದ್ದ ಅವನಿಗೆ ಹೆದರಿಕೆ ಹೋಗಲು ಒಂದು ಪ್ರೀತಿಯ ಏಟು ಬಿಗಿದು, ನೀರಿಂದ ಮೇಲೆ ಬಂದೆವು. ಒದ್ದೆಯಾದ ಚಡ್ಡಿಹಾಕಿ ನಡೆಯಲು ಅವಸ್ಥೆ ಪಡುತ್ತಿದ್ದ ಅವನ ಚಡ್ಡಿ ಕಳಚಿದೆ. ತನ್ನ ಗೇಣುದ್ದದ ಬನಿಯನ್ ಎಳೆದೂ ಎಳೆದೂ ಮಾನ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವನೊಂದಿಗೆ ನಸುನಗುತ್ತಾ ಮನೆಯತ್ತ ಹೆಜ್ಜೆ ಹಾಕಿದೆ.

(ವಿ.ಸೂ: ಮಳೆಯ ಬಗ್ಗೆ ಎನ್ನುತ್ತಾ, ಆಷಾಢದ ಬಗ್ಗೆ, ಅದು ಸಹ ಶ್ರಾವಣ ಕಳೆದು ಭಾದ್ರಪದದಲ್ಲಿ ಬರೆದು... ಇದೆಂತಾ ಅನ್ನಬೇಡಿ., ತೆಂಗಿನ ಮರದ ಬಗ್ಗೆ ತಯ್ಯಾರಾಗಿ ಕ್ಲಾಸಿಗೆ ಹೋಗಿದ್ದ ವಿದ್ಯಾರ್ಥಿಗೆ ಮಾಸ್ಟ್ರು ಹಸುವಿನ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದು , ಕೊನೆಗೆ ತೆಂಗಿನ ಮರವನ್ನೆಲ್ಲಾ ವರ್ಣಿಸಿ, ಇಂತಹ ತೆಂಗಿನ ಮರಕ್ಕೆ ಹಸುವನ್ನು ಎಳೆದು ಕಟ್ಟಲಾಯಿತು ಎಂದು ವಿದ್ಯಾರ್ಥಿ ಪ್ರಂಬಂಧ ಮುಗಿಸಿದ್ದು ನಿಮಗೆ ಗೊತ್ತಿರಬಹುದು!!)

ಮಂಗಳವಾರ, ಆಗಸ್ಟ್ 3

ಆಫೀಸೆಲ್ಲಾ..... ನಾತಮಯಾ....

ಆಗೀಗ ಗಾಳಿಯೊಂದಿಗೆ ಕೆಟ್ಟ ವಾಸನೆ ಪಸರಿಸುತ್ತಿತ್ತು. ಭಾನುವಾರದ ಗಮ್ಮತ್ತಿನೂಟದ ಪ್ರಭಾವವಿರಬೇಕು. ನಮ್ಮಾಫೀಸಿನ ಸಿಬ್ಬಂದಿಯೊಬ್ಬರು ಕಾಲಮೇಲೆ ಕಾಲು ಹಾಕಿ, ಒಂದು ಭಾಗವನ್ನು ಒಂಚೂರು ಎತ್ತಿ, ಒಂಥರಾ ಭಂಗಿಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದರು. ಇವರ ಭಂಗಿ ನೋಡಿ ದುರ್ನಾತಕ್ಕೆ ಕಾರಣ ಕಂಡು ಹಿಡೆದೆ. ನಕ್ಕುಬಿಟ್ಟರೆ ಅವರಿಗೆ ಅವಮಾನವಾದೀತೆಂದು ಆಡಲೂ ಆಗದೆ, ಅನುಭವಿಸಲೂ (ವಾಸನೆಯನ್ನು) ಆಗದೇ ಕುಳಿತಿದ್ದೆ. ನಿಮಗೂ ಈಗ ಕಾರಣ ಗೊತ್ತಾಗಿರಬಹುದು. ಸುಸಂಸ್ಕೃತಿಯಿಂದ ಮಂಡಿಸುವುದಾದರೆ ಅಪಾನವಾಯು ಅಥವಾ ಅಧೋವಾಯು ಹೊರಡುತ್ತಿತ್ತು. ಸಮ್ಮನೆ ನೇರವಾಗಿ ಹೇಳುವುದಾದರೆ ಹೂಸು ಬಿಡುತ್ತಿದ್ದರು.

ತಕ್ಷಣ ಅನ್‌ಲೈನ್ ನಿಘಂಟಿಗೆ ಹೋಗಿ ಹೂಸು ಕೊಟ್ಟು (ಬಿಟ್ಟು?) ನೋಡಿದೆ. "ದೇಹಗತವಾದ ಐದು ಬಗೆಯ ಪ್ರಾಣವಾಯುಗಳಲ್ಲಿ ಒಂದು, ಗುದಸ್ಥಾನದ ವಾಯು, ಅಪಾನವಾಯು, ಅಧೋವಾಯು" ಎಂಬೆಲ್ಲ ಸಮಾನಾರ್ಥಕ ಶಬ್ದಗಳು ಬಿಚ್ಚಿಕೊಂಡವು. ಇಷ್ಟರಲ್ಲಿ ಇದಕ್ಕೆ ಸಂಬಂಧಿಸಿದ ಅನುಭವಗಳು, ಗಾದೆಗಳು, ಜೋಕುಗಳು ಪುಂಖಾನುಪುಂಖಾನುವಾಗಿ ಮನದಲ್ಲಿ ಹರಡಿ ಬ್ಲಾಗಿಸಬೇಕೆಂಬ ತುಡಿತ ಒದ್ದುಕೊಂಡು ಬಂತು. ನಮ್ಮೂರಲ್ಲಿ ಸುರಿದ ಜಡಿಮಳೆಯ ಬಗ್ಗೆ ಬರಯೋಣ ಎಂದು ಒಂದು ತಿಂಗಳಿಂದಲೇ ಪ್ಲಾನು ಹಾಕುತ್ತಿದ್ದ ನಾನು ಸಡನ್ನಾಗಿ ವಿಷಯಾಂತರಿಸಿ ಅಪಾನವಾಯು ಬಗ್ಗೆ ಬರೆಯ ಹೊರಟಿರುವೆ. ನಿಮಗೆ ಛೀ..., ಅಸಂಹ್ಯ....., ಗಲೀಜು... ಹೇಸಿಗೆ ಎಂದೆಲ್ಲ ಅನಿಸುತ್ತದೆಯೇನೋ....? ಆದರೆ ನಾನೇನೂ ಮಾಡುವಂತಿಲ್ಲ. ಇದು ಸ್ವಲ್ಪ ನಾತಮಯ ವಿಷಯವೇ. ನೀವು ಬೇಕಾದರೆ ಮೂಗು ಮುಚ್ಚಿಕೊಂಡೇ ಓದಿ.

ಹಾಗೇ ನೋಡಿದರೆ ನಾನು ಹುಟ್ಟಿದ ಮತ್ತು ಮೆಟ್ಟಿದ ಎರಡೂ ಮನೆಗಳೂ ಸಹ 'ಸೌಂಡ್' ಫ್ಯಾಮಿಲಿಗಳೇ. ಚಿಕ್ಕವರಿದ್ದಾಗ ಅಪ್ಪನ ಹೂಸಿನ ಶಬ್ದದೊಂದಿಗೇ ಬೆಳೆದವರು ನಾವು. ಮನೆಯಲ್ಲಿ ಯಾರಾದರೂ ನೆಂಟರಿದ್ದರೆ ಅದರ ಭರಾಟೆಗೊಂದಿಷ್ಟು ಕಡಿವಾಣ ಇರುತ್ತಿದ್ದಾದರೂ; ಮಿಕ್ಕಂತೆ, ಯಜಮಾನನೆಂಬ ಗತ್ತಿನೊಂದಿಗೆ ಭಯಂಕರವಾದ ಡೊಂರಂಕ್, ಡು...ರ್ರಂಕ್ ಶಬ್ದ ತಥಾನುಗತವಾಗಿ ಕೇಳಿಬರುತ್ತಿತ್ತು. ನಾವು ಮುಖಮುಖ ನೋಡಿ (ಸದ್ದಿಲ್ಲದೆ) ನಗುತ್ತಿದ್ದೆವು. ಸತ್ಯ ಹೇಳಬೇಕೆಂದರೆ, ಕಕ್ಕುಸಿಲ್ಲದ ಆ ಕಾಲದಲ್ಲಿ ಬಹಿರ್ದೆಸೆಗೆ ಗುಡ್ಡೆಗೆ ಓಡುತ್ತಿದ್ದ ನಾವು, ಅರ್ಜೆಂಟ್ ಆದಾಗೆಲ್ಲ, ಅಪ್ಪನ ಮಟ್ಟದಲ್ಲಿ ಢರುಂಕ್ ಢುರುಂಕ್ ಅಲ್ಲವಾದರೂ, ಪುಯಿಂಕ್, ಕುಯಿಂಕ್ ಎಂಬ ಸದ್ದು ಹೊರಡಿಸಿಕೊಂಡು ಓಡುತ್ತಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.

ಅವ್ವನಿಗೋ, ಅಪ್ಪನ ಈ ರೀತಿ ಅವಮರ್ಯಾದೆ ಅನಿಸುತ್ತಿದ್ದು, ಸಿಡಿಮಿಡಿ ಅನ್ನುತ್ತಿದ್ದರು. ಒಮ್ಮೊಮ್ಮೆ ಪರಮೋಶಿಯಿಂದ ಅವರ ದೇಹದಿಂದಲೂ ನಿಯಂತ್ರಣ ತಪ್ಪಿ ಹೊರಟು ಬಿಡುತ್ತಿತ್ತು. ಅಪ್ಪನಿಗಿಂತ ಹೆಚ್ಚು ಸಲಿಗೆ ಅವ್ವನ ಬಳಿ. ನಾವೆಲ್ಲ ಜೋರಾಗೇ ನಕ್ಕರೆ, ನಮ್ಮನ್ನೆಲ್ಲ ಬಯ್ದು- ಜಾಡಿಸಿ, 'ಹೂಸಿಗೆ ನಗುವವರು ಹೂಸಿಂದ ಕಡೆ' ಎಂಬ ಅವರವ್ವನ ಗಾದೆಯನ್ನು ಉಲ್ಲೇಖಿಸಿ ನಮ್ಮನ್ನು ಹೂಸಿಗಿಂತ ಕಡೆಯಾಗಿಸಲು ಪ್ರಯತ್ನಿಸುತ್ತಿದ್ದರು.

ಈ ನನ್ನ ಶ್ರೀಪತಿಯಂತೂ ಲೈಸನ್ಸೇ ಇಲ್ಲದವರಂತೆ ಬಿಡುತ್ತಾರೆ. (ಒಮ್ಮೊಮ್ಮೆ ಅತ್ತೆಮ್ಮನೂ ಇವರಿಗೆ ಸ್ಫರ್ಧೆಯೊಡ್ಡಿ ಜುಗಲ್ಬಂದಿ ಏರ್ಪಡುವುದಿದೆ) ಯಾರಾದರೂ ಹೊಸಬರೆದುರು ಇವರ ಸೌಂಡ್ ಹೊರಟರೆ ನಂಗಂತೂ ಒಂಥರಾ ಆಗೇ ಆಗುತ್ತೆ. ಒಂದ್ಸಾರಿ ಫ್ರೆಂಡ್ ಮನೆಗೆ ಹೋಗಿದ್ದೆವು. ಊಟವೆಲ್ಲ ಮುಗಿಸಿ ಬೀಳ್ಕೊಡುಗೆ ಸಂದರ್ಭ. ಕಾರೇರಲು ನಿಂತಿದ್ದಾಗ ಇವರ ಸೌಂಡ್ ಹೊರಟಿತು. ಸ್ವಲ್ಪವಾದರೂ ಕಂಟ್ರೋಲ್ ಮಾಡಲು ನೋಡ್ತಾರಾ ಮಹರಾಯ, ಕೆಟ್ಟವಾಯುವನ್ನು ಎಗ್ಗಿಲ್ಲದೆ ಹೊರಹಾಕುತ್ತಿದ್ದರು. ದೊಡ್ಡವರೆಲ್ಲ ನಿರ್ಲಕ್ಷಿಸಿದಂತೆ ಮಾಡಿದರೂ, ಅಲ್ಲಿದ್ದ ಮಕ್ಕಳು ಕೇಳ್ತಾವಾ? ಕಿಸಿಕಿಸಿ... ಪಿಸಿಪಿಸಿ.. ಅನ್ನುತ್ತಾ ಬಾಯಿಗೆ ಕೈಹಿಡಿದು ದೂರ ಓಡಿದವು. ಮನೆಗೆ ಬಂದಮೇಲೆ ಪಿರಿಪಿರಿ ಮಾಡಿದೆ. ಎಂಥ ನೀವು, ಮಕ್ಕಳೆದುರೆಲ್ಲಾ ಎಂಬ ಆಕ್ಷೇಪ ವ್ಯಕ್ತಪಡಿಸಿದರೆ ಕ್ಯಾರೇ ಇಲ್ಲದ ಅವರು ಅದರಲ್ಲೇನಿದೆ, ಎಲ್ಲರೂ ಬಿಡುತ್ತಾರೆ, ಇಟ್ಸ್ ಹೆಲ್ದೀ.. ನನ್ನ ಆಕ್ಷೇಪಣೆಯನ್ನು ಚಿಲ್ಲರೆ ಮಾಡಿಬಿಟ್ಟರು.

ನಮ್ಮೂರಲ್ಲೊಬ್ಬ ಅಪ್ಪಯ್ಯಣ್ಣ ಇದ್ದರು. ಈಗವರು ದಿವಂಗತ. ಗಾತ್ರದಲ್ಲಿ ಇವರು ಕುಳ್ಳಗೆ ಗುಂಡುಗುಂಡಾಗಿದ್ದರೆ, ಇನ್ನೋರ್ವ ಅಪ್ಪಯ್ಯಣ್ಣ ಸೊಣಕಲಾಗಿದ್ದರು. ಹಾಗಾಗಿ ಬೊಡ್ಡಪ್ಪಯ್ಯಣ್ಣ ಎಂಬ ನಾಮಾಂಕಿತರಾಗಿದ್ದ ಅವರು ಯಾವಾಗಲೂ, ನಗುತ್ತಾ ನಗಿಸುತ್ತಲೇ ಇರುತ್ತಿದ್ದರು. ಪುಟ್ಟ ಮಕ್ಕಳನ್ನು ಕಂಡಾಗೆಲ್ಲ ಇವರದ್ದೊಂದು ತಮಾಷೆ. ಕೈ ಬೆರಳುಗಳನ್ನೆಲ್ಲ ಮಡಿಚಿ "ಅಯ್ಯೋ ಬೆರಳು ಮುದ್ದೆ ಆಯ್ತು, ಬಿಡಿಸಲಾಗುತ್ತಿಲ್ಲ" ಎನ್ನುತ್ತಾ ಒದ್ದಾಡುವಂತೆ ನಾಟಕ ಮಾಡುತ್ತಾ ಮಕ್ಕಳ ಮನದಲ್ಲಿ ಅನುಕಂಪ ಗಿಟ್ಟಿಸುತ್ತಿದ್ದರು. ಪಾಪ ಅನ್ನುತ್ತಾ ನಾವು ಅವರ ಕೈ ಬೆರಳನ್ನು ಇನ್ನಿಲ್ಲದ ಶ್ರದ್ಧೆಯಿಂದ ಬಿಡಿಸುತ್ತಿರುವಾಗ ಬಾಂಬ್ ಸಿಡಿದಂತೆ ಡೊಂಯಿಂಕ್ ಎಂಬ ಸದ್ದಿನೊಂದಿಗೆ ಅವರ ದೇಹದೊಳಗಿನ ವಾಯುಹೊರಡುತ್ತಿತ್ತು. ನಮ್ಮ ಸ್ಥಿತಿ ಕಂಡು ಡೊಳ್ಳೊಟ್ಟೆಯನ್ನು ಕುಲುಕಿಸಿ ನಗುವ ಅವರ ಪರಿಯಿಂದಾಗಿ ತೀವ್ರವಾದ ಚಿತ್ತಕ್ಷೋಭೆಯನ್ನೂ, ವಾಸನೆಯನ್ನೂ ಒಟ್ಟೊಟ್ಟಿಗೆ ಸಹಿಸಲಾಗದೇ ಅವರನ್ನು ಅಲ್ಲೇ ಗುದ್ದಿಗುದ್ದಿ ಮುದ್ದೆ ಮಾಡಬೇಕೆನಿಸುತ್ತಿತ್ತು.

"ವ್ಹಾssssಸ್ದೇವ ಹ್ಹೂಸ್ ಬಿಟ್ಟ, ಊರಿಗೆಲ್ಲ ನಾತ ಕೊಟ್ಟ" ಎನ್ನತ್ತಾ ನಮ್ಮ ಸಹಪಾಠಿ ವಾಸುವನ್ನು ಅಣಕಿಸಿ ಓಡಿದವರ ಗುಂಪಿನಲ್ಲಿ ನಾನು ಇದ್ದೆ. ಆತ ಹೊಡಿತಾನೆಂದು ಬೆದರಿ ಓಡುವ ರಭಸದಲ್ಲಿ ಎಷ್ಟು ಜನ ಹೂಸು ಬಿಡುತ್ತಾ ಓಡಿದ್ದರೋ....? ಆಗಿನ ನಮ್ಮ ಮಂಗಾಟದ ವೇಳೆ ಅವನಿಗೆಷ್ಟು ಹ್ಯುಮಿಲಿಯಶನ್ ಆಗಿರಬೇಡ. ಸಾರಿ ಕಣೋ ವಾಸು. ಕ್ಷಮ್ಸಿ ಬಿಡು. ಹೂಸುವಾಸನೆ ಎಂಬ ಅಕ್ಷರಗಳ ಪುಂಜವನ್ನು 'ಹೂ' ಸುವಾಸನೆ ಹಾಗೂ 'ಹೂಸು' ವಾಸನೆ ಎಂದು ವಿಂಗಡಿಸಿ, ನಮ್ಮದು ಭಾರೀ ಪದ ಸಂಪತ್ತೆಂದು ಬೀಗಿದ್ದೂ ಉಂಟು.

ತುಳುವಿನಲ್ಲೊಂದು ಗಾದೆಯಿದೆ. ಬಾತ್‌ನಾಯೆಗ್ ಪೂತ್‌ನಾತ್ ಆಧಾರೋ. ಅಂದರೆ ಬಾತಿರುವಾತನಿಗೆ ಹೂಸು ಬಿಟ್ಟಷ್ಟೂ ಆರಾಮ ಅಂತ ಅರ್ಥ. ಅದೊಮ್ಮೆ (ಪುರಾತನ ಕಾಲದಲ್ಲಿ) ಯಾರದ್ದೋ ಮನೆಗೆ ನೆಂಟರು ಬಂದಾಗ ಅವರಿಗಾಗಿ ಕೋಳಿ ಸಾರು ರೊಟ್ಟಿಮಾಡಿ ಬಡಿಸಿದರು. ಕೋಳಿ, ರೊಟ್ಟಿ ಸವಿಯುವಾಗ ಕೆಮ್ಮು ಒತ್ತರಿಸಿಕೊಂಡು ಬಂತು. ಶಕ್ತಿಹಾಕಿ ಕೆಮ್ಮುವಾಗ ಒಂದೆರಡೂ ಹೂಸೂ ಹೋಯ್ತು. ಹಾಗಾಗಿ ನೆಂಟರ ಮನೆಯಲ್ಲಿ ಗಮ್ಮತ್ತೇನು ಎಂದು ಪ್ರಶ್ನೆಗೆ, ತುಳುವಿನಲ್ಲಿ "ಕೋರಿಲ ರೊಟ್ಟಿಲ; ತೆಮ್ಮಲ ಪೂಕಿಲ" (ಕೋಳಿ ಮತ್ತು ರೊಟ್ಟಿ, ಕೆಮ್ಮು ಮತ್ತು ....) ಎಂದು ನೀಡಿದ ಉತ್ತರ ಹಾಸ್ಯೋಕ್ತಿಯಾಗಿ ಚಾಲ್ತಿಯಲ್ಲಿದೆ.

ಇನ್ನೊಂದು ಹಳೆಯ ಜೋಕಿದೆ. ಕಚೇರಿಯಲ್ಲಿ ಕುಳಿತಿದ್ದ ಆತನಿಗೆ ಪಾಪ ನಿಯಂತ್ರಿಸಲಾಗದಷ್ಟು ಒತ್ತಿಕೊಂಡು ಬಂದ ವಾಯುವನ್ನು ಶಬ್ದರಹಿತವಾಗಿ ಹೊರಹಾಕಲಾಗಲಿಲ್ಲವಂತೆ. ಹಾಗಾಗಿ 'ಮರ್ಯಾದೆ ಕಾಪಾಡಿಕೊಳ್ಳಲು' ಅದರ ಪುರ್ಕ್ ಪುರ್ಕ್ ಶಬ್ದಕ್ಕೆ ಸರಿ ಎಂಬಂತೆ ಕಾಗದವನ್ನು ಸಶಬ್ದವಾಗಿ ಹರಿದು ಗೆದ್ದೆನೆಂದು ಬೀಗಿದ. ಅಷ್ಟರಲ್ಲಿ ಸಹೋದ್ಯೋಗಿ, ನಿನ್ನ ಐಡಿಯಾವೇನೋ ಚೆನ್ನಾಗಿದೆ, ಆದರೆ ವಾಸನೆ ಮಾತ್ರ ತುಂಬ ಕೆಟ್ಟದಾಗಿದೆ ಎಂದು ಪ್ರತಿಕ್ರಿಯಿಸಿದನಂತೆ!

"ಹೊಟ್ಟೆಯಲ್ಲಿ ಮೇಲ್ಮುಖವಾಗಿ ಚಲಿಸುವ ಗಾಳಿಯನ್ನು ಕೆಳಮುಖವಾಗಿ ತಳ್ಳಲ್ಪಟ್ಟಾಗ ಅದು ಎರಡು ತೆಳುವಾದ ಪದರಗಳ ನಡುವೆ ಹಾದು ಹೋಗುವಾಗ ಉಂಟಾಗುವ ಪುರ್, ಪುಸ್ಕ್, ಫುಯಿಂಕ್, ಟ್ರುರ್ರ್, ಟುರುಕ್, ಢರ್ರ್, ಡುಯಿಂಕ್ ಎಂಬ ಶಬ್ದವನ್ನು ಲೋಕಲ್ ಭಾಷೆಯಲ್ಲಿ 'ಪೂಕಿ' ಎಂದು ಕರೆಯುವರು" ಇದು ಹೂಸೆಸ್ಸೆಮ್ಮೆಸ್ ವ್ಯಾಖ್ಯಾನ. ತುಳುವಿನಲ್ಲಿ ಇದರ ಸಮಾನಾರ್ಥಕ ಶಬ್ದ ಪೂಕಿ. (ಫಾರ್ವರ್ಡಿಗೆ ಥ್ಯಾಂಕ್ಸ್ ಭುವನ್!)

ಇಷ್ಟಕ್ಕೂ, ನಾನೇನೂ ಸಾಚಾ ಅಲ್ಲ. ಆಗೀಗ ಅಚಾತುರ್ಯ ಆಗುವುದಿಲ್ಲ ಎಂದೇನಿಲ್ಲ. ಏಕಾಂತದಲ್ಲಿ ಈ ವಿಚಾರದಲ್ಲಿ ಬಿಂದಾಸ್ ಆಗಿದ್ದರೂ, ಈ ಬಿಂದಾಸ್‌ನಿಂದ ಒಂದೆರಡು ಬಾರಿ ಗೆಳತಿಯರಿಗೆ ಸಿಕ್ಕಿಬಿದ್ದು, ಬಿದ್ದು ಬಿದ್ದು ನಕ್ಕದ್ದೂ ಇದೆ. ಎಷ್ಟೇ ಸಂಸ್ಕಾರವಂತರೂ, ಸಭ್ಯರಾಗಿದ್ದರೂ ಸಹ ಒಮ್ಮೆಯೂ ಅಧೋವಾಯು ಹೊರಡಿಸಿಯೇ ಇಲ್ಲ ಎಂದರೆ ಅದು ಅಪ್ಪಟ ಆತ್ಮವಂಚನೆಯೇ ಸರಿ!

ಮಂಗಳವಾರ, ಮಾರ್ಚ್ 2

ಪುತ್ರನಿಗೆ ಪತ್ರ

(ಇದು ಐರಿಷ್ ತಾಯಿಯೊಬ್ಬಾಕೆ ತನ್ನ ಮಗನಿಗೆ ಬರೆದ ಪತ್ರದ ಪ್ರತಿಯಂತೆ. ನನ್ನ ಗೆಳತಿಗೆ ಬಂದ ಫಾರ್ವರ್ಡನ್ನು ಆಕೆ ನನಗೆ ತುಂಬ ದಿನದ ಹಿಂದೆ ಫಾರ್ವರ್ಡ್ ಮಾಡಿದ್ದಳು. ಅದನ್ನು ಕನ್ನಡೀಕರಿಸಿ ಇಲ್ಲಿರಿಸಿದ್ದೇನೆ. ನೀವೂ ಓದಿ ಎಂಜಾಯ್ ಮಾಡಿ!!)


ಪ್ರೀತಿಯ ಮಗನೇ...

ನಾನಿನ್ನೂ ಬದುಕಿದ್ದೇನೆ ಎಂದು ತಿಳಿಸಲು ಕೆಲವು ಸಾಲುಗಳನ್ನು ಇಲ್ಲಿ ಬರೆಯುತ್ತಿದ್ದೇನೆ. ನಾವೆಲ್ಲರೂ ಇಲ್ಲಿ ಚೆನ್ನಾಗಿದ್ದೇವೆ. ನಾನು ಈ ಪತ್ರವನ್ನು ತುಂಬಾ ನಿಧಾನವಾಗಿ ಬರೆಯುತ್ತಿದ್ದೇನೆ. ಏಕೆಂದರೆ, ನಿನಗೆ ವೇಗವಾಗಿ ಓದಲು ಆಗದು ಎಂಬುದು ನನಗೆ ಚೆನ್ನಾಗಿ ತಿಳಿದಿದೆ.


ನಾವೀಗ ಮನೆ ಬದಲಾಯಿಸಿದ್ದೇವೆ. ನೀನು ಮನೆಗೆ ಬಂದಾಗ ನಮ್ಮ ಹೊಸಮನೆಯನ್ನು ಗುರುತಿಸಲಾರೆ. ‘ನಿಮ್ಮ ಮನೆಯ 20 ಕಿ.ಮೀ ಅಂತರದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ’ ಎಂಬುದನ್ನು ನಿನ್ನ ತಂದೆ ಪತ್ರಿಕೆಯಲ್ಲಿ ಓದಿದ್ದಾರೆ. ಹಾಗಾಗಿ ಇದರಿಂದ ಪಾರಾಗಲು ನಾವು ಮನೆ ಬದಲಾಯಿಸಿದೆವು. ನಾನೀಗ ನಮ್ಮ ಹೊಸ ಮನೆಯ ವಿಳಾಸವನ್ನು ನಿನಗೆ ನೀಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಇಲ್ಲಿ ವಾಸವಾಗಿದ್ದ ಐರಿಷ್ ಕುಟುಂಬವು ಬೇರೆ ನಿವಾಸಕ್ಕೆ ತೆರಳುವಾಗ ಈ ಮನೆಯ ನಂಬ್ರ ಹಾಗೂ ವಿಳಾಸವನ್ನು ತಮ್ಮ ಜತೆಗೇ ಒಯ್ದಿದೆ. ಹಾಗಾಗಿ ಅವರು ತಮ್ಮ ಹೊಸ ವಾಸ್ತವ್ಯದಲ್ಲಿ ತಮ್ಮ ವಿಳಾಸವನ್ನು ಬದಲಿಸುವ ಅಗತ್ಯವಿಲ್ಲವಂತೆ.


ನಮ್ಮ ಈಗಿನ ಹೊಸ ಮನೆ ನಿಜವಾಗಿಯೂ ಚೆನ್ನಾಗಿದೆ. ಇಲ್ಲಿ ನಮಗೆ ವಾಷಿಂಗ್ ಮೆಷಿನ್ ಸಹ ಇದೆ. ಅದು ಚೆನ್ನಾಗಿ ಕೆಲಸಮಾಡುತ್ತದೆಯೇ ಎಂಬುದನ್ನು ನನಗೆ ಹೇಳಲಾಗುತ್ತಿಲ್ಲ. ಕಳೆದ ವಾರ ಒಂದು ಲೋಡ್ ಬಟ್ಟೆ ಹಾಕಿ ಚೈನ್ ಎಳೆದೆ. ಆ ಬಳಿಕ ಅದು ಕಾಣುತ್ತಲೇ ಇಲ್ಲ.


ನಿನ್ನ ತಂದೆಗೆ ಇಲ್ಲೀಗ ಉತ್ತಮವಾದ ಉದ್ಯೋಗ ದೊರೆತಿದೆ. ಹಾಲಿ ಅವರ ಕೆಳಗೆ 500 ಮಂದಿ ಇದ್ದಾರೆ. ಅವರಿಗೆ ಸ್ಮಶಾನದಲ್ಲಿ ಹುಲ್ಲು ಕತ್ತರಿಸುವ ಕೆಲಸ.


ನಿನ್ನ ಸಹೋದರಿ ಮೇರಿ ಇಂದು ಮುಂಜಾನೆ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ಆದರೆ ಅದು ಹೆಣ್ಣೋ ಅಥವಾ ಗಂಡೋ ಎಂಬುದು ನನಗೆ ತಿಳಿದಿಲ್ಲದ ಕಾರಣ ನೀನು ಆಂಟಿಯೋ ಇಲ್ಲ ಅಂಕಲ್ಲೋ ಎಂಬುದಾಗಿ ನನಗೆ ಹೇಳಲಾಗುತ್ತಿಲ್ಲ.


ಕಳೆದವಾರ ನಿನ್ನ ಚಿಕ್ಕಪ್ಪ ಪ್ಯಾಟ್ರಿಕ್ ಡಬ್ಲಿನ್ ಬ್ರಿವರಿಯ ವಿಸ್ಕಿಯ ಕೊಳಗದಲ್ಲಿ ಮುಳುಗಿದ್ದರು. ಅವರ ಕೆಲವು ಸಹೋದ್ಯೋಗಿಗಳು ಅವರನ್ನು ಉಳಿಸಲು ಪ್ರಯತ್ನಿಸಿದರಾದರೂ, ಅವರೊಂದಿಗೆ ದಿಟ್ಟತನದಿಂದ ಹೋರಾಡಿದ ಚಿಕ್ಕಪ್ಪ ವೀರ ಮರಣವನ್ನಪ್ಪಿದ್ದಾರೆ. ಫ್ಯಾಕ್ಟರಿಯವರು ಶವಸಂಸ್ಕಾರ ಮಾಡಿದ್ದು, ಬೆಂಕಿ ನಂದಲು ಮೂರು ದಿವಸ ತಗುಲಿತು.


ನಿನ್ನ ಕಸಿನ್ ಸೀಮಸ್‌ ಬೈಕ್ ಚಲಾಯಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂಬುದು ವಿಷಾದನೀಯ ವಿಚಾರ. ಆತನ ಮೇಲೆ ಮಾದಕ ದ್ರವ್ಯ ಸಾಗಾಟದ ಆಪಾದನೆ ಹೊರಿಸಲಾಗಿದೆ.


ಗುರುವಾರ ನಾನು ವೈದ್ಯರನ್ನು ಕಾಣಲು ಹೋಗಿದ್ದೆ. ನಿನ್ನ ತಂದೆಯೂ ನನ್ನೊಂದಿಗಿದ್ದರು. ವೈದ್ಯರು ನನ್ನ ಬಾಯಿಗೊಂದು ಚಿಕ್ಕ ಟ್ಯೂಬ್ ಹಾಕಿ ಹತ್ತು ನಿಮಿಷ ಮಾತನಾಡಬಾರದೆಂದರು. ಆ ಟ್ಯೂಬ್ ಖರೀದಿಸಲು ನಿನ್ನ ತಂದೆ ಉತ್ಸಾಹ ತೋರಿದರು.


ಇಲ್ಲಿನ ಹವಾಮಾನವು ಕೆಟ್ಟದಾಗೇನೂ ಇಲ್ಲ. ವಾರದಲ್ಲಿ ಬರಿಯ ಎರಡು ಸರ್ತಿಮಾತ್ರ ಮಳೆಯಾಗಿದೆ. ಮೊದಲಿಗೆ ವಾರದ ಮೊದಲಿನ ಮೂರುದಿನ ಮಳೆ ಸುರಿದರೆ, ಬಳಿಕ ನಂತರದ ನಾಲ್ಕುದಿನ ಮಳೆ ಸುರಿಯಿತು. ಸೋಮವಾರ ಇಲ್ಲಿ ಬಲವಾದ ಗಾಳಿ ಬೀಸಿದ್ದು, ಕೋಳಿಯೊಂದು ಒಂದೇ ತತ್ತಿಯನ್ನು ನಾಲ್ಕು ಬಾರಿ ಇಟ್ಟಿತು.


ನೀನು ಕಳುಹಿಸಬೇಕು ಎಂದು ಹೇಳಿದ್ದ ಕೋಟ್ ಕಳುಹಿಸಿದ್ದೇವೆ. ಅಂಚೆಯಲ್ಲಿ ಕಳುಹಿಸುವ ವೇಳೆ ಕೋಟಿನಲ್ಲಿ ಬಟನ್ ಇದ್ದರೆ, ಅದು ತುಂಬ ಭಾರವಾಗುತ್ತದೆ ಎಂಬುದಾಗಿ ನಿನ್ನ ಸ್ಟಾನ್ಲಿ ಅಂಕಲ್ ಹೇಳಿದರು. ಹಾಗಾಗಿ ನಾವು ಬಟನ್‌ಗಳನ್ನು ಕತ್ತರಿಸಿ ಅದರ ಕಿಸೆಯಲ್ಲಿ ಇರಿಸಿದ್ದೇವೆ.


ನಿನ್ನೆ ಜಾನ್ ಕಾರಿನ ಕೀಯನ್ನು ಕಾರಿನೊಳಗೇ ಬಿಟ್ಟಿದ್ದ. ಇದರಿಂದಾಗಿ ನಾನು ಮತ್ತು ನಿನ್ನ ತಂದೆ ಕಾರಿನೊಳಗೇ ಬಂಧಿಯಾದೆವು. ಆತನಿಗೆ ಕಾರಿನ ಬಾಗಿಲು ತೆರೆದು ನಮ್ಮನ್ನು ಹೊರತರಲು ಸುಮಾರು ಎರಡು ಗಂಟೆ ತಗುಲಿತು. ಇದು ನಮಗೆ ನಿಜವಾಗಿಯೂ ಆತಂಕ ಉಂಟುಮಾಡಿತ್ತು.


ಟ್ರಕ್ಕಿನಲ್ಲಿ ಸಾಗುತ್ತಿದ್ದ ನಿನ್ನ ಮೂವರು ಸ್ನೇಹಿತರು ನಿನ್ನೆ ಸೇತುವೆಯಿಂದ ಕೆಳಕ್ಕುರುಳಿದ್ದಾರೆ. ರಾಲ್ಫ್ ಗಾಡಿ ಚಲಾಯಿಸುತ್ತಿದ್ದ. ಆತ ಕಿಟಿಕಿ ಮೂಲಕ ಹೊರಬಂದು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾನೆ. ಇನ್ನಿಬ್ಬರು ಸ್ನೇಹಿತರು ಹಿಂದೆ ಕುಳಿತಿದ್ದರು. ಅವರಿಬ್ಬರಿಗೆ ಕಿಟಿಕಿ ಪತ್ತೆ ಮಾಡಲು ಸಾಧ್ಯವಾಗದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲು ನನಗೆ ದುಃಖವಾಗುತ್ತಿದೆ.


ಇನ್ನು ಹೆಚ್ಚೇನು ವೀಶೇಷವಿಲ್ಲ. ಈ ಸರ್ತಿ ಇಲ್ಲಿ ಹೆಚ್ಚೇನೂ ಸಂಭವಿಸಿಲ್ಲದ ಕಾರಣ ತುಂಬ ಬರೆಯಲು ಏನಿಲ್ಲ.


ಇತೀ ಆಶೀರ್ವಾದಗಳೊಂದಿಗೆ,

ನಿನ್ನ ಪ್ರೀತಿಯ ತಾಯಿ.


ವಿ.ಸೂ: ನಾನು ನಿನಗೆ ಸ್ವಲ್ಪ ಹಣವನ್ನು ಕಳುಹಿಸಬೇಕೆಂದಿದ್ದೆ. ಆದರೆ ನಾನು ಇದೀಗಾಗಲೇ ಲಕೋಟೆಯನ್ನು ಮುಚ್ಚಿಬಿಟ್ಟಿದ್ದೇನೆ, ಕ್ಷಮಿಸು.

ಮಂಗಳವಾರ, ಫೆಬ್ರವರಿ 9

ಟೆನ್ಷನ್ ಗಂಡನ ರಸ್ತೆ ಸುರಕ್ಷೆ!

ತುಂಬ ದಿನವಾಯ್ತು ಬ್ಲಾಗಿಸಿ. ಹಂದಿ ಜ್ವರದ ಬಗ್ಗೆ ಬರೆದ ಮೇಲೆ ಮತ್ತೇನು ಬರ್ದಿಲ್ಲ. ಇವ್ಳು ಹಂದಿ ಜ್ವರ ಹಿಡಿದು ಹೋಗೇ ಬಿಟ್ಲಾ ಅಂತ ತಿಳ್ಕೊಂಡ್ರೇನೋ. ಕೆಮ್ಮು-ದಮ್ಮು- ಜ್ವರ ಸೇರಿದಂತೆ ಎಚ್1ಎನ್1ನ ಎಲ್ಲಾ ಲಕ್ಷಣಗಳು ಕಾಡಿದ್ದರೂ ದುರಾದೃಷ್ಟವಶಾತ್ ಹಾಗಾಗಲಿಲ್ಲ. ಬದಲಿಗೆ ನಂಗೆ ಮದ್ವೆ ಆಯ್ತು!

ನಾನು ಪರರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಕಚೇರಿಗೆ ರಾಜೀನಾಮೆ ನೀಡಿ, ಪ್ರೀತಿಯ ಸಹೋದ್ಯೋಗಿಗಳು "ಪಾಪ, ಮದ್ವೆ ಆಗ್ತಿದ್ದಾರೆ" ಎನ್ನುತ್ತಾ ಬೀಳ್ಕೊಟ್ಟ ಬಳಿಕ, ಸ್ನೇಹಿತೆ ಶಾಂಭವಿ ತೋರಿಸಿದ ವರನನ್ನು ಆರ್ಯಸಮಾಜದಲ್ಲಿ ಗುರುಹಿರಿಯರಾದಿ, ಕೈಬೆರಳೆಣಿಕೆಯ ಸ್ನೇಹಿತರು - ಬಂಧುಗಳ ಸಮಕ್ಷಮದಲ್ಲಿ ಅಗ್ನಿಸಾಕ್ಷಿಯಾಗಿ ವರಿಸಿ, ಸಂಸಾರ ಸಾಗರಕ್ಕೆ ಧುಮುಕಿದೆ (ಅಥವಾ ಉಳಿದವರು ತಳ್ಳಿ ಬಿಟ್ಟರು).

ಅಗತ್ಯಕ್ಕಿಂತ ಹೆಚ್ಚು ಸಜ್ಜನ ನನಗಂಡ. ಜತೆಗೆ ಒಂದಿಷ್ಟು ಮೊಂಡ. ಸತ್ಯ, ನಿಷ್ಠೆ, ಪ್ರಾಮಾಣಿಕತೆ ಎಂಬ ಭಜನೆ ಮಾಡುತ್ತಾ, ಎಲ್ಲರಿಂದಲೂ ಅದನ್ನೇ ಬಯಸುವ ಈಡಿಯೆಟ್(Idiot in capital letters ಎಂಬುದು ಅವರ ಡಯಲಾಗ್. ಆದರೆ ನಾನು ಒಂದಿಷ್ಟು ಕರುಣೆಯೊಂದಿಗೆ sweet idiot ಅಂತೇನೆ). ಕಪಾಟುಗಟ್ಟಲೆ ಪುಸ್ತಕಗಳನ್ನು(ಆಂಗ್ಲ ಸಾಹಿತ್ಯ) ಓದಿ ಅದುವೇ ಜೀವನ ಎಂಬ ಭ್ರಾಮಕ ಲೋಕದಲ್ಲಿ ತೇಲುತ್ತಿರುವ ಈ ನನ್ನ ಗಂಡನನ್ನು ವಾಸ್ತವ ಲೋಕಕ್ಕೆ ತರುವುದು ಹೇಗಪ್ಪಾ ಎಂಬ ಚಿಂತೆಯಿಂದಲೇ ಸಪ್ತಪದಿ ತುಳಿದಿದ್ದೆ.
ಮದುವೆಯಾಗಿ ಹದಿನೈದು ದಿನವಾಗುತ್ತಲೇ ನವದಂಪತಿಗಳೆಂಬ ಹಂತ ದಾಟಿ, ನುರಿತ ಗಂಡಹೆಂಡಿರಂತೆ ಜಗಳವಾಡುವ ಹಂತಕ್ಕೆ ತಲುಪಿದ್ದೆವು. ಈಗ ಸುಮಾರು ಒಂದೂವರೆ ತಿಂಗಳಾಯಿತು ಬಿಡಿ. ಪ್ರೀತಿಯಷ್ಟೆ ಸರಾಗವಾಗಿ ಕೋಪವನ್ನು ತೋರಿಸಿಕೊಳ್ಳುವ ಮಟ್ಟಕ್ಕೆ ಬಂದಿದ್ದೇವೆ.

ನಮ್ಮೊಳಗೆ ಜಗಳ ಹುಟ್ಟಲು ಮುಖ್ಯ ಕಾರಣ ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದು, ದೇಶದಲ್ಲಿನ ಭ್ರಷ್ಟಾಚಾರ, ಸಮಾಜದಲ್ಲಿನ ಅನೀತಿ, ಜನರ ನಿಷ್ಕಾಳಜಿ ಇತ್ಯಾದಿ! ಅದೊಂದು ದಿನ ಬೆಳ್ಳಂಬೆಳಗ್ಗೆ ಎದ್ದು, ದಿನಪತ್ರಿಕೆ ಕೈಲಿ ಹಿಡಿದು ಸರ್ವಚಿಂತೆಯನ್ನು ಮುಖದ ಮೇಲಿಟ್ಟು ಕುಳಿತಿದ್ದರು. ಏನಾಯ್ತು ಅಂದೆ. ಇನ್ನು ಐವತ್ತು ವರ್ಷ ಕಳೆದರೆ ಭಾರತ ಇರುವುದಿಲ್ಲ ಅಂದರು. ಹೊಸದಾಗಿ ಮದುವೆಯಾದವರು ನಾವು. ಅದರಲ್ಲೂ ನಮ್ಮದು ವಿಪರೀತ ಲೇಟ್ ಮದುವೆ. ಹೀಗಿರುವಾಗ ಈ ಮನುಷ್ಯ, ನಮ್ಮ ಉಳಿದ ಆಯುಷ್ಯದ ಬಗ್ಗೆ ಚಿಂತಿಸುವುದು ಬಿಟ್ಟು ಇದೇನಿದು, ಎಂಬುದಾಗಿ ಪಿಚ್ಚೆನಿಸಿದ ನಾನು, "ಭಾರತವನ್ನು ನಿಮ್ಮ ತಲೆ ಮೇಲೆ ಹೊತ್ತುಕೊಂಡಿದ್ದೀರಾ? ಇನ್ನು 50 ವರ್ಷದಲ್ಲಿ ನಾವೂ ಇರಲಾರೆವು, ಅದರೊಳಗೆ ಇರುವ ಅಲ್ಪ ಕಾಲವನ್ನು ನೆಮ್ಮದಿಯಿಂದ ಬದುಕುವ ಬಗ್ಗೆ ಚಿಂತಿಸಿ" ಎಂದೆ. ಇದರಿಂದ ಕಿರಿಕಿರಿಗೊಂಡಿದ್ದು ಅವರ ಬಿಳಿಯ ಮುಖ ಕೆಂಪುಬಣ್ಣಕ್ಕೆ ತಿರುಗಿದ್ದರಿಂದಲೇ ತಿಳಿಯುತ್ತಿತ್ತು. ಬಳಿಕ "ಮೈ ವೈಫ್ ಈಸ್ ಆಲ್ಸೋ ನಾಟ್ ಸಫೋರ್ಟಿಂಗ್ ಮೀ" ಅಂತ ಅವರ ಗೆಳೆಯರಿಗೆ ದೂರವಾಣಿ ಮೂಲಕ ದೂರುತ್ತಿದ್ದರು. ನಾವು ಚಿಂತೆ ಮಾಡದಿದ್ದರೆ ಇನ್ಯಾರು ಎಂಬುದು ಅವರ ಕಳಕಳಿ.

ಒತ್ತಡ ಮತ್ತು ಆತಂಕ (Stress and anxiety) ಸಮಸ್ಯೆಯಿಂದ ಬಳಲುತ್ತಿರುವ ನನ್ನ ಪತಿರಾಯ ಯಾರೋ ಮಾಡುವ ತಪ್ಪಿಗಾಗಿ ಆತಂಕ ಪಡುವುದು ನನ್ನನ್ನು ಆತಂಕಕ್ಕೀಡು ಮಾಡುತ್ತದೆ. ಅವರ ಕಾಳಜಿ ಟೂ ಹಂಡ್ರೆಡ್ ಪರ್ಸೆಂಟ್ ಸರಿ. ಇದರಲ್ಲಿ ದೂಸ್ರಾ ಮಾತಿಲ್ಲ. ಆದರೆ, ಸುಧಾರಣಾವಾದಿಯಂತೆ ವರ್ತಿಸುವ ಇವರ ದೊಡ್ಡ ಧ್ವನಿಯ ಆಕ್ಷೇಪದಿಂದ ಕೆರಳಿದವರು ಬಂದು ನಾಲ್ಕು ತದುಕಿದರೆ ಧರ್ಮಕ್ಕೆ ತಿನ್ನಬೇಕಲ್ಲವೇ ಎಂಬುದು ನನ್ನ ಚಿಂತೆ. ಜೀವನದ ವಿವಿಧ ಮಜಲುಗಳಲ್ಲಿ ಅನ್ಯಾಯದ ವಿರುದ್ಧ ಹೋರಾಡಿ ಅನ್ಯಾಯ ಮಾಡಿಸಿಕೊಂಡು, ಹೊಡೆತದ ಮೇಲೆ ಹೊಡೆತ ತಿಂದ ಅನುಭವದ ಬಳಿಕ ವಾಸ್ತವವಾದಿಯಾಗಿರುವವಳು ನಾನು. ಇಂತಹ ನನಗೆ, 'ನಮಗ್ಯಾಕೆ ಇದೆಲ್ಲ; ಬಡವಾ ನೀ ಮಡಗಿದಂತಿರು ಎಂಬಂತೆ ಇರುವಾ' ಎಂಬ ಧೋರಣೆ. ನಿಮಗೆ ಗೊತ್ತಿದ್ದಂತೆ ರಸ್ತೆ ನಿಯಮಗಳನ್ನು ಮುರಿಯುವುದು, ರಾಂಗ್ ಸೈಡಿನಲ್ಲಿ ಬರುವುದು, ಕಿವಿಹರಿದು ಹೋಗುವಂತೆ ಹಾರ್ನ್ ಮಾಡುವುದು ಹೆಚ್ಚಾಗಿ ಬಿಸಿ ರಕ್ತದ ಯುವಕರು. ಯಾರ ಹಿನ್ನೆಲೆ ಹೇಗುಂಟು ಯಾರಿಗೆ ಗೊತ್ತು? ಷರ್ಟಿನೊಳಗಿಂದ ಚೂರಿಯೋ ಪಿಸ್ತೂಲೋ ತೆಗೆದು 'ಡಿಮ್ಮ' ಮಾಡಿ 'ಮುಗಿಸುವ' ಕಾಲವಿದು. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪರಸ್ಪರ ಸ್ಫರ್ಧೆಗೊಡ್ಡಿಕೊಳ್ಳುವ ಬಸ್ಸುಗಳವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಾ ಚೂರಿಹಾಕಿ ಕೊಂದ ಉದಾಹರಣೆಯೂ ಇರುವ ಊರು ನಮ್ಮದು. ಹೀಗಾಗಿ, “ನಿಮಗೇಕೆ ಊರ ಉಸಾಬರಿ? ನೀವು ನಿಮ್ಮಪಾಡಿಗೆ ಇರುವುದನ್ನು ಕಲಿಯಿರಿ” ಎಂಬುದು ನನ್ನ ವಾದ.

ಈ ಮಧ್ಯೆ ಅವರ ಸುರಕ್ಷತಾ ಕ್ರಮಗಳ ಬಗ್ಗೆ ಒಂದಿಷ್ಟು ಹೇಳಿ ಬಿಡುತ್ತೇನೆ. ನಾನು ಮತ್ತು ಶಾಂಭವಿ ಗಾಡಿಯಲ್ಲಿ ಹೋಗುವಾಗೆಲ್ಲ, ಒಂದು ಹತ್ತು ಮೀಟರ್ ದೂರ ಸಾಗುವುದಿದ್ದರೆ, ಮೆಲ್ಲ ರಸ್ತೆಬದಿಯಲ್ಲಿ ರಾಂಗ್ ಸೈಡಿನಲ್ಲಿ ಹೋಗುತ್ತೇವೆ. ಟ್ರಾಫಿಕ್ ಪೊಲೀಸ್ ಸಿಕ್ಕರೆ ಒಂದು ಕಿರುನಗೆ ಬೀರಿ ಮುಂದೆ ಸಾಗುತ್ತಿದ್ದೆವು. ಆದರೆ ಈ ನನ್ನ ಗಂಡ ಮಹಾಶಯ ಮಾತ್ರ ಅದು ಒಂದೇ ಮೀಟರ್ ದೂರವಾಗಿದ್ದರೂ ಸಹ, ಇನ್ನೊಂದು ಸೈಡಿಗೆ ಕಟ್ ಮಾಡಲು ಒಂದು ಫರ್ಲಾಂಗ್ ದೂರ ಹೋಗಿ ರಿಸ್ತೆ ವಿಭಜಕದ ಅಂತ್ಯದಲ್ಲೇ ಗಾಡಿ ತಿರುಗಿಸಿ ಮರಳಿ ಬರುತ್ತಾರೆ. ಅರ್ಧ ಲೀಟರ್ ಪೆಟ್ರೋಲ್ ಮುಗಿಯುತ್ತದೆ ಎಂಬುದು ನನ್ನ ಹಳಹಳಿ. "ನಾನು ಹೀಗೇ ಬದುಕಿದ್ದು, ಇನ್ನೂ ಹೀಗೆ ಬದುಕುವುದು" ಎಂಬುದು ಅವರ ಸಮಜಾಯಿಷಿ.

ಎಡಬದಿಯಲ್ಲೇ ಸಾಗುವ, ಕೆಲವೊಮ್ಮೆ ಪಾದಚಾರಿಗಳನ್ನು ಸವರಿಯೇ ಬಿಡುತ್ತಾರೆ ಎಂಬ ಭಯ ಹುಟ್ಟಿಸುವಂತೆ ಹೋಗುತ್ತಾ, ಏನೇ ಆದರೂ ಯಾರನ್ನೂ ಓವರ್‌ಟೇಕ್ ಮಾಡಲಾರೆ ಎಂಬ ಶಪಥಕ್ಕೆ ಬಿದ್ದವರಂತೆ, ಸಿಟಿಬಸ್ಸುಗಳ, ರಿಕ್ಷಾಗಳ ಹಿಂದೆಯೇ ಹೋಗುತ್ತಾ ಅಸಹನೆ ಹುಟ್ಟಿಸುತ್ತಾರೆ. ಅಡ್ಡ ರಸ್ತೆಗಳಿಂದ ಬಂದು ಸೇರುವವರಿಗೂ ಗಾಡಿನಿಲ್ಲಿಸಿ ಮುಂದೆ ಹೋಗಿ ಅನ್ನುತ್ತಾ ಬ್ಯಾಲೆನ್ಸ್ ಮಾಡಲು ಸರ್ಕಸ್ ಮಾಡುತ್ತಾರೆ. ಹಿಂದಿನವರು ಹಾರ್ನ್ ಹಾಕಿದರೆ ಅದಕ್ಕೂ ಕಿರಿಕಿರಿ. ಅದೊಂದು ಸರ್ತಿ ನಗರ ಪಾಲಿಕೆಯವರು ರಸ್ತೆ ಅಗೆದಿದ್ದರು. ರಸ್ತೆ ಬ್ಲಾಕ್ ಆಗಿದ್ದ ಕಾರಣ ತಿರುಗಿ ಬರುವ ವೇಳೆಗೆ ಬದಿಯಲ್ಲಿದ್ದ ಬೋರ್ಡ್ ಗಮನಕ್ಕೆ ಬಂದಿತ್ತು. ತಪ್ಪು ಬೋರ್ಡ್ ಹಾಕಿ ದಿಕ್ಕು ತಪ್ಪಿಸಿದ್ದ ಆವರಿಗೆ ಬಯ್ಯುವ ರಭಸದಲ್ಲಿದ್ದಾಗ ರಣಗಾತ್ರದ ಬಸ್ಸೊಂದನ್ನು ಕಂಡು ಬೆದರಿ ಗಾಡಿ ನಿಲ್ಲಿಸಿ ಸೈಡ್ ಕೊಡಲು ಅನುವಾದರು. ಆದರೆ ಬಸ್ಸು ಚಲಿಸುತ್ತಲೇ ಇರಲಿಲ್ಲ. ಯಾಕೆಂದು ನೋಡಿದರೆ, ಅದು ನಿಂತಿದ್ದ ಬಸ್ಸು! ಮತ್ತೊಂದು ಸರ್ತಿ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಅವರ ಅಂಗಳದಲ್ಲಿ, ಗಾಡಿ ನಿಲ್ಲಿಸಿದ ಬಳಿಕ ಮಲಗಿದ್ದ ನಾಯಿಗೆ ಹಾರ್ನ್ ಹಾಕುತ್ತಿದ್ದರು. ಯಾಕೆ ಹಾರ್ನ್ ಮಾಡುತ್ತೀರಾ ಅಂದರೆ, ಯೂರೋಪಿನ ತುಂಡಿನಂತೆ ಮಾತನಾಡುವ ಅವರು 'ಡಾಗ್ ಡಾಗ್' ಅನ್ನುತ್ತಾ ಮುಖ ನೋಡುತ್ತಾರೆ. ನಗಬೇಕೋ ಅಳಬೇಕೋ?

ಬುಧವಾರ, ಆಗಸ್ಟ್ 12

ಹಂದಿಜ್ವರದಿಂದ ದೂರ ಇರಲು ಹೀಗೆ ಮಾಡಿ

ಇದೇನಿದು ಹಂದಿಜ್ವರಕ್ಕೆ ಬಲಿಯಾಗುವವರ ಸಂಖ್ಯೆ ಕ್ರಿಕೆಟ್ ಸ್ಕೋರ್ ತರಹ ಪ್ರಕಟವಾಗುತ್ತಿದೆ ಅಂತ ಸಹೋದ್ಯೋಗಿಗಳು ಕಳವಳ ವ್ಯಕ್ತಪಡಿಸಿದ್ದರು ಬೆಳಿಗ್ಗೆ. ಇದು ನಿಜ ಕೂಡ. ಇನ್ನು ಕೆಲವು ದಿನ ಕಳೆದರೆ ಮಾಧ್ಯಮಗಳಲ್ಲಿ 'ಹಂದಿಜ್ವರ: ಇಂದಿನ ಸ್ಕೋರ್' ಎಂಬ ಸುದ್ದಿಗಳು ಪ್ರಕಟವಾದಾವು ಅಂತ ಮತ್ತೊಬ್ಬರು ಸೇರಿಸಿದರು. ಮತ್ತೊಬ್ಬರ ಪ್ರಕಾರ ಇದು ಚುನಾವಣಾ ಫಲಿತಾಂಶದ ಸಂಖ್ಯೆಗಳಂತೆ ಘೋಷಣೆಯಾಗುತ್ತಿದೆ. ಅದೇನೆ ಇರಲಿ ಈ ಮಾರಣಾಂತಿಕ ರೋಗ ಆತಂಕಕಾರಿ ಮಾತ್ರ ನಿಜ.

ಈ ಸಂದೇಶವನ್ನು ನೀವು ಕಾಳಜಿವಹಿಸುವ ಎಲ್ಲರಿಗೂ ಕಳುಹಿಸಿ ಎಂಬ ಪೀಠಿಕೆಯೊಂದಿಗೆ ಇದ್ದ ಈ ಸಂದೇಶ ಗೆಳತಿ ಲಲಿತಳ ಮೊಬೈಲಿನಿಂದ ನಿನ್ನೆ ಮಧ್ಯರಾತ್ರಿ ನನ್ನ ಮೊಬೈಲಿಗೆ ಬಂದಿಳಿದಿತ್ತು. ನನ್ನ ಕಾಳಜಿಯ ಪಟ್ಟಿ ದೊಡ್ಡದೇ ಇದೆ. ಇದರಲ್ಲಿ ನೀವೂ ಸೇರಿರುವ ಕಾರಣ ಮತ್ತು ನಿಮ್ಮ ನಂಬರ್ ನನ್ನ ಬಳಿ ಇಲ್ಲದ ಕಾರಣ ಇದನ್ನು ಇಲ್ಲಿ ಹಂಚಿಕೊಳ್ಳೋಣ ಎಂದೆನಿಸಿತು. ಇದು ನಿಮಗೂ ಬಂದಿರಬಹುದು. ಆದರೂ ಒಮ್ಮೆ ಕಣ್ಣು ಹಾಯಿಸಿಬಿಡಿ.

ಗೃಹಬಳಕೆಯ ವಸ್ತುಗಳಿಂದ ಹಂದಿಜ್ವರ ಅಲಿಯಾಸ್ ಸ್ವೈನ್ ಫ್ಲೂ ಅಲಿಯಾಸ್ ಎಚ್1ಎನ್1 ಇನ್‌ಫ್ಲೂಯೆಂಜಾ ಎಂಬ ಮಹಾಮಾರಿ ಹತ್ತಿರ ಸೋಂಕದಂತೆ ದೂರವಿರಿಸಬಹುದು.

* ನಿಮ್ಮ ಕರವಸ್ತ್ರದಲ್ಲಿ ಒಂದು ಹನಿ ನೀಲಗಿರಿ ತೈಲವನ್ನು ಚಿಮುಕಿಸಿಕೊಳ್ಳಿ.
* ಒಂದು ಸೆಕೆಂಡುಗಳ ಕಾಲ ಲವಂಗದ ತೈಲವನ್ನು ಇನ್‌ಹೆಲ್ ಮಾಡಿ.
* ಲವಂಗವನ್ನು ಬಾಯಲ್ಲಿರಿಸಿಕೊಂಡು ನಿಧಾನಕ್ಕೆ ಅದರ ರಸವನ್ನು ನುಂಗಿ (ದಿನಕ್ಕೊಂದು)
* ಒಂದರಿಂದ ಐದು ಗ್ರಾಂಗಳಷ್ಟು ಹಸಿ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಶುಂಠಿಯನ್ನು ತಿನ್ನಿ
* ಬಿಸಿ ಹಾಲಿನಲ್ಲಿ ಎರಡು ಗ್ರಾಂ ಅರಸಿನಪುಡಿ ಸೇರಿಸಿ ಕುಡಿಯಿರಿ
* ವಿಟಮಿನ್ ಸಿ ಇರುವ ಹಣ್ಣು-ತರಕಾರಿಗಳನ್ನು ಹೇರಳವಾಗಿ ಸೇವಿಸಿ
* ಪ್ರತಿನಿತ್ಯ ತುಳಸಿ ಎಲೆಗಳನ್ನು ಜಗಿದು ತಿನ್ನಿ

ಇದರಿಂದ ಹಂದಿಜ್ವರ ಮಾತ್ರವಲ್ಲ, ಎಲ್ಲಾ ರೀತಿಯ ರೋಗದಿಂದಲೂ ದೂರ ಇರಬಹುದು.

ಈ ರೋಗ ಯಾರಿಗೂ ಸೋಂಕದಿರಲಿ ಮತ್ತು ಸೋಂಕು ತಗುಲಿದವರು ಬೇಗ ಗುಣಮುಖವಾಲಿ ಎಂದು ಹಾರೈಸುತ್ತಾ, ಈ ರೋಗದ ಲಕ್ಷಣ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು 'ವೆಬ್‌ ದುನಿಯಾ' ಕನ್ನಡದಲ್ಲಿ ಪ್ರಕಟವಾದ ಬರಹವನ್ನು ಇಲ್ಲಿ ಎತ್ತಾಕಿದ್ದೇನೆ. ಯಾರಿಗಾದರೂ ಅನುಕೂಲವಾದರೂ ಆಗಬಹುದು.

ಈ ರೋಗದ ಲಕ್ಷಣಗಳೇನು? ಇಲ್ಲಿ ನೋಡೋಣ
ಸ್ವೈನ್ ಫ್ಲೂ ಒಂದು ವೈರಲ್ ಸೋಂಕು ಆಗಿದ್ದು ಅದರ ಸಾಮಾನ್ಯವಾದ ಲಕ್ಷಣಗಳೆಂದರೆ, ಕಟ್ಟಿದ ಮೂಗು ಅಥವಾ ನೆಗಡಿ, ವಾಕರಿಕೆ, ಚಳಿ, ಕೆಮ್ಮು, ಗಂಟಲು ಬಿಗಿತ, ಗಂಟಲು ಕೆರೆತ, ಗಂಟಲೂತ, ಮೈಕೈನೋವು, ನಿಶ್ಶಕ್ತಿ ಮತ್ತು ಸುಸ್ತು.

ಇದಲ್ಲದೆ, ಉಸಿರಾಟದ ತೊಂದರೆ ಹಾಗೂ ಭೇದಿಯೂ ಕಾಣಿಸಿಕೊಳ್ಳಬಹುದು.

ಕೆಮ್ಮು, ಸೀನು ಅಥವಾ ಸೋಂಕುಪೀಡಿತ ಸ್ಥಳ ಅಥವಾ ವಸ್ತುಗಳನ್ನು ಮುಟ್ಟಿದ ಬಳಿಕ ನಿಮ್ಮ ಬಾಯಿ ಅಥವಾ ಮೂಗನ್ನು ಮುಟ್ಟುವ ಮೂಲಕ ಸೋಂಕು ಹಬ್ಬುತ್ತದೆ.

ನೀವು ಸೋಂಕು ಪೀಡಿತ ರಾಷ್ಟ್ರಕ್ಕೆ ಭೇಟಿ ನೀಡಿದರೆ ಅಥವಾ ಸೋಂಕು ಪೀಡಿತ ವ್ಯಕ್ತಿಯನ್ನು ಭೇಟಿಯಾದರೆ, ನಿಕಟ ಸಂಪರ್ಕಕ್ಕೆ ಬಂದರೆ ಎಚ್1ಎನ್1 ತಪಾಸಣೆ ಮಾಡಿಸಿಕೊಳ್ಳಿ.

ದೀರ್ಘಕಾಲ ವೈರಲ್ ಸೋಂಕಿನಿಂದ ಬಳಲುತ್ತಿದ್ದರೂ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ನಿರ್ಲಕ್ಷಿಸಬೇಡಿ.

ಮುಂಜಾಗೃತಾ ಕ್ರಮಗಳೇನು?
ಶಾಲಾ ಕಾಲೇಜುಗಳಿಗೆ ತೆರಳುವವರು ಹಾಗೂ ಕೆಲಸಕ್ಕಾಗಿ ಮನೆಯಿಂದ ತೆರಳುವವರಿಗೆ ಅಪಾಯ ಹೆಚ್ಚು. ಹವಾನಿಯಂತ್ರಿತ ಕೊಠಡಿಗಳು ಹಾಗೂ ಮುಚ್ಚಿದ ವಾತಾವರಣದಲ್ಲಿ ಇರುವವರಿಗೂ ತಕ್ಷಣವೇ ರೋಗ ತಗಲುವ ಅಪಾಯ ಹೆಚ್ಚು.

ಬಳಸಿ ಎಸೆಯುವ(ಡಿಸ್ಪೋಸೇಬಲ್) ಟಿಶ್ಯೂಗಳನ್ನೇ ಬಳಸಿ. ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿ ಹಾಗೂ ಮೂಗನ್ನು ಯಾವಾಗಲೂ ಮುಚ್ಚಿಕೊಳ್ಳಿ. ಎಂಜಲು, ಕಫ ಉಗುಳುವ ವೇಳೆ ಬಳಸಿದ ಟಿಶ್ಯೂ ಎಸೆಯುವ ವೇಳೆ ಅತಿ ಜಾಗರೂಕತೆ ವಹಿಸಿ.

ಟೇಬಲ್ ಟಾಪ್‌ಗಳು, ಟೆಲಿಫೋನ್‌ಗಳು ಹಾಗೂ ಕಂಪ್ಯೂಟರ್‌ಗಳಲ್ಲಿ ಯಾವಾಗಲೂ ಕೆಲವು ವೈರಸ್‌ಗಳಿರುತ್ತವೆ. ಹಾಗಾಗಿ ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇಪದೇ ಮುಟ್ಟಿಕೊಳ್ಳಬೇಡಿ.

ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು ಸೋಂಕು ತಡೆಗೆ ಪರಿಣಾಮಕಾರಿ ಮಾರ್ಗ. ಆಲ್ಕೋಹಾಲ್ ಆಧಾರಿತ ಜೆಲ್ ಅಥವಾ ನೊರೆಬೀರುವ ಸ್ಯಾನಿಟೈಸರ್‌ಗಳ ಬಳಕೆ ಈ ವೈರಸ್‌ಗಳನ್ನು ಕೊಲ್ಲಲು ಪರಿಣಾಮಕಾರಿಯಾಗಿದೆ.

ಆಹಾರಪದಾರ್ಥಗಳು
ಈ ರೋಗಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣವಿಲ್ಲ. ಯಾಕೆಂದರೆ, ಇದು ಆಹಾರ ಸಂಬಂಧೀ ಕಾಯಿಲೆಯಲ್ಲ. ಸೋಂಕು ಪೀಡಿತ ರೋಗಿಗಳು ಕೆಮ್ಮುವ, ಸೀನುವವೇಳೆ ಹರಡುವ ಗಾಳಿಯಲ್ಲಿ ಹಬ್ಬಬಹುದು. ಅಥವಾ ಕೈಗಳಲ್ಲಿರುವ ರೋಗಾಣುಗಳು ಅಥವಾ ಮೇಲ್ಮೈ ಮೂಲಕ ಹಬ್ಬಬಹುದು.
ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತವಾದ ಮಾಸ್ಕ್ ಧರಿಸುವುದೂ ಸಹ ಉತ್ತಮವೇ ಆದರೂ, ಮಾಸ್ಕೊಂದೇ ನಿಮ್ಮನ್ನು ರೋಗದಿಂದ ತಡೆಯದು.

ಸಾಕಷ್ಟು ನೀರು ಸೇವಿಸಿ ಹಾಗೂ ಸಾಕಷ್ಟು ನಿದ್ದೆ ಮಾಡಿ. ನಿದ್ದೆಗೆಡುವುದು ಅನಾರೋಗ್ಯಕರ ಅಭ್ಯಾಸ ಹಾಗೂ ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು.

ರೋಗಪೀಡಿತರ ನಿಕಟ ಸಂಪರ್ಕದಿಂದ ದೂರವಿರಿ. ಶ್ವಾಸಕೋಶದ ಸೋಂಕಿನಿಂದ ಬಳುಲುತ್ತಿರುವವರಿಂದ ಕನಿಷ್ಠ ಮೂರು ಅಡಿಗಳ ದೂರದಲ್ಲಿ ನಿಲ್ಲಿ.

ಮನೆಯೊಳಗೆ ಸೂರ್ಯನ ಕಿರಣಗಳು ಬೀಳುವಂತೆ ಕಿಟಿಕಿ ಬಾಗಿಲುಗಳು ತೆರೆದಿರಲಿ. ಅಡುಗೆ ಮನೆ ಹಾಗೂ ವಿಶ್ರಾಂತಿ ಕೊಠಡಿಗಳು ಸ್ವಚ್ಛವಾಗಿರಲಿ.

ಒಂದು ವೇಳೆ ಇದಾಗಲೇ ಸೋಂಕು ತಗುಲಿದ್ದರೆ,
ಕಾಯಿಲೆ ಸಂಪೂರ್ಣ ಗುಣವಾಗುವ ತನಕ ನೀವು ಕೊಠಡಿಯೊಳಗೆಯೇ ಇರಿ. ಮಾಸ್ಕ್ ಧರಿಸುವುದು ಕಡ್ಡಾಯ.

ಸಾಮಾಜಿಕ ಸಮಾರಂಭಗಳು, ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಿಗೆ ಹೋಗದಿರಿ. ಇದರಿಂದ ಸೋಂಕು ಹಬ್ಬುವುದನ್ನು ತಪ್ಪಿಸಬಹುದಾಗಿದೆ,

ಹಂದಿಜ್ವರವು ಮೊದಲ ಐದು ದಿನಗಳ ಕಾಲ ಅತಿಹೆಚ್ಚು ಸಾಂಕ್ರಾಮಿಕವಾಗಿರುತ್ತದೆ. ಮಕ್ಕಳಾಗಿದ್ದಲ್ಲಿ ಹತ್ತು ದಿನಗಳ ಕಾಲ ರೋಗವು ಸಾಂಕ್ರಾಮಿಕವಾಗಿರುತ್ತದೆ.

ಹೆಲ್ಪ್‌ಲೈನ್‌ ಫೋನ್ ನಂಬರ್‌ಗಳು
ಆಲ್ ಇಂಡಿಯಾ ಉಚಿತ ಎಚ್1ಎನ್1 ಹೆಲ್ಪ್‌ಲೈನ್: 1075 ಅಥವಾ 1800-11-4377
ಬೆಂಗಳೂರು: ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ - 91-80-26632634
ದೆಹಲಿ: ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ: 011-24525211, 23404328, 23365525
ದೀನ್ ದಯಾಳ್ ಆಸ್ಪತ್ರೆ: 011-25125259
ಚೆನ್ನೈ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 044-25912686
ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ: 09442012555
ಕೋಲ್ಕತಾ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 09433392182/09434009077
ಹೈದರಾಬಾದ್: ಆಂಧ್ರ ಪ್ರದೇಶ ಎದೆ ರೋಗಗಳ ಆಸ್ಪತ್ರೆ: 040-23814939
ಮುಂಬೈ: ಕಸ್ತೂರ್ಬಾ ಆಸ್ಪತ್ರೆ: 022-23083901, 23083902, 23083903, 23083904
ಪುಣೆ: ಡಾ| ನಾಯ್ಡು ಸಾಂಕ್ರಾಮಿಕ ರೋಗ ಆಸ್ಪತ್ರೆ - 09923130909

ಶುಕ್ರವಾರ, ಮೇ 29

ಹೊಸಲಂಗದತ್ತ ಕೈಚಾಚಿ ಇದ್ದಲಂಗವನ್ನೂ ಕಳಕೊಂಡರು!

ಭಳಿರೇ ಪರಾಕ್ರಮ ಕಂಠೀರವಾ.......

ಬಲ್ಲಿರೇನಯ್ಯಾ......

ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........

ಈ್ಹ......ಅಖ್ಹಂಡ್ಹ ಭರತಖಂಡದ ಸಾಮ್ರಾಟನಾರೆಂದು ಕೇಳಿ ಬಲ್ಲಿರೀ....

ಮಣಮಣ ಸಿಂಗ್ ಎಂದು ಕೇಳಿಬಲ್ಲೆವು......

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ಹೊಸದೆಹಲಿ ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ರಾಷ್ಟ್ರಕಟ್ಟಬೇಕು, ಬಡವರ ಉದ್ಧಾರವಾಗಬೇಕು, ಅರ್ಧಕ್ಕೆ ನಿಂತ ಕಾರ್ಯಗಳು ಮುಂದುವರಿಯಬೇಕು.... ವಿರೋಧಿಗಳು ಸಂಪೂರ್ಣ ನೆಲಕಚ್ಚಬೇಕು.... ಒಂದೇ ಎರಡೇ.... ಅನೇಕವಿದೆ.... ಅನೇಕವಿದೆ.... ಅನೇಕವಿದೆ....

ಆಹಾ.... ಪ್ರಪಂಚ ಅದೆಷ್ಟು ಸುಂದರವಾಗಿದೆ. ಭಾರತಾಂಬೆ ಎಷ್ಟೊಂದು ಹರ್ಷಚಿತ್ತದಿಂದಿದ್ದಾಳೆ...ನಮ್ಮೀ ಹವಾನಿಯಂತ್ರಿತ ಕೊಠಡಿಯ ಚುಮುಚುಮು ಚಳಿ, ಸುಂದರ ಕಾವ್ಯದಂತಹ ದೆಹಲಿ ನಗರದ ಅದ್ಭುತ ದೃಶ್ಯ, ಇವೆಲ್ಲಕ್ಕಿಂತಲೂ ಉಲ್ಲಾಸ, ಸಂತೋಷ ಪುಟಿಯುತ್ತಿರುವ ಮನಸ್ಸು.... ಮೈಯನ್ನು ಹಿತವಾಗಿ ಮೀಟುತ್ತಿರುವ ತಂಗಾಳಿ... ರವಿರಾಜನ ಬಂಗಾರ ಬಣ್ಣದ ಕಿರಣಗಳು ಇಳೆಯನ್ನು ಮುತ್ತಿಕ್ಕಲು ನಾಮುಂದು ತಾ ಮುಂದು ಎಂದು ಧಾವಿಸುತ್ತಿವೆ. ನಿದಿರಾ ದೇವಿಯ ಮಡಿಲಲ್ಲಿ ರಾಷ್ಟ್ರಕಟ್ಟುವ ಬೆಚ್ಚನೆಯ ಕನಸಿನಲ್ಲಿದ್ದ ನಾವು ಅತ್ಯಾಧುನಿಕ ತಲ್ಪದಿಂದ ಎದ್ದು ಪ್ರಾಥವಿಧಿಗಳನ್ನು ಪೂರೈಸಿದೆವು.

ಇಷ್ಟದೈವಗಳನ್ನು ಮನದಲ್ಲಿ ಪ್ರಾರ್ಥಿಸಿ, ನೋಸಿಯಾ ದೇವಿಯ ಚಿತ್ರಕ್ಕೆ ನಮಿಸಿದ್ದಾಯ್ತು. ಎಂದಿನಂತೆ ನಮ್ಮ ಸರಳ ಉಡುಗೆಯನ್ನು ತೊಟ್ಟು ಅದಕ್ಕೊಂದು ಮೇಲಂಗಿಯನ್ನೂ ಹಾಕಿಕೊಂಡೆವು. ಗಡ್ಡ ನೀವಿಕೊಂಡು ಆಕಾಶನೀಲಿ ಬಣ್ಣದ ಪೇಟವನ್ನು ಎಳೆದು ಕಟ್ಟುತ್ತಲೆ, ಅರ್ಧಾಂಗಿ ಶರಗುರುಣ ಕೌರ್ ತಂದಿಟ್ಟ ನಮ್ಮ ಆರೋಗ್ಯಕ್ಕೆ ಹೊಂದುವ ಸರಳ ಉಪಹಾರವನ್ನು ಸೇವಿಸಿಕೊಂಡೆವು. ರಥಿಕ ರಥವನ್ನುಮನೆಯ ಬಾಗಿಲಲ್ಲಿ ತಂದು ನಿಲ್ಲಿಸಿದ್ದಾನೆ. ಅಂಗರಕ್ಷಕರೊಡನೆ ಹೆಜ್ಜೆ ಹಾಕಿ ರಥವನ್ನೇರಿ ಒಡ್ಡೋಲಗಕ್ಕಾಗಿ ಸಭಾಂಗಣಕ್ಕೆ ಬಂದು ಸಿಂಹಾಸನಕ್ಕೆ ನಮಸ್ಕರಿಸಿ, ಹಾರಿ, ಏರಿ ಕುಳಿತು ಸಭೆಯತ್ತ ನೋಟ ಹರಿಸುತ್ತೇವೇ..... ಏನಾಶ್ಚರ್ಯ....? ಇದೇನಾಶ್ಚರ್ಯ....! ಪರಮಾಶ್ಚರ್ಯ......! ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಸಂದುಗೊಂದುಗಳಲ್ಲಿ ತಲೆತೂರುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ನಮ್ಮ ಭದ್ರತಾ ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದಾರೆ. ವಂದಿ ಮಾಗಧರಿದ್ದಾರೆ. ಮಂದಿ ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ಆಸೀನರಾಗಿದ್ದಾರೆ, ಹಿರಿಯರು, ಕಿರಿಯರು, ಮಾಗಿದವರು, ಮಾಗಬೇಕಿರುವವರು, ಅನುಭವಿಗಳು, ಅರೆ ಅನುಭವಿಗಳು, ಅನನುಭವಿಗಳು.... ಆಹಾ... ಸಭೆಗೆ ಕಳೆಯೋ ಕಳೆ. ಇಂದು ನಮ್ಮ ಕನಸು ಸಂಪೂರ್ಣವಾಗಿ ನನಸಾಯಿತು. ಸ್ವಭಾವತಃ ಕಡಿಮೆ ಮಾತುಗಳನ್ನಾಡುವ ನಮಗೆ ಸಂತೋಷದಿಂದ ಇಂದು ಬಾಯಿಕಟ್ಟಿಯೇ ಹೋಗಿದೆ. ಮಾತೇ ಹೊರಡುತ್ತಿಲ್ಲ. ಆದರೆ, ನಾವಿಂದು ಮಾತಾಡಲೇ ಬೇಕಿದೆ. ಯಾರಲ್ಲೀ.......?

ಸ್ವಾಮಿ ಮಣಮಣ ಸಿಂಗರೇ...... ನಿಮ್ಮೀ ಪ್ರಚಂಡ ವಿಜಯಕ್ಕೆ ಮೊದಲಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಿವೇ ನಿಮ್ಮನ್ನು ಚಿವುಟಿಚಿವುಟಿ ನೋಡಿಕೊಳ್ಳುವಂತೆ ಅದು ಹೇಗೆ ಈಪರಿಯ ವಿಜಯ ಪ್ರಾಪ್ತಿಯಾಯ್ತು....?

ಭಾಗವತರೇ... ನಿಮ್ಮೀ ಅಭಿನಂದನೆ ಸಲ್ಲಬೇಕಿರುವುದು ನಮ್ಮ ಕಾಂಗ್ರೆಸ್‌ನ ಮಹಾರಾಣಿ ನೋಸಿಯಾ ದೇವಿಯವರಿಗೆ, ಅವರ ಪುತ್ರ ಬಿಸಿರಕ್ತದ ತರುಣ ರಾಜಕುಮಾರ ಹಾರುಲ್ ಹಾಗೂ ರಾಜಕುಮಾರಿ ಪಿಂಕಿದೇವಿಯವರಿಗೆ ಸಲ್ಲಬೇಕು..... ನಮ್ಮದೇನಿದೆ.... ನಾವು ನಿಮಿತ್ತ ಮಾತ್ರ ಎಲ್ಲವೂ ಆ ತಾಯಿಯ ದಯೆ... ಸ್ವಾಮೀ ಭಾಗವತರೆ ನಿಮ್ಮ ಕೊಂಕು ಬೇಡ ನಾವು ಗೆಲ್ಲುವ ನಂಬುಗೆ ನಮಗಿತ್ತು. ನಮ್ಮ ವಿರೋಧಿಗಳ ರಣತಂತ್ರವೇ ನಮ್ಮನ್ನು ಗೆಲ್ಲಿಸಿತು. ಅವರ ಮಾತು, ನಡೆಗಳೇ ನಮ್ಮ ಗೆಲುವನ್ನು ಸುಲಭವಾಗಿಸಿತು.

ಸಾಮ್ರಾಟ ಸಿಂಗರೇ...... ಅತ್ಯಂತ ಸಭ್ಯ, ಸುಸಂಸ್ಕೃತ, ಸ್ವಚ್ಚ ನಡೆನುಡಿಯ, ಮೆದು ಮಾತಿನ ರಾಜಕಾರಣಿ ಎಂಬುದಾಗಿ ವಿರೋಧಿಗಳಿಂದಲೂ ವ್ಯಕ್ತವಾಗುವ ಮೆಚ್ಚುಗೆ. ಆದರೆ ಮಹಾ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಎದುರಾಳಿ ನಿಮ್ಮನ್ನು ದುರ್ಬಲ, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬರದವರು, ಎಲ್ಲಕ್ಕೂ ನಂ. 10, ಜನಪಥ ರಸ್ತೆಯತ್ತ ಮುಖಮಾಡುವವರು ಎಂದೆಲ್ಲಾ ಜರೆದರು. ಒಂದು ಹಂತದ ತನಕ ಇವೆಲ್ಲವನ್ನೂ ಸಹಿಸಿಕೊಂಡ ತಾವುಗಳು ಕೊನೆಗೆ ಅಷ್ಟೇ ಖಾರದ ತಿರುಗೇಟು ನೀಡಿದ್ದೀರಿ. ದುರ್ಬಲರೆಂದು ಹೇಳಿದವರು, ತಾವ್ಯಾಕೆ ದುರ್ಬಲವಾಗಿ ಹೋದೆವೆಂಬ ಕಾರಣ ಸಿಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಇದಕ್ಕೇನನ್ನುತ್ತೀರಿ ಸ್ವಾಮೀ....?

ಭಾಗವತರೇ.... ಇದಕ್ಕೆ ನಾವು ಅನ್ನಬೇಕಾದ್ದು ಏನೂ ಇಲ್ಲ. ನಮ್ಮ ಪ್ರಜೆಗಳೇ ಸೂಕ್ತವಾದ ಉತ್ತರ ನೀಡಿದ್ದಾರೆ. ಇದಕ್ಕಿಂತ ಸಮರ್ಥ ಉತ್ತರ ಬೇರೆ ಬೇಕಿಲ್ಲ. ಗದ್ದರಿಸಿ ಮಾತನಾಡುವುದೇ ಸಬಲತೆಯೋ? ನೀವೇ ನೋಡಿದ್ದೀರಿ..... ಖಾತೆ ಹಂಚಿಕೆಯ ವೇಳೆ ಆ ದ್ರಾವಿಡ ಪಕ್ಷದವರ ಎಲ್ಲಾ ಕ್ಯಾತೆಗಳಿಗೆ ನಾವು ಬಗ್ಗಿದ್ದೇವೆಯೇ? ಚುನಾವಣೆಗೆ ಮುನ್ನ ಆರು ಸ್ಥಾನ ಕೊಡುತ್ತೇವೆ ಅಂದೆವು. ಜೆಡಿಎಸ್ ಆಗ ಮುಖ ತಿರುವಿತು. ಈಗ ಬೇಷರತ್ ಬೆಂಬಲ ಘೋಷಿಸಿ ಸಚಿವಗಿರಿ ನೀಡಿರೆಂದು ಗಿಂಜಿದರು. ನಾವು ಬಗ್ಗಿದೆವಾ? ಹೇಳಿ ಇದು ದೌರ್ಬಲ್ಯವೇ....? 10, ಜನಪಥದತ್ತ ನೋಡಿದರೆ ಏನಾಯ್ತೀಗ, ಅಲ್ಲಿ ನಮ್ಮ ಶಕ್ತಿದೇವತೆ ಇದ್ದಾರೆ....

ಆದರೂ.... ಸಿಂಗರೇ ವಿರೋಧಿ ಪಕ್ಷಗಳು ಪ್ರಚಾರದ ವೇಳೆ ಚುನಾವಣಾ ವಿಚಾರಗಳನ್ನೇ ಎತ್ತಲಿಲ್ಲ.... ಅಗತ್ಯವಸ್ತುಗಳ ಬೆಲೆಗಳಂತೂ ರಾಕೆಟ್‌ಗಳಂತೆ ಮೇಲೆಮೇಲೆ ಹೋಗಿ ಆಕಾಶದಲ್ಲೇ ತೇಲುತ್ತಿವೆ. ವಾರವಾರ ಪ್ರಕಟವಾಗುವ ಹಣದುಬ್ಬರದ ದರ ಪಾತಾಳ ಕಂಡರೂ ಆಕಾಶದಲ್ಲಿರುವ ಬೆಲೆಗಳ್ಯಾಕೆ ಕೆಳಮುಖ ಮಾಡುತ್ತಿಲ್ಲ...? (ಕಳೆದ ಚುನಾವಣೆಯಲ್ಲೊಮ್ಮೆ ಈರುಳ್ಳಿ ಬೆಲೆ ದೆಹಲಿಯ ಬಿಜೆಪಿ ಸರ್ಕಾರವನ್ನು ಉರುಳಿಸಿತ್ತು) ಭಯೋತ್ಪಾದಕರನ್ನು ಸೂಕ್ತವಾಗಿ ಮಟ್ಟಹಾಕಲು ಆಗುತ್ತಿಲ್ಲ.... ಇದರಂತೆ ಅನೇಕ ವಿಚಾರಗಳಿವೆ. ಇವುಗಳನ್ನು ನಿಮ್ಮ ವಿರೋಧಿಗಳು ಮತದಾರರ ಮುಂದೆ ಎತ್ತದೇ ಇದ್ದುದೇ ನಿಮಗೆ ಅನುಕೂಲವಾಯಿತೇ.....?

ಸ್ವಾಮಿ ಭಾಗವತರೇ..... ಈ ಕುರಿತು ನಮಗೂ ಆಂತರ್ಯದಲ್ಲಿ ತಿಪುತಿಪು ಅನ್ನುತ್ತಲೇ ಇತ್ತು. ಅದೃಷ್ಟವಶಾತ್ ನಮ್ಮ ವಿರೋಧಿಗಳು ಈ ವಿಚಾರಗಳನ್ನು ಎತ್ತಲೇ ಇಲ್ಲ. ಕಡಿ, ಕೊಚ್ಚು, ದುರ್ಬಲ ಅನ್ನುತ್ತಲೇ ಪ್ರಚಾರ ಮಾಡಿದರು. ನಮ್ಮನ್ನು ಅಂದೊಮ್ಮೆ ಬೀಳಿಸಲು ಹೊರಟ ರಕಾಸ್ ಪಾರಟ್ ಎಂಬವರು ಮೂರನೇ ಲಂಗವೊಂದನ್ನು ಹುಟ್ಟು ಹಾಕಿದರು ನೋಡಿ. ಅದನ್ನು ಕಂಡು ನಮಗೂ ಜುಂಜುಂ ಅಂದಿದ್ದೂ ಸುಳ್ಳಲ್ಲ. ನಮ್ಮಯುವರಾಜರ ಕೈಲಿ ಹೇಳಿಕೆ ನೀಡಿಸಿ ಚುನಾವಣೆ ನಡೆಯುತ್ತಿರುವಾಗಲೇ ಇವರಿಗೆಲ್ಲ ಮತ್ತೆ ಆಹ್ವಾನ ನೀಡಿದ್ದೆವು. ದಕ್ಷಿಣದ ಅಮ್ಮನನ್ನೂ, ಬಿಹಾರದ ಕುಮಾರರನ್ನೂ ಹೊಗಳಿಸಿದ್ದೆವು. ಪರಿಸ್ಥಿತಿ ಹೇಗೆ ತಿರುಗುತ್ತದೆ ನೋಡಿ.... ಕಾಂಗ್ರೆಸ್ ಎಲ್ಲಿ ಕುಸಿಯುತ್ತದೋ ಎಂದು ಬೆದರಿದ ಕೆಲವು ಮಿತ್ರ(ದ್ರೋಹಿಗಳು)ರು ಅತ್ತ ತೃತೀಯ ಲಂಗದತ್ತಲೂ ಒಂದು ಕಣ್ಣಟ್ಟು ನಾಲ್ಕನೆ ಲಂಗ ಹುಟ್ಟುಹಾಕಿದರು. ಮತದಾರ ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ. ಹೊಸಹೊಸ ಲಂಗದತ್ತ ಮನಸ್ಸು ಹರಿಬಿಟ್ಟವರೆಲ್ಲ, ಇದ್ದ ಲಂಗವನ್ನೂ ಕಳೆದುಕೊಂಡು ಬೆತ್ತಲಾದರು...ಚಾತುರ್ಯ ಮೆರೆದವರು ರಾಜರಾದರು!

ಪ್ರಧಾನಿಗಳೇ.... ಕಳೆದ ಬಾರಿಗಿಂತಲೂ ಈ ಸರ್ತಿ ತಾವು ಹೆಚ್ಚು ಗಟ್ಟಿಯಾಗಿದ್ದೀರಿ. ಆದರೂ ನಿಮ್ಮ ಸೆರಗಿನಲ್ಲಿ ಕೆಂಡವಿದ್ದೇ ಇರುತ್ತದೆ. ತಮಮಾ ಬಾನರ್ಜಿ ಎಂಬ ಗಟ್ಟಿಗಿತ್ತಿ ನಾರಿ ತಮ್ಮ ಹಠಿಸಾಧಿಸುವಲ್ಲಿ ಪ್ರಸಿದ್ಧರು. ದ್ರಾವಿಡ ಪಕ್ಷದವರು ತಮ್ಮ ನೆಲ, 'ಜಲ' ಭಾಷೆ ಅಂದಾಗ ಪಕ್ಷಬೇಧ ಮರೆತು ಕ್ರಾವ್... ಕ್ರಾವ್... ಕ್ರಾವ್... ಅನ್ನುವವರು. ಇವರನ್ನೆಲ್ಲ ಸಂಭಾಳಿಸಿಕೊಂಡು... ವೈವಿಧ್ಯಮಯ ಸಂಸ್ಕೃತಿಯ ಈ ವಿಶಾಲ ಭರತಖಂಡವನ್ನು ಆಳಬೇ.....

ಹೋಯ್ ಭಾಗವತರೇ... ಅಧಿಕಪ್ರಸಂಗ ಸಾಕು... ಚುನಾವಣೆಯಲ್ಲಿ ಗೆದ್ದವರಿಗೆ ಮುಂದೆ ದೇಶವನ್ನು ಹೇಗೆ ಮುನ್ನಡೆಸಬೇಕೆಂಬುದು ತಿಳಿದಿರುತ್ತದೆ.... ಕಳೆದ ಬಾರಿಯ ಅಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಮಾತನಾಡದೆಯೇ ಎಲ್ಲವನ್ನೂ ಸಂಭಾಳಿಸಲಿಲ್ಲವೇ.....? ಸಂಪುಟದಲ್ಲಿ ಅತಿರಥಮಹಾರಥ ಮಂತ್ರಿಗಳಿದ್ದಾರೆ. ನಮ್ಮ ಅಧಿನಾಯಕಿ ಇದ್ದಾರೆ.... ನಾವು ಹೆಚ್ಚೇನು ಮಾಡಬೇಕಾಗಿರುವುದಿಲ್ಲ. ವಿಶ್ವಾಸ ಮತ ಎದುರಿಸಬೇಕಿದ್ದರೆ ಸೂಟ್ಕೇಸ್‌ಗಳಿವೆ. ಆಧುನಿಕ ಚಿಂತನೆಗೆ ಯುವರಾಜ ಹಾರುಲರು ಜತೆಯಲ್ಲೇ ಇರುತ್ತಾರೆ.... ಇದೆಲ್ಲಕ್ಕೂ ಮಿಕ್ಕು ನಮ್ಮಬಳಿ ಅಗಾಧವಾದ ಅನುವಭವಿದೆ.... ಆತ್ಮವಿಶ್ವಾಸವಿದೆ.... ಎಲ್ಲವೂ ಸುಲಲಿತವಾಗಿ ನಡೆಯುತ್ತದೆ.

ನಿಮ್ಮ ದೃಢವಿಶ್ವಾಸಕ್ಕೆ ಅಭಿನಂದನೆಗಳು ಸಾಮ್ರಾಟರೇ.... ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣಿರಿ.... ಮತಬ್ಯಾಂಕಿನ ಮೇಲೆಯೇ ನಿಮ್ಮ ಕಣ್ಣುಹೆಚ್ಚು ಹೋಗದಿರಲಿ. ಯಾವಧರ್ಮ, ಜಾತಿ, ಪಂಗಡವಿರಲೀ.... ಬಡವರೆಲ್ಲ ಬಡವರೇ... ಹಸಿವು ಕಷ್ಟಗಳೂ ಎಲ್ಲರಿಗೂ ಒಂದೇ.... ಅದರಲ್ಲಿ ಮೇಲ್ಜಾತಿ, ಕೀಳ್ಜಾತಿ, ಆ ಧರ್ಮ, ಈ ಧರ್ಮ ಎಂಬ ಭೇದಭಾವವಿಲ್ಲ... ಜಾತ್ಯತೀತರೆಂದು ತೋರಿಸಿಕೊಳ್ಳುವ ರಭಸದಲ್ಲಿ ಯಾವುದಾದರೂ ನಿರ್ದಿಷ್ಟ ಜಾತಿ-ಧರ್ಮವನ್ನು ಓಲೈಸಿದಿರೋ..., ತಾವು ಜಾತ್ಯತೀತ ಕೋಮುವಾದಿಗಳಾಗುತ್ತೀರಿ. ಪಕ್ಷಪಾತವಿಲ್ಲದ ಆಡಳಿತನೀಡಿ, ಮತಗಳು ನಿಮ್ಮತ್ತ ಹರಿದುಬರುತ್ತವೆ.

ಆ ಭಾರತಾಂಬೆ ಸರ್ವರಿಗೂ ಒಳಿತಾಗುವಂತ ಆಡಳಿತವನ್ನು ನಿಮ್ಮಿಂದ ನೀಡಿಸಲೀ... ಸರ್ವೇಜನ ಸುಖಿನೋಭವಂತು...

ಮಂಗಳಂ......!

ಗುರುವಾರ, ಏಪ್ರಿಲ್ 9

ದಯವಿಟ್ಟು ನಮ್ಗೊಂದು ಚೆಂದದ ಹೆಸರು ಸೂಚಿಸಿ

ಯಾಕೋ ಕೆಲ್ಸ ಬೋರ್ ಹೊಡಿತಾ ಇದೆ. ಹೋಂ ಸಿಕ್ ಜೋರಾಗಿದೆ. ಏನ್ ಮಾಡೋಕು ತೋಚುತ್ತಿರಲಿಲ್ಲ. ಆರ್ಥಿಕ ಹಿಂಸರಿತದ ಈ ಸಂದರ್ಭದಲ್ಲಿ ಕೆಲ್ಸ ಬಿಡ್ಬೇಡ ಎಂಬುದೇ ಎಲ್ಲರ ಸಲಹೆ. ಹಾಗಾಗಿ, ನುಂಗಲು ಆಗದೆ ಉಗಿಯಲು ಆಗದೆ ಒದ್ದಾಡುತ್ತಲೇ ಇರುವ ಈ ಸಂದರ್ಭದಲ್ಲೀ......

ಒಮ್ಮೊಮ್ಮೆ ಅನ್ನಿಸುತ್ತಿತ್ತು. ಚುನಾವಣಾ ಕೆಲ್ಸ ಮಾಡೋಣವೇ ಅಂತ. ಸಹೋದ್ಯೋಗಿ ಭುವನ್ ಬೇರೆ 'ಈರ್ ಓಟುಗುಂತ್ಲೆಯೇ' (ಓಟಿಗೆ ನಿಲ್ಲಿ) ಅಂತ ನನ್ನನ್ನು ಕೆಣುಕುತ್ತಿದ್ದ. ಓಟಿಗೆ ನಿಲ್ಲಲು ಆಗದಿದ್ದರೂ, ವಿವಿಧ ಪಕ್ಷಗಳು ನಡೆಸುವ ಸಮಾವೇಶಗಳಲ್ಲಿ ಭಾಗವಹಿಸುವ ಕಾಯಕ ಮಾಡೋಣವೇ ಅಂತನ್ನಿಸಿದೆ. ಇಲ್ಲವಾದರೆ, ಇಂತಹ ಸಭೆ ಸಮಾರಂಭಗಳಿಗೆ ಜನಪೂರೈಸುವ 'ಸೇವೆ' ಮಾಡಿ ಒಂದು ತಲೆಗೆ ಇಷ್ಟು ಅಂತ ಫಿಕ್ಸ್ ಮಾಡಿದರೂ ಆಗಬಹುದಲ್ಲವೇ? ಅವಕಾಶ ಸಿಕ್ಕಾಗ ಧಕ್ಕಿಸಿಕೊಳ್ಳಬೇಕೆಂದು ದೊಡ್ಡವರು ಹೇಳಿದ್ದಾರೆ. ಹೇಗಿದ್ದರೂ ಇದು ಲಾಭದಾಯಕವೇ. ಅದಲ್ಲದೆ, ಎಲ್ಲಾ ಪಕ್ಷದವರೂ ಒಂದೊಂದು ಓಟಿಗೆ ಒಂದೊಂದು ಕೆಂಪು ನೋಟು, ಮೂಗುತ್ತಿ, ಸೀರೆ, ಕಿವಿಯೋಲೆ(ಒಂದು ಕಿವಿಗೆ) ಎಲ್ಲಾ ಕೊಡುತ್ತಾರೆ ಎಂಬ ರಂಗುರಂಗಿನ ಸುದ್ದಿ ಕೇಳುವಾಗಲಂತೂ 'ಹೋಗೇ ಬಿಡ್ಬೇಕತ್ತ' ಎಂಬ ತುಡಿತ ಜೋರಾಗಿತ್ತು.

ಆದರೆ, ಈಗ ಇದನ್ನೆಲ್ಲ ಬಿಟ್ಟು, ನಾವೆಲ್ಲ ಸಹೋದ್ಯೋಗಿಗಳು ಸೇರಿ ಹೊಸ ಬಿಸ್ನೆಸ್ ಶುರು ಮಾಡೋ ಐಡಿಯಾ ಹಾಕ್ಕೊಂಡಿದ್ದೇವೆ. ವರುಣ್ ಗಾಂಧಿ ಎಲ್ಲಿದ್ದರೋ? ದೇವರಂತೆ ಉದ್ಭವವಾಗಿ ಎಂತಾ ಹೇಳಿಕೆ ನೀಡಿಬಿಟ್ಟಿದ್ದಾರೆ.(ಅವರು ಇದನ್ನು ಇಲ್ಲವೇ ಇಲ್ಲ ಅನ್ನುತ್ತಿದ್ದಾರೆ. ಅವರು ಇಲ್ಲ ಅಂದರೂ ಪರ್ವಾಗಿಲ್ಲ) ನಮಗೊಂದು ಐನಾತಿ ಐಡಿಯಾಕ್ಕೆ ತಳಪಾಯ ಹಾಕಿದ್ದಾರೆ. ಅವರೀಗ ನಮ್ಮ ಪಾಲಿಗೆ ಪ್ರಾತ:ಕಾಲ ಸ್ಮರಣೀಯರು. ಯಾಕಂತೀರಾ? ಕೇಳುವಂತವರಾಗಿ.....

ವರುಣ್ ಗಾಂಧಿ ಹಿಂದೂಗಳ ವಿರುದ್ಧ ಮಾತನಾಡುವವರ ಕೈ ಕತ್ತರಿಸುತ್ತೇನೆ ಅಂದರಂತೆ. ಶುರವಿಗೆ ನಂಗೂ ಇದೆಂತಾ ಹೇಳಿಕೆ ಅಂತ ಕಿರಿಕಿರಿಯಾಗಿತ್ತು. ಆದರೆ, ಅವರು ಪಿಲಿಭಿತ್‌ನಲ್ಲಿ ಭಾಷಣ ಮಾಡಿ ಒಂದು ವಾರದ ಬಳಿಕ ಪ್ರಚಾರಕ್ಕೆ ಬಂದು, ಪ್ರಕರ ಹೊಳಪು ಕಂಡ ಈ ಹೇಳಿಕೆ, ಫಳಫಳನೆ ಹೊಳೆಯುತ್ತಾ ಎಲ್ಲೆಲ್ಲೋ ಹೋಗಿ, ಚುನಾವಣೆಗೆ ನಿಂತಿರುವ ಅವರೀಗ ಜೈಲಿನಲ್ಲಿ ಕುಳಿತುಕೊಳ್ಳುವಂತಾಗಿದೆ.

ಈ ಹುಡುಗು ಮುಂಡೇದು, ಏನೋ ಮಾತಾಡಿದೆ ಅಂತ ಸುಮ್ಮನಾಗುತ್ತಿರುವಂತೆ, ಇಲ್ಲೇ ನಮ್ಮ ಕಾಲ್ಬುಡದಲ್ಲೇ ಇನ್ನೊಬ್ಬರೂ ಕತ್ತರಿಸಲು ಮುಂದಾದಾಗ ಮಾತ್ರ ಇದೇಕೆ ಹೀಗೆ ಅನ್ನಿಸಿತ್ತು. ಅದೂ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹಿಂದುತ್ವ ಪ್ರತಿಪಾದಿಗಳ ಕೈ ಕತ್ತರಿಸುವ ಮಾತನ್ನಾಡಿದರು. ತಗೊಳ್ಳೀ.. ಮಾರನೆ ದಿನವೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಿಂದೂ ವಿರೋಧಿಗಳ ತಲೆಯನ್ನೇ ಕತ್ತರಿಸುವುದಾಗಿ ಹೇಳಿದರು. ಅವರ ಕಾಲು ಕತ್ತರಿಸವುದಾಗಿ ಇನ್ಯಾರೋ ಹೇಳಿದ್ದಾರಂತೆ, ಮಿತ್ರ ತ್ರಾಸಿ ಹೇಳ್ತಿದ್ದರು. ಇನ್ನೊಬ್ಬ ಶಾಸಕ ಸಿ.ಟಿ. ರವಿ ಅವರಂತೂ, ಹಿಂದುತ್ವದ ಪ್ರತಿಪಾದಕರ ಕೈಕತ್ತರಿಸಲು ಅವರು ಮುಂದಾಗುವ ಮುನ್ನವೇ ಅವರ ತಿಥಿ ಮಾಡಿಬಿಡ್ತೇವೆ ಎಂದು ಸಾರಿದರು.

ಈ ಕತ್ತರಿಸುವ ಸೋಂಕು ಆಂಧ್ರಕ್ಕೂ ವ್ಯಾಪಿಸಿ ಅಲ್ಲಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಅಲ್ಪಸಂಖ್ಯಾತರ ವಿರುದ್ಧ ಬೆರಳೆತ್ತಿದವರ ಕೈ ಕತ್ತರಿಸುವುದಾಗಿ ಧಿಗಿಣ ಹೊಡೆದಿದ್ದಾರೆ. ಬಿಹಾರದಲ್ಲಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ವರುಣ್ ಮೇಲೆ ರೋಲರ್ ಹರಿಸಿ ಪುಡಿಗಟ್ಟವುದಾಗಿ ತೊಡೆ ತಟ್ಟಿದರು. ಇಷ್ಟೆಲ್ಲ ಕತ್ತರಿಸುವ, ಕೊಚ್ಚುವ, ಈ ಮೂಲಕ ಚುಚ್ಚುವ ಸುದ್ದಿಗಳಲ್ಲಿ ನಾಡಿಗೆ ನಾಡೇ ಮುಳುಗಿ ಹೋಗಿದ್ದಾಗ ನಮ್ಮ ಮಾಜಿ ಡಿಸಿಎಮ್ಮು, ಸಿದ್ರಾಮಣ್ಣ ನಾನು ಹಿಂದುತ್ವ ವಿರೋಧಿಸುತ್ತೇನೆ, ಬನ್ನಿ ನನ್ನ ತಲೆ ಕತ್ತರಿಸಿ ಎಂಬುದಾಗಿ (ತಲೆ 'ದಂಡ'ದ)ಆಹ್ವಾನ ನೀಡಿದ್ದಾರೆ...ಇವಿಷ್ಟು ಸ್ಥೂಲವಾಗಿ ಕತ್ತರಿಸು, ಪ್ರತಿಯಾಗಿ ಕತ್ತರಿಸು, ಕತ್ತರಿಸಿಕೊಳ್ಳಲು ಮುಂದಾಗು- ಮುಂತಾದ ಸುದ್ದಿಗಳಾದರೆ, 'ಬ್ರೇಕಿಂಗ್ ನ್ಯೂಸ್' ಕಣ್ಣಿಗೆ-ಕಿವಿಗೆ ಬೀಳದಿರುವ ಇನ್ನೆಷ್ಟು 'ಕತ್ತರಿಸು' ಭರವಸೆಗಳು ಈ ಅಖಂಡ ಭರತ ಖಂಡದಲ್ಲಿ ಹೊರಬಿದ್ದಿರಲಿಕ್ಕಿಲ್ಲ, ನೀವೇ ಹೇಳಿ?
ಹಾಗಾಗಿ ನಮ್ಮನ್ನು ಪ್ರತಿನಿಧಿಸಲು, ಆಳಲು ಹೊರಟಿರುವ ಜನನಾಯಕರು ಪಕ್ಷಬೇಧ ಮರೆತು ಕತ್ತರಿಸಲು ಹೊರಟಿರುವಾಗ; ಈ 'ಕತ್ತರಿಸುವುದರಲ್ಲೂ' ಏನೋ ಇದೆ ಎಂದು ನಮಗನಿಸದೆ ಇರಲಿಲ್ಲ. (ಆಗೋದೆಲ್ಲ ಒಳ್ಳೇದಕ್ಕಂತೆ, ಬಲ್ಲವರು ಹೇಳಿದ್ದಾರೆ) ಹಾಗಾಗಿ ನಮ್ಮ ಎಂದಿನ 'ಟೀ ಅಧಿವೇಶನ'ದಲ್ಲಿ ನಾವೆಲ್ಲ ಸಹೋದ್ಯೋಗಿಗಳು ಈ ವಿಷಯವನ್ನು ಚರ್ಚಿಸಿಯೇ ಚರ್ಚಿಸಿದೆವು. ಛಕ್ಕನೆ ಹೊಳೆದಿದೆ ನೋಡಿ ಐಡಿಯಾ!

ಹೇಗಿದ್ದರೂ ಒಂದಲ್ಲ ಒಂದು ಪಕ್ಷ; ಆಯ್ತು ದೊರೆಯೇ... ನೀವು ಹೇಳಿದಂಗೆ ಇರಲಿ, ಚೌಚೌ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರಂಟಿ ತಾನೆ? ಹೀಗಿರುವಾಗ,ಚುನಾವಣೆಗೆ ಮುನ್ನ ನೀಡಿದ ಭರವಸೆಯನ್ನು ಈಡೇರಿಸಲೇ ಬೇಕು. ಅದವರ ಕರ್ತವ್ಯ. ಹಾಗಾಗಿ ಅವರೆಲ್ಲ ಕತ್ತರಿಸುವುದು ಖಂಡಿತ. ಇದು ಲಾಜಿಕ್ಕು. ಆಗ ಒಮ್ಮೆಗೆ ಕತ್ತಿ, ಮಚ್ಚುಗಳಿಗೆ ಬೇಡಿಕೆ ಬರಬಹುದು. ಈ ಹಿನ್ನೆಲೆಯಲ್ಲಿ ನಾವು 'ಕತ್ತಿ/ಮಚ್ಚು ಅಥವಾ ದೊಡ್ಡ ಕತ್ತರಿ' ಉತ್ಪಾದನೆಯ ಹೊಸ ಉದ್ಯಮ ಆರಂಭಿಸುವ ಕುರಿತು ಗಂಭೀರ ಆಲೋಚನೆ ಮಾಡಿ ಇದೀಗಾಗಲೇ ಆರ್ ಆಂಡ್ ಡಿ ಕಾರ್ಯ ಆರಂಭಿಸಿದ್ದೇವೆ. ಕೈ, ಕಾಲು, ತಲೆ ಇಲ್ಲವೇ ಸೊಂಟ ಯಾವುದನ್ನೂ ಬೇಕಿದ್ದರೂ ಕತ್ತರಿಸಲು ಅನುಕೂಲವಾದ ಹತ್ಯಾರುಗಳ ಪ್ರೊಡಕ್ಷನ್‌ಗೆ ನಾವು ಇಳಿಯಲಿದ್ದೇವೆ. ಯಾವ ಪಕ್ಷದವರು ಯಾವುದರಲ್ಲಿ, (ಅಂದರೆ ಕತ್ತಿಯಲ್ಲೋ, ಇಲ್ಲ ಮಚ್ಚಿನಲ್ಲೋ) ಹೆಚ್ಚು ಕತ್ತರಿಸಲು ಇಷ್ಟಪಡುತ್ತಾರೆ ಎಂಬ ರಹಸ್ಯ ಸರ್ವೇಕ್ಷಣೆಯೂ ನಡೆಯುತ್ತಿದೆ.

ಥ್ಯಾಂಕ್ಸ್ ಟು ವರುಣ್, ಥ್ಯಾಂಕ್ಸ್ ಟು ಬ್ರೇಕಿಂಗ್ ನ್ಯೂಸ್(ಇಲ್ಲವಾದರೆ ಇಷ್ಟು ದೊಟ್ಟ ಮಟ್ಟದ ಆಲೋಚನೆಗೆ ಸ್ಫೂರ್ತಿ ಎಲ್ಲಿರುತ್ತಿತ್ತು), ಥ್ಯಾಂಕ್ಸ್ ಟು ಅಭಿವ್ಯಕ್ತಿ ಸ್ವಾಂತಂತ್ರ್ಯ(ಸಂವಿಧಾನದ ವಿಧಿ 19(1)(ಎ)). ನಾವು ರಾಷ್ಟ್ರವ್ಯಾಪಿ 'ಕತ್ತಿ/ಮಚ್ಚು ಅಥವಾ ದೊಡ್ಡ ಕತ್ತರಿ' ಪೂರೈಸುವಂತಹ ಬಿಸ್ನೆಸ್ಸನ್ನು ದೊಡ್ಡ ಮಟ್ಟದಲ್ಲಿ ನಮ್ಮ ಊರಿನಿಂದಲೇ ಆರಂಭಿಸುತ್ತಿದ್ದೇವೆ. ಇದೀಗಾಗಲೇ ಒಂದಷ್ಟು ಎಂಬಿಎ ಆಗಿರುವ ಅಭ್ಯರ್ಥಿಗಳನ್ನು ಮಾರ್ಕೆಟಿಂಗ್‌ಗೆ ಬಿಟ್ಟಿದ್ದೇವೆ. ಕತ್ತಿ ತಯಾರಿಕಾ ವಿಶೇಷ ಯಂತ್ರ ಜಪಾನಿಂದ ಬರಲಿದೆ. ವಿಶೇಷ ತಜ್ಞರೂ ಅಲ್ಲಿಂದಲೇ ಯಂತ್ರದೊಟ್ಟಿಗೆ ಆಗಮಿಸಲಿದ್ದಾರೆ. ಲೇಡಿ ಸಿಇಓ, ಎಚ್ಆರ್ ನೇಮಕವಾಗಿ ಸ್ಕ್ರೂಟಿನಿ ನಡೆಯುತ್ತಿದೆ. ಕೆಲವೇ ಹುದ್ದೆಗಳು ಬಾಕಿ ಇವೆ. ಸ್ಥಳೀಯರಿಗೆ ಆದ್ಯತೆ. ಆಸಕ್ತರು (ಕತ್ತರಿಸುವ ಅನುಭವ ಇದ್ದರೆ ಹೆಚ್ಚಿನ ಪ್ರಾಶಸ್ತ್ಯ) ಸಿ.ವಿ. ಫಾರ್ವರ್ಡ್ ಮಾಡಬಹುದು. ನಮಗೆ ನಿಧಾನಕ್ಕೆ ಎಕ್ಸ್‌ಪೋರ್ಟ್ ಆಲೋಚನೆಯೂ ಇದೆ. ದಯವಿಟ್ಟು ನಮ್ಮ ಸಂಸ್ಥೆಗೊಂದು ಚೆಂದದ ಹೆಸರು ಸೂಚಿಸಿ. ಹೆಸರಲ್ಲಿ ವರುಣ್, ಬ್ರೇಕಿಂಗ್ ಎಂಬೆಲ್ಲ ಶಬ್ದಗಳಿದ್ದರೆ ನಮ್ಮ ಋಣತೀರೀತು.

ಈ ನಮ್ಮ ವೆಂಚರ್‌ಗೆ ನಾವು ನಮ್ಮ ಸಂಬಳದಿಂದಲೇ ಬಂಡವಾಳ ತೊಡಗಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಸೋ, ಸ್ಯಾಲರಿ ಕ್ರೆಡಿಟ್ ಆಗಿದ್ಯೇ ಅಂತಾ ನೆಟ್ ಬ್ಯಾಂಕಿಂಗ್‌ನಲ್ಲಿ ಚೆಕ್ ಮಾಡ್ತಾ ಇದ್ದೆವು. ಕಾಕತಾಳಿಯವೋ ಗೊತ್ತಿಲ್ಲ. ಅಲ್ಲೂ ಕತ್ತರಿಸುವ ಸುದ್ದಿ. ಕತ್ತರಿಸುವ ಸುದ್ದಿಗಳನ್ನು ನೋಡುತ್ತಲೇ ವೇತನ ಜಮಾ ಮಾಡ್ತಿದ್ದರೋ? ವೃತ್ತಿ ತೆರಿಗೆ ಕಟ್!

ಸೋಮವಾರ, ಮಾರ್ಚ್ 9

ಅವ್ವಾ..... ಸ್ವರ್ಗಕ್ಕೇ ಹೋಗಿ

ನನಗೆ ಬುದ್ಧಿ ತಿಳಿದಂದಿನಿಂದ (ಅಥವಾ ಅವನಿಗೆ ಗಡ್ಡಮೀಸೆ ಮೂಡಿದಂದಿನಿಂದ) ಅವನ ಗಡ್ಡವಿಲ್ಲದ ಮುಖವನ್ನು ನೋಡಿರಲಿಲ್ಲ. ಆತನ ವಿವಾಹದ ದಿನ, ಹೇಮಣ್ಣ ಮದುವೆಗೆ ಗಡ್ಡ ತೆಗೆಯಲಿಲ್ಲ ಎಂಬುದು ಊರಿನಲ್ಲಿಡೀ ಬಿಸಿಬಿಸಿ ಚರ್ಚೆಯ ವಸ್ತುವಾಗಿತ್ತು. ಅಂಥ ಅಣ್ಣ ತಲೆ, ಗಡ್ಡ ಬೋಳಿಸಿಕೊಂಡು, ಒದ್ದೆ ಬಟ್ಟೆಯಲ್ಲಿ ಕಣ್ಣಲ್ಲಿ ನೀರಿಳಿಸಿಕೊಂಡು ನಿಂತಿದ್ದ. ಅವನನ್ನು ಈ ರೂಪದಲ್ಲಿ ಕಂಡ ಅವನ ಮೂರರ ಹರೆಯದ ಮಗ ಕಿಟಾರನೆ ಕಿರುಚಿಕಿರುಚಿ ಅತ್ತ. ನಾವೂ ಅಳುತ್ತಿದ್ದೆವು. ನಮಗಾರಿಗೂ ಪರಸ್ಪರರ ಮುಖ ನೋಡುವುದು ಬೇಡ ಎಂಬಂತಾಗುತ್ತಿತ್ತು. ಇಲ್ಲವೆಂದರೆ, ನಾವೆಲ್ಲ ಒಡಹುಟ್ಟಿದವರು ಒಟ್ಟು ಸೇರಿದೆವೆಂದಾದಾಗ, ಅಲ್ಲಿ ನಗು, ಹರ್ಷ ಆನಂದ ಸಂಭ್ರಮ, ಮಕ್ಕಳ ಆಟ....
****

ನಾವೆಲ್ಲ ಯಾವ ಅವ್ವನ ಸುತ್ತಮುತ್ತ ಕುಳಿತು ಈ ಸಂಭ್ರಮ ಪಡುತ್ತಿದ್ದೆವೋ ಆ ಅವ್ವನೇ ಇಲ್ಲ. ಅವ್ವನ ಕೋಣೆ ಖಾಲಿ. 19 ಗಂಟೆಗಳ ಪ್ರಯಾಣ ಮಾಡಿ ಫೆಬ್ರವರಿ ಒಂದರಂದು ಮನೆ ತಲುಪಿದಾಗ ನಂಗೆ ನೋಡಲು ಉಳಿದಿದ್ದದ್ದು ಅವರು ಮಲಗುತ್ತಿದ್ದ ಮಂಚದ ಮೇಲಿದ್ದ ಸುರಳಿ ಸುತ್ತಿದ್ದ ಹಾಸಿಗೆ ಮಾತ್ರ.

ದೂರದೂರದಿಂದ ನಾವೆಲ್ಲ ಮನೆಗೆ ಬಂದು ಮೆಟ್ಟಿಲೇರುತ್ತಲೇ ಅವ್ವಾ ಅಂದಾಗ, ಎಲ್ಲಿದ್ದರೂ ಓಡೋಡಿ ಬರುತ್ತಿದ್ದ ಅವ್ವ ಎಲ್ಲಿ...? ಇಲ್ಲ. ಅಂಗಳದಲ್ಲಿ ಜೀಪು ಸದ್ದು ಕೇಳುತ್ತಿರುವಂತೆ, 'ಬಂದ್ಲು, ಬಂದ್ಲು' ಅನ್ನುತ್ತಾ ಅಕ್ಕ, ಅತ್ತಿಗೆ, ಅಕ್ಕಂದಿರ ಮಕ್ಕಳು ಎಲ್ಲರೂ ಓಡಿಬಂದರು. ಯಾರು ಬಂದು ಎದುರುಗೊಂಡರೂ ಅವ್ವ ಬಂದಂತಾಗುತ್ತದಾ? ನಾಲ್ಕು ತಿಂಗಳ ಹಿಂದೆ ಮನೆಗೆ ಹೋದಾಗಲೂ ಅಮಾಯಕ ನಗು ಚೆಲ್ಲುತ್ತಾ ನೆಟ್ಟಗೆ ನಡೆಯಲಾಗದಿದ್ದರೂ ಓಡಿ ಬಂದು ನನ್ನ ಕೈಲಿದ್ದ ಬ್ಯಾಗು ಇಸಿದುಕೊಂಡಿದ್ದ ಅವ್ವ, ಇನ್ನೆಂದು ಹಾಗೆ ಮಾಡಲಾರರು ಎಂಬ ಕಟು ಸತ್ಯವನ್ನು ಅರಗಿಸಿಕೊಳ್ಳುವುದು ಹೇಗೆ?

ಒಂದು ಕಾಲದಲ್ಲಿ ಹುಲಿಯಂತೆ ಘರ್ಜಿಸುತ್ತಿದ್ದ ಅಪ್ಪ ಇಲಿಯಂತಾಗಿದ್ದರು. ಪೋರ್ಟಿಕೋದ ಮೂಲೆಯಲ್ಲಿ ಕುಳಿತಿದ್ದ ಅವರು ನನ್ನ ನೋಡುತ್ತಲೇ ಎದ್ದು ಬಂದರು. ನನ್ನ ಕೈ ಹಿಡಿಯಬೇಕೋ, ತಬ್ಬಿಕೊಳ್ಳಬೇಕೋ ಏನು ಮಾಡಬೇಕೆಂದು ಗೊತ್ತಾಗದ ಗೊಂದಲಕ್ಕೆ ಬಿದ್ದಿದ್ದರೆನ್ನಿಸುತ್ತದೆ, ಈಗ ಬಂದ್ಯಾ ಚಾಮೀ.... ನಿನ್ನವ್ವ..... ಅಷ್ಟೆ ಅವರಿಗೆ ಹೇಳಲಾಗುತ್ತಿದ್ದುದು. ಬಾಯಿಗೆ ಅಂಗವಸ್ತ್ರ ಅಡ್ಡಹಿಡಿದ ಅಪ್ಪ ಪುಟ್ಟ ಮಕ್ಕಳಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಅಪ್ಪನೂ ಅಳುತ್ತಾರೆ ಎಂಬುದು ನಂಗಾಗಲೇ ಗೊತ್ತು. ಅಷ್ಟರಲ್ಲಿ ಅಕ್ಕ ತಬ್ಬಿ ಒಳಕರೆದುಕೊಂಡು ಹೋದರೆ, ಅತ್ತಿಗೆ ನೀರು ತಂದು ಕೊಟ್ಟರು.

ಅಭ್ಯಾಸ ಬಲದಂತೆ ಅವ್ವನ ಕೋಣೆಗೆ ಹೋದೆ. ನಡು ಮನೆಯಲ್ಲಿ ಅವ್ವನ ಸಂಕೇತವೆಂಬಂತೆ ಕಾಲುದೀಪ ಉರಿಯುತ್ತಿತ್ತು, ಇಲ್ಲೇ ಅವ್ವ ಮಲಗಿದ್ದರು, ಅಕ್ಕ ಹೇಳಿದಳು. ಏನು ಮಾಡಲೀ... ಕುಳಿತುಕೊಳ್ಳಲೇ, ಏಳಲೇ, ಮಲಗಲೇ.... ಒಂದು ಗೊತ್ತಾಗುತ್ತಿಲ್ಲ. ಮಾಮೂಲಿಯಾದರೆ ಮನೆ ತಲುಪುತ್ತಲೇ ಪ್ರಯಾಣದ ಸುಸ್ತು, ಬಳಲಿಕೆಗಳೆಲ್ಲ ಮಾಯವಾಗುತ್ತಿತ್ತು. ಬ್ಯಾಗುಗಳನ್ನೆಲ್ಲ ಅವ್ವನ ಕೋಣೆಯಲ್ಲಿ ಎಸೆದು, ಮನೆಯಿಡೀ ಸುತ್ತು ಹಾಕಿ ಬಚ್ಚಲಿಗೆ ಹೋಗಿ ಮುಖ ತೊಳೆದು ಬರುತ್ತಲೇ 'ಕೂಸು ಬರುತ್ತಾಳೆ'(ನಾನು ಎಷ್ಟುದೊಡ್ಡ ಎಮ್ಮೆಯಾಗಿದ್ದರೂ) ಎಂದು ವಿಶೇಷವಾಗಿ ಮಾಡಿಟ್ಟಿರುತ್ತಿದ್ದ ತಿಂಡಿ ತಿನಿಸುಗಳನ್ನು ತಟ್ಟೆಯಲ್ಲಿ ಹಾಕಿ ಅವರು ರೆಡಿ ಮಾಡಿಟ್ಟಿರುತ್ತಿದ್ದರು. ಇವುಗಳಿಗಾಗೇ ಕಾದಿರುವಂತಿರುತ್ತಿದ್ದ ನಾನು ತಿನ್ನಲೇ ಬಂದವಳಂತೆ ಕಬಳಿಸಲಾರಂಭಿಸುತ್ತಿದ್ದೆ. ಆದರೆ ಈ ಸರ್ತಿ ಹಾಗನ್ನಿಸುವುದಾದರೂ ಹೇಗೆ. ನನ್ನನ್ನು ಕಳುಹಿಸಲು ರೈಲುನಿಲ್ದಾಣಕ್ಕೆ ಬಂದಿದ್ದ ತ್ರಾಸಿ ಮತ್ತು ಪಾಟೀಲ್ ತೆಗೆಸಿಕೊಟ್ಟಿದ್ದ ಒಂದು ಲೀಟರ್ ನೀರು ಬಿಟ್ಟರೆ, ಮರುದಿನ ಬೆಳಿಗ್ಗೆ ರೈಲಿನಲ್ಲಿ ಒಂದು ಲೋಟ ಕಾಫಿ ಖರೀದಿಸಿ ಕುಡಿದಿದ್ದೆ, ಅಷ್ಟೆ. ಆದರೂ ಹಸಿವಾಗುತ್ತಿರಲಿಲ್ಲ. ಏನೂ ತಿನ್ನೋದೆ ಬೇಡ ಅನ್ನಿಸುತ್ತಿತ್ತು. ನನ್ನನ್ನು ಸಾಧ್ಯವಿರುವಷ್ಟು ನೋವಾಗದಂತೆ ನಡೆಸಿಕೊಳ್ಳಬೇಕೆಂದು ಅಣ್ಣ-ಅತ್ತಿಗೆ, ಅಕ್ಕನವರು ಶತಾಯ-ಗತಾಯ ಪ್ರಯತ್ನಿಸುತ್ತಿದ್ದರು. ನಾನೇನು ಚಿಕ್ಕಹುಡುಗಿಯಲ್ಲ. ಆದರೂ, ನಮ್ಮ ಮನೆಯಲ್ಲಿ ಕೊನೆಯವಳು ಮತ್ತು 'ನೆಲೆ' ಇಲ್ಲದವಳು. ಉಳಿದವರೆಲ್ಲ ಜೀವನದಲ್ಲಿ ನೆಲೆಕಂಡವರು.

****
ನಾನು ಮನೆತಲುಪಿದ ಮರುದಿನ ಮೂರನೆಯ ಶುದ್ಧ. ಬೂದಿ ಒಪ್ಪ ಮಾಡಲು ನಮ್ಮ (ಅಪ್ಪನ)ಕುಟುಂಬಿಕರು ಸೋದರ ಮಾವಂದಿರು, ಚಿಕ್ಕಮ್ಮ, ದೊಡ್ಡಮ್ಮಂದಿರ ಪೈಕಿ ಎಲ್ಲರೂ ಸೇರಿದ್ದರು. ಎಲ್ಲರೊಂದಿಗೆ ನಾನೂ ಅವ್ವನ ಹೊಸ ಜಾಗಕ್ಕೆ ತೆರಳಿದೆ. ಅಷ್ಟೆಲ್ಲ ಕಷ್ಟ, ಕಾರ್ಪಣ್ಯಗಳೊಂದಿಗೆ ಜೀವನ ನಡೆಸಿದ್ದ, ಮನೆಯ ಯಜಮಾನಿಯಾಗಿದ್ದ, ಅಪ್ಪನ ರೌದ್ರಾವತಾರದ ಸಿಟ್ಟನ್ನು ಅರಗಿಸಿಕೊಂಡಿದ್ದ, ಮಕ್ಕಳು, ಮೊಮ್ಮಕ್ಕಳನ್ನು ಜೋಪಾನ ಮಾಡಿ, ಊರಿಗೇ ಅವ್ವನಾಗಿ ಮೆರೆದು, ಹತ್ತಿರಹತ್ತಿರ ಎಂಟು ದಶಕಗಳ ತುಂಬು ಜೀವನ ಕಂಡ ಅವ್ವ, ಇಷ್ಟಗಲದಲ್ಲಿ ಬೂದಿಯಾಗಿದ್ದರು. ಅವ್ವನಿಗೆ ಕೊನೆಯದಾಗಿ ತೊಟ್ಟು ನೀರುಕೊಡುವ ಅದೃಷ್ಟ ನಂಗಿರಲಿಲ್ಲ. 'ಪರಿಹಾರ' ಎಂಬಂತೆ ಆ ಜಾಗಕ್ಕೆ ನನ್ನ ಕೈಯಲ್ಲಿ ಹಾಲು-ತುಪ್ಪ ಹಾಕಿಸಿದರು. ಹಾಲುಣಿಸಿದ ಅವ್ವನಿಗೆ ಅಷ್ಟೆ ಮಾಡಲು ನಂಗೆ ಧಕ್ಕಿದ್ದು! "ನಾರಾಯಣ ಅನ್ನು, ಸ್ವರ್ಗಕ್ಕೇ ಹೋಗಿ ಅನ್ನು..." ಯಾರೋ ಹೇಳುತ್ತಿದ್ದರು. (ಉಳಿದಂತೆ ಆದರೆ, ಸ್ವರ್ಗ ನರಕವನ್ನು ಯಾರು ಕಂಡಿದ್ದೀರಿ ಎಂಬ ವಾದಕ್ಕೆ ನಿಲ್ಲುತ್ತಿದ್ದೆನೋ ಏನೋ) ನಾನೆಲ್ಲಿ ಕುಸಿಯುತ್ತೇನೋ ಎಂದು ನನ್ನನ್ನೇ ಗಮನಿಸುತ್ತಾ ನನ್ನಿಬ್ಬರು ಅಕ್ಕಂದಿರು ಕಾವಲು ಕಾಯುವಂತೆ ನಿಂತಿದ್ದರು. (ಧೈರ್ಯವಾಗಿರು... ಅಳಬೇಡ, ಅಳಬಾರದು. ನೀನು ಅತ್ತರೆ ಅಮ್ಮನ ಆತ್ಮ ಕಷ್ಟಪಡುತ್ತದೆ. ಧೈರ್ಯವಾಗಿ ಹೋಗಿ ಬಾ...) ಗೆಳತಿ ನಯನ ಹೇಳಿದ ಸಮಾಧಾನದ ಮಾತುಗಳು ಕಿವಿಯಲ್ಲಿ ಮೊರೆಯುತ್ತಿತ್ತು. ಅಳಬಾರದು, ಕಣ್ಣೀರು ನೆಲಕ್ಕೆ ಉರುಳಬಾರದು ಅನ್ನುತ್ತಿದ್ದರು ಒಬ್ಬ ಚಿಕ್ಕಪ್ಪ. ಕಣ್ಣಿಂದ ನಿಯಂತ್ರಣವಿಲ್ಲದಂತೆ ಸುರಿಯುತ್ತದ್ದ ಹನಿಗಳು ನೆಲಕ್ಕೆ ಬಿದ್ದವೋ, ತೋಟದಲ್ಲಿ ಬೆಳೆದಿದ್ದ ಹುಲ್ಲಿನ ಮೇಲೆ ಜಾರಿದವೋ, ಇಲ್ಲ ತೊಟ್ಟಿದ್ದ ಉಡುಪಿನಲ್ಲಿ ಲೀನವಾದವೋ ಗಮನಿಸುವ ವ್ಯವಧಾನ ಯಾರಿಗಿತ್ತು?

ಎಲ್ಲ ಶುದ್ಧವಾಗಬೇಕು. ಯಾರು ಮನೆಗೆ ಹತ್ತಬೇಡಿ. ಪುಣ್ಯಾರ್ಚನೆಯಾಗಬೇಕು. 'ತಿಳಿದವರು' ಆದೇಶಿಸುತ್ತಿದ್ದರು. ಛೇ, ಇಷ್ಟು ದಿನಒಟ್ಟಿಗೆ ಇದ್ದ ಅಮ್ಮನ ಕೆಲಸವೂ ಅಶುದ್ಧವೇ? ಮನದೊಳಗೆ ಹೇಳಲಾಗದ, ಕೇಳಲಾಗದ, ಗೊಂದಲ, ತಳಮಳ. ಸ್ಪ್ರಿಂಕ್ಲರ್ ಜೆಟ್ಟಿಗೆ ಅಣ್ಣ ಪೈಪ್ ಸಿಕ್ಕಿಸಿದ್ದ. ಎಲ್ಲರಂತೆ ನಾನು ಪೈಪಿನಲ್ಲಿ ಸುರಿಯುತ್ತಿದ್ದ ತಣ್ಣೀರಿಗೆ ತಲೆ ಒಡ್ಡಿದೆ. ನೀವು ಮಕ್ಕಳೆಲ್ಲ ಈ ಸೊಪ್ಪು ಹಾಕಿ ಸ್ನಾನ ಮಾಡಬೇಕು. ಅತ್ತೆಯೊಬ್ಬರು ಸೂಚಿಸಿದರು. ಯಾರು ಏನೇ ಹೇಳಿದರೂ ಯಂತ್ರದಂತೆ ಮಾಡುತ್ತಿದ್ದೆ. ಅವ್ವ ಇದ್ದಿದ್ದರೆ ತಣ್ಣೀರು ಮೀಯಬೇಡ, ಶೀತವಾಗುತ್ತದೆ ಅನ್ನತ್ತಿದ್ದರು. ಅವ್ವನಿಗಾಗಿ ತಣ್ಣೀರು ಮೀಯಲೇ ಬೇಕು, ಇದು ನನ್ನ ಹಠ. ಗೊತ್ತಿಲ್ಲದಂತೆ 'ನಾರಾಯಣ, ಸ್ವರ್ಗಕ್ಕೇ ಹೋಗಿ' ಶಬ್ದಗಳು ಮನದೊಳಗೆ ರಿಪೀಟ್ ಆಗುತ್ತಿದ್ದವು.
******
ಅಂಗಳದ ತುಂಬ ಶಾಮಿಯಾನ. ಮನೆಯೊಳಗೆ, ಜಗಲಿಯಲ್ಲಿ ಕೊಟ್ಟಿಗೆಯಲ್ಲಿ ಮನೆಯಿಂದ ಮಾರ್ಗದ ತನಕ ಎಲ್ಲೆಲ್ಲೂ ನೆಂಟರಿಷ್ಟರು, ನೆರೆಹೊರೆಯವರು, ಗೊತ್ತಿದ್ದವರು, ಇಲ್ಲದವರು ಜನವೋಜನ. ಭಾವಂದಿರು, ಮಾವಂದಿರು, ಇತರರು ಸುಧಾರಣೆಯ ಜವಾಬ್ದಾರಿಯಿಂದ ಅತ್ತಿತ್ತ ಓಡಾಡುತ್ತಿದ್ದಾರೆ. ಅಂಗಳದ ತುದಿಯಲ್ಲಿ ಅಡುಗೆ ಸಿದ್ಧವಾಗುತ್ತಿದೆ. ಬಂದವರೆಲ್ಲ, ಅವಳೆಲ್ಲಿ, ಕೊನೆಯವಳು ಎನ್ನುತ್ತಾ ನನ್ನನ್ನು ಸಂತೈಸಲು ಹುಡುಕುತ್ತಿದ್ದರು.

ಅಂದು ಹನ್ನೊಂದು. ದುಖದ ಜತೆಗೆ ಜ್ವರ, ಕೆಮ್ಮು ನೆಗಡಿ, ತಲೆನೋವು ಸೇರಿತ್ತು. ತಲೆಎತ್ತಲಾಗುತ್ತಿಲ್ಲ. ಯಾರನ್ನೂ ನೋಡೋದು ಬೇಡ, ಮಾತಾಡೋದು ಬೇಡ ಅನ್ನಿಸುತ್ತಿತ್ತು. ಹಾಗೆ ಮಾಡಲಾಗುತ್ತಾ? ಮಾತಿಗಿಂತ ಮೊದಲೇ ದುಃಖ ಉಮ್ಮಳಿಸುತ್ತಿತ್ತು. ಅಕ್ಕನ ಮಕ್ಕಳೆಲ್ಲ ಅನಾರೋಗ್ಯ ಪೀಡಿತ ಚಿಕ್ಕಮ್ಮನ ಸೇವೆಗೆ ಟೊಂಕ ಕಟ್ಟಿ ಸುತ್ತುವರಿದಿದ್ದರು. ಎಲ್ಲೆಲ್ಲೂ ಜನ ಗಿಜಿಗಿಜಿ, ಓಡಾಟ, ಕಾರ್ಯಕ್ರಮಗಳು, ಹಾಗಲ್ಲ ಹೀಗೆ ಎಂಬ ಚರ್ಚೆ, ಇದಾದ ಮೇಲೆ ಅದು, ಅದಾದಮೇಲೆ ಇದು ಎಂಬ ಸಮಜಾಯಿಷಿ, ವಾದ್ಯ-ಬ್ಯಾಂಡು.... ಇವೆಲ್ಲ ಇದ್ದರೂ ನಂಗ್ಯಾಕೋ ಅವ್ವನಿಲ್ಲದ ನಮ್ಮ ಮನೆಯ ಮೊದಲ (ಅವರದ್ದೇ)ಕಾರ್ಯಕ್ರಮ ಖಾಲಿಖಾಲಿ... ಈ ಹಿಂದೆ ನಡೆದ ನಾಲ್ಕು ಮದುವೆಗಳು, ಗೃಹ ಪ್ರವೇಶ, ಸೀಮಂತಗಳು, ಪೂಜೆ. ಭೂತದ ಹರಿಕೆ, ಕೋಲ, ಮಗುವಿನ ನಾಮಕರಣ ಎಲ್ಲ ಕಾರ್ಯಕ್ಕೂ ಅವ್ವನ ನೇತೃತ್ವ. ಎಲ್ಲೆಲ್ಲೂ ಅವ್ವ.

ನಾವು ನಾಲ್ಕು ಹೆಣ್ಣು ಮತ್ತು ಒಂದು ಗಂಡು- ಹೀಗೆ ಐದುಮಕ್ಕಳು. ಏಕೈಕ ಪುತ್ರನೆಂಬ ಕಾರಣಕ್ಕೆ ಅಣ್ಣನ ಮೇಲೆ ಅವರಿಗೆ ಅದೆಂಥಾ ಪ್ರೀತಿ- ಅಕ್ಕರೆ ಅಂದರೆ, ಅದಕ್ಕೆ ನಾನಿಲ್ಲಿ ಯಾವಪದ ಬಳಸಿದರೂ ಸಮವಾಗದು. ಅವನಿಗೆ ಕುಂಬಳಕಾಯಿ ಕಡಿಯೋ ಮಗನೆಂದು ನಾವು ಛೇಡಿಸುತ್ತಿದ್ದೆವು. ಆದರೆ, ಆ ಕುಂಬಳ ಕಾಯಿ ಕಡಿವ, ಮನೆಯೆ ಮೆಟ್ಟಿಲಿನೆದುರು ಮೊಣಕಾಲೂರಿ ಕೂದಲು ತೆಗೆಸುವ, ಒಂಟಿಕಾಲಲ್ಲಿ ನಿಂತು ಪ್ರಾರ್ಥಿಸುವ ಶಾಸ್ತ್ರದ ಘಳಿಗೆಗಳು..... ಅಬ್ಬಾ ಅದೆಷ್ಟು ಕ್ರೂರ!

ಅವ್ವನ ಹೆಸರಲ್ಲೇ ಅವರಿಗಿಷ್ಟದ ಅಡುಗೆ ಸುಮಾರು ಸಾವಿರ ಮಂದಿಗೆ ಸಿದ್ದವಾಗಿತ್ತು. ಇವುಗಳನ್ನೆಲ್ಲ ಅವರ ಸಮಾಧಿಯ ಬಳಿಗೊಯ್ದು ಬಡಿಸಿದೆವು. ಈ ತಿಂಡಿ ಪದಾರ್ಥಗಳನ್ನೆಲ್ಲ ಗೆರಟೆ(ತೆಂಗಿನಕಾಯಿ ಚಿಪ್ಪು)ಯಲ್ಲಿಡಬೇಕಂತೆ. ಅಪ್ಪನಿಗೆ ಗೊತ್ತಿಲ್ಲದೆ(ಬಯ್ಗುಳಕ್ಕೆ ಹೆದರಿ), ಕದ್ದು ಮುಚ್ಚಿ, ಹೊಟ್ಟೆಬಾಯಿ ಕಟ್ಟಿ ಮನೆತುಂಬ ಪಾತ್ರೆ ಪಗಡಿಗಳನ್ನು ತುಂಬಿಸಿದ್ದ ಅವ್ವನಿಗೆ ಗೆರಟೆಯಲ್ಲಿ ಬಡಿಸುವುದನ್ನು ಹೇಗೆ ಸಹಿಸಿಕೊಳ್ಳಬೇಕು? ಇದನ್ನೆಲ್ಲ ಕಂಡಾಗ, ಆ ಪರಿಸ್ಥಿತಿಯಲ್ಲೂ ಈ ಪದ್ದತಿಗಳಿಗೆಲ್ಲ ತಿದ್ದುಪಡಿ ಮಾಡಬೇಕನ್ನಿಸುತ್ತಿತ್ತು.

ಎಲ್ಲಾ ಶಾಸ್ತ್ರವನ್ನೂ ಪಾಸಕ್ಕೆ ನಿಂತಿದ್ದ ಅಣ್ಣನ ಕೈಯಲ್ಲೇ ಮಾಡಿಸುತ್ತಿದ್ದರು, ಕೊನೆಗೆ ಸ್ವರ್ಗಕ್ಕೆ ಸಂದಿಸುವಾಗ ತಂಗಿಯನ್ನೂ ಸೇರಿಸಿಕೊ ಎಂಬ ಸಲಹೆ ಬಂತು. ತಲೆಮೇಲೆ ಕೈ ಇರಿಸಿ, ಮೊಣಕಾಲೂರಿ, ಅವ್ವಾ..... ಸ್ವರ್ಗಕ್ಕೇ ಹೋಗಿರೆಂಬ ಮೊರೆ ಇರಿಸಿದೆ. ಅಲ್ಲೇ ಕುಳಿತಿರೋಣ ಏಳುವುದೇ ಬೇಡ ಎಂಬ ಮನಸ್ಥಿತಿ. ಯಾರೋ ರಟ್ಟೆಹಿಡಿದು ಎತ್ತಿದರು. ಸ್ವರ್ಗ ನರಕ ಇದೆಯೋ ಇಲ್ಲವೋ ನಂಗೊತ್ತಿಲ್ಲ. ಉಸಿರು ನಿಂತಮೇಲೆ ಎಲ್ಲಿ ಹೋಗಿದ್ದೀರೆಂದು ತಿಳಿದೂ ಇಲ್ಲ. ಅವ್ವಾ... ನೀವೆಲ್ಲೇ ಹೋಗಿ, ಎಲ್ಲೇ ಇರಿ, ನೆಮ್ಮದಿಯಿಂದ, ಶಾಂತಿಯಿಂದ ಇರಿ ಎಂದು ಮಾತ್ರ ನಾನು ಪ್ರಾರ್ಥಿಸಬಲ್ಲೆ. ಮತ್ತು ಅನುದಿನವೂ ನಾನೀಗ ಅದನ್ನೇ ಮಾಡುತ್ತಿದ್ದೇನೆ.

****

ಮರೆಯಲಾಗದ್ದು: 2007ರ ಜುಲೈ 30ರಂದು ಅಮ್ಮನಿಗೆ ಹೃದಯಾಘಾತವಾಗಿತ್ತು. 'ಸೀರಿಯಸ್' ಎಂಬುದಾಗಿ ಅಣ್ಣನ ಫೋನ್ ಬಂದಾಗ ಏನುಮಾಡಬೇಕೆಂದು ತಿಳಿಯದೆ ಕುಸಿದಿದ್ದೆ. ಕಚೇರಿಯಲ್ಲಿದ್ದ ನನ್ನೆಲ್ಲಾ ಸಹೋದ್ಯೋಗಿಗಳು ನಂಗೆ ಸಹಾಯ ಹಸ್ತ ಚಾಚಿದ್ದರು. ಬಳಿಕ ಪರ್ವಾಗಿಲ್ಲ ಚೇತರಿಸಿಕೊಂಡರು ಎಂಬ ಸುದ್ದಿ ತಿಳಿದ ಮೇಲೆ ನಾನೂ ಇಲ್ಲಿ ಚೇತರಿಸಿಕೊಂಡಿದ್ದೆನಾದರೂ ತಕ್ಷಣ ಊರಿಗೆ ತೆರಳಿದ್ದೆ. ಆಸ್ಪತ್ರೆವಾಸಿಯಾಗಿದ್ದ ಅವರ ಬೇಕುಬೇಡಗಳನ್ನು ಗಮನಿಸಿಕೊಳ್ಳುತ್ತಾ ಸುಮಾರು 14 ದಿನಗಳಕಾಲ ಅವರೊಂದಿಗಿದ್ದೆ. ರಜೆಯ ಬರಗಾಲದ ಕಚೇರಿ ನಮ್ಮದು. ಅಂತಹ ಕೆಲಸದೊತ್ತಡದ ಸಂದರ್ಭದಲ್ಲೂ, ಪರಿಸ್ಥಿತಿ ಅರ್ಥಮಾಡಿಕೊಂಡ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಸೌಮ್ಯ ಮತ್ತು ನನ್ನ ಐಆರ್‌ಎ ಬೆನ್ನಿ ನಂಗೆ ಅಮ್ಮನೊಡನಿರಲು ಅವಕಾಶ ಕಲ್ಪಿಸಿದ್ದರು. ಆ ಹದಿನೆಂಟು ದಿನಗಳು ಮಾತ್ರ ನಾನು ಕೊನೆಯದಾಗಿ ಅಮ್ಮನೊಂದಿಗೆ ಹೆಚ್ಚುಕಾಲವಿದ್ದದ್ದು.

ಆ ಸಂದರ್ಭದಲ್ಲಿ ಹೆಚ್ಚೆಂದರೆ 15ದಿನವೆಂದು ವೈದ್ಯರು ಗಡುವು ನೀಡಿದ್ದರು. ಆ ಗಡು ದಾಟಿತು. ಅವರು ಬದುಕುಳಿದರೂ ನೀವು ಅವರ ಸರಾಗ ಉಸಿರಾಟಕ್ಕೆ ದಿನನಿತ್ಯ ಆಕ್ಸಿಜನ್ ನೀಡಬೇಕು, ಆಕ್ಸಿಜನ್ ಡಬ್ಬ ಖರೀದಿಸಿ ಎಂದಿದ್ದರು ವೈದ್ಯರು. ಆದರೆ ವೈದ್ಯರಿಗೆ ಸಡ್ಡು ಹೊಡೆಯುವಂತೆ ಅಮ್ಮ ಚೇತರಿಸಿಕೊಂಡದ್ದೊಂದು ಪವಾಡ. (ಸಹೋದ್ಯೋಗಿಗಳು, ಹಿತೈಷಿಗಳ ಹಾರೈಕೆ, ಪ್ರಾರ್ಥನೆಯ ಫಲವಿರಬುಹುದು) ಚಿಕ್ಕಪುಟ್ಟ ಕೆಲಸಗಳನ್ನು ಮಾಡುವಷ್ಟು ಆರೋಗ್ಯವಂತರಾಗಿದ್ದ ಅವ್ವ, ಮತ್ತೆ ಕಾರುಬಾರಕ್ಕಿಳಿಯುವ ಉತ್ಸಾಹಕ್ಕೆ ಮರಳಿದ್ದರು. ಅಡಿಕೆ ಸುಲಿಯಲು ಹೋಗಿ ಅಣ್ಣನ ಕೈಯಲ್ಲಿ ಬಯ್ಗಳು ತಿಂದದ್ದೂ ಉಂಟು.

ಇದಾದ ಬಳಿಕ ಎರಡು ಮೂರು ಬಾರಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮತ್ತೆ ಆಸ್ಪತ್ರೆ-ಮನೆ ಹೀಗೆ.... ಸಾಗಿತ್ತು. ಇಂತಹ ಕಣ್ಣುಮುಚ್ಚಾಲೆಯಾಟ ಬಹುಶಃ ಮಾನಸಿಕ ಸಿದ್ಧತೆಗೆ ಅಮ್ಮ ನಮಗೆ ನೀಡಿದ ಸೂಚನೆ ಇರಬೇಕು. ದೇವ್ರೇ... ಆಟಿ(ಮಳೆಗಾಲ)ತಿಂಗಳಲ್ಲಿ ಏನಾದರೂ ಆದರೆ ಏನು ಗತಿ ಎಂಬುದು ನಮ್ಮೆಲ್ಲರ ಚಿಂತೆಯಾಗಿತ್ತು. ಆದರೆ ಇದಕ್ಕೆಲ್ಲ ವ್ಯತಿರಿಕ್ತ ಎಂಬಂತೆ ಮೊನ್ನೆ ಜನವರಿ 31ರಂದು ಇದ್ದಕ್ಕಿದ್ದಂತೆ ಎದ್ದು ಹೋದಂತೆ ನಮ್ಮೆಲ್ಲರನ್ನೂ ಅಗಲಿ ಹೋಗೇ ಬಿಟ್ಟರು. ಅದೂ ಶನಿವಾರ ಅಪರಾಹ್ನ. ಯಾರಿಗೂ ರಜೆಗೆ ತೊಂದರೆಯಾಗಬಾರದು ಎಂದು ಗ್ರಹಿಸಿದ್ದರೋ....